ಚಾವಕ್ಕಾಡ್: ಅನಾರೋಗ್ಯದಿಂದ ಬಳಲುತ್ತಿದ್ದ ಮಗನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ತನ್ನ ಬಳಿಯಿದ್ದ ಚಿನ್ನದ ಉಂಗುರವನ್ನು ಮಾರಾಟ ಮಾಡುವುದನ್ನು ಬಿಟ್ಟು ಈ ಮಹಾತಾಯಿಗೆ ಬೇರೆ ದಾರಿ ಕಾಣಲಿಲ್ಲ. ಅದನ್ನು ಮಾರಾಟ ಮಾಡಲು ಹೋದ ತಾಯಿಗೆ ಒಂದು ಸಂಕಷ್ಟು ಎದುರಾಯಿತು. ದುರಾದೃಷ್ಟವಶಾತ್ ಚಿನ್ನದ ಉಂಗುರ ಅನಿರೀಕ್ಷಿತವಾಗಿ ಚರಂಡಿಯೊಳಗೆ ಬಿದ್ದು ಹೋಯಿತು. ಮುಂದೇನು ಮಾಡುವುದು ಅಂತಾ ಯೋಚಿಸುವಾಗ ಅದೃಷ್ಟವಶಾತ್ ದೇವರ ರೂಪದಲ್ಲಿ ಬಂದಿದ್ದೇ ಮಹಿಳಾ ಪೊಲೀಸ್ ಅಧಿಕಾರಿ.
ತಿರುವಥ್ರ ನಿವಾಸಿ ಹಸೀನಾ ತನ್ನ ಅರ್ಧ ಸವರನ್ ಚಿನ್ನದ ಉಂಗುರವನ್ನು ಮಾರಾಟ ಮಾಡಲು ಚಾವಕ್ಕಾಡ್ಗೆ ಬಂದಿರುತ್ತಾರೆ. ತರಾತುರಿಯಲ್ಲಿ ನಡೆಯಬೇಕಾದರೆ ಆಕಸ್ಮಿಕವಾಗಿ ಹಸೀನಾ ಕೈಯಲ್ಲಿದ್ದ ಚಿನ್ನದ ಉಂಗುರ ಜಾರಿ ಕಾಂಕ್ರಿಟ್ ಸ್ಲ್ಯಾಬ್ ನಡುವೆ ತೂರಿ ಹೋಗಿ ಚರಂಡಿಗೆ ಬೀಳುತ್ತದೆ. ಅದನ್ನು ಮರಳಿ ಪಡೆಯಲು ಹಸೀನಾ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ಏನು ಮಾಡುವುದು ಯೋಚಿಸುತ್ತಿರುವಾಗಲೇ ಹಸೀನಾಗೆ ಥಟ್ಟನೇ ನೆನಪಾಗುವುದು ಪೊಲೀಸ್ ಠಾಣೆ. ತಕ್ಷಣ ಅವರು ಚಾವಕ್ಕಾಡ್ ಪೊಲೀಸ್ ಠಾಣೆಗೆ ಕಣ್ಣೀರಿಡುತ್ತಾ ಬರುತ್ತಾರೆ.
ಈ ವೇಳೆ ರಾಣೆಯ ಪೊಲೀಸ್ ಅಧಿಕಾರಿ ಸೌದಮಣಿ, ಹಸೀನಾ ಅಳಲನ್ನು ಕೇಳಿ ಅವರಿಗೆ ಸಮಾಧಾನ ಮಾಡಿ ಸಹಾಯ ಮಾಡಲು ಮುಂದಾಗುತ್ತಾರೆ. ಹಸೀನಾರನ್ನು ಕರೆದುಕೊಂಡು ಉಂಗುರ ಕಳೆದುಕೊಂಡ ಸ್ಥಳಕ್ಕೆ ತೆರಳುತ್ತಾರೆ. ಬಳಿಕ ಒಂದು ಜೆಸಿಬಿಯನ್ನು ತರಿಸಿ, ಕಾಂಕ್ರಿಟ್ ಸ್ಲ್ಯಾಬ್ಗಳನ್ನು ತೆಗೆಸಿ, ಚರಂಡಿಯಲ್ಲಿದ್ದ ಕೊಳಕನ್ನು ಹೊರ ತೆಗೆಸುತ್ತಾರೆ. ಬಳಿಕ ಕೊಳಕಿನಲ್ಲಿ ಹುಡುಕಾಡಿದಾಗ ಚಿನ್ನದ ಉಂಗುರ ಪತ್ತೆಯಾಗುತ್ತದೆ. ಅಷ್ಟರಲ್ಲಿ ಹಸೀನಾ ಕೂಡ ನಿಟ್ಟುಸಿರು ಬಿಡುತ್ತಾ ಪೊಲೀಸ್ ಅಧಿಕಾರಿ ಸೌದ ಮಣಿ ಅವರಿಗೆ ಧನ್ಯವಾದ ತಿಳಿಸುತ್ತಾರೆ.
ಸರಿಯಾದ ಸಮಯಕ್ಕೆ ಮಹಿಳೆಗೆ ಕಷ್ಟಕ್ಕೆ ಸ್ಪಂದಿಸಿದ ಸೌದ ಮಣಿ ಅವರಿಗೆ ಸಾರ್ವಜನಿಕರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸ್ಟೋರಿಯನ್ನು ಫೇಸ್ಬುಕ್ಗಳಲ್ಲಿ ಬರೆದುಕೊಂಡು ಸೌದ ಮಣಿ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)
ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆ ಕೇಸ್: ಪೊಲೀಸ್ ತನಿಖೆಯಲ್ಲಿ ಅಸಲಿಯತ್ತು ಬಯಲು..!
ಲವರ್ ಜತೆ ಸೇರಿ ಗಂಡನ ಕೊಲೆ: ಕೆಮಿಕಲ್ನಿಂದ ಮೃತದೇಹ ಕರಗಿಸಲು ಹೋದ ಪತ್ನಿಗೆ ಕಾದಿತ್ತು ಶಾಕ್!
ಶರೀರದಲ್ಲಿ ಕೆಟ್ಟ ಕೊಬ್ಬಿನಾಂಶ ಕರಗಿಸಿ ಆರೋಗ್ಯ ಕಾಪಾಡುವಲ್ಲಿ ಧಾನ್ಯಗಳ ಪಾತ್ರ ತುಂಬಾ ಮಹತ್ವದ್ದು