ಕೊಟ್ಟಾಯಂ: ದೈತ್ಯ ಗಾತ್ರದ ಕಾಳಿಂಗ ಸರ್ಪವೊಂದು ಕುಟುಂಬಕ್ಕೆ ಗೊತ್ತಿಲ್ಲದೆಯೇ ಬರೋಬ್ಬರಿ ಒಂದು ತಿಂಗಳ ಕಾಲ ಕಾರಿನಲ್ಲಿ ಪ್ರಯಾಣಿಸಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.
ಕಾರಿನಲ್ಲಿ ಕಾಳಿಂಗ ಸರ್ಪ ಇರುವುದು ಗೊತ್ತಿಲ್ಲದೆ, ಕೇರಳದ ಅರ್ಪುಕರ ಸುಜಿತ್ ಕುಟುಂಬ ಒಂದು ತಿಂಗಳ ಕಾಲ ಕಾರಿನಲ್ಲಿ ಪ್ರಯಾಣ ಬೆಳೆಸಿದೆ. ನೀಲಂಬುರ್ ಅರಣ್ಯ ಪ್ರದೇಶದಿಂದ ಬಂದ ಅಪರೂಪದ ಅತಿಥಿ ಒಂದು ತಿಂಗಳ ಕಾಲ ಕಾರಿನಲ್ಲೇ ಬೆಚ್ಚಗೆ ವಾಸ್ತವ್ಯ ಹೂಡಿತ್ತು.
ಒಂದು ತಿಂಗಳ ಹಿಂದೆ ಸುಜಿತ್ ಮತ್ತು ಆತನ ಸ್ನೇಹಿತರು ನೀಲಂಬುರ್ಗೆ ಕೆಲಸದ ನಿಮಿತ್ತ ತೆರಳಿದ್ದರು. ಅರಣ್ಯ ಪ್ರದೇಶಕ್ಕೆ ಸಮೀಪ ಇರುವ ಪ್ರದೇಶದಲ್ಲಿ ಕೆಲಸ ಇತ್ತು. ಕೆಲಸ ಮುಗಿಸಿಕೊಂಡು ಕಾರಿನ ಬಳಿ ಬರುವಾಗ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ತದನಂತದರಲ್ಲಿ ಕಾಳಿಂಗ ಸರ್ಪ ಕಾಣೆಯಾಗಿತ್ತು. ಕಾರಿಗೆ ಹಾವು ನುಗ್ಗಿದೆಯೇ ಎಂದು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಸುಜಿತ್ ಮನೆಗೆ ಹಿಂತಿರುಗಿದರು.
ಒಂದು ವಾರದ ಹಿಂದೆ ಸುಜಿತ್ ಕಾರನ್ನು ಶುಚಿಗೊಳಿಸುವಾಗ ಒಳಗೆ ಕಾರಿನ ಚರ್ಮವನ್ನು ನೋಡಿದ್ದರು. ಇನ್ನು ಕಾರಿನಲ್ಲಿ ಹಾವು ಇದ್ದ ಕಾರಣ ಸುಜಿತ್, ಉರಗ ರಕ್ಷಕ ವಾವ ಸುರೇಶ್ ಅವರ ಸಹಾಯ ಕೇಳಿದರು. ಸ್ಥಳಕ್ಕೆ ಆಗಮಿಸಿ ವಾವಾ ಸುರೇಶ್, ಪರಿಶೀಲನೆ ನಡೆಸಿದಾಗ ಸಮೀಪದಲ್ಲಿ ಕಂಡ ಹಾವಿನ ಹಿಕ್ಕೆ ಕೇವಲ ಒಂದು ಗಂಟೆ ಹಳೆಯದಾಗಿದೆ ಎಂದು ತಿಳಿಸಿದರು. ಆದರೆ ಗಂಟೆಗಟ್ಟಲೆ ಪರಿಶೀಲನೆ ನಡೆಸಿದರೂ ಹಾವು ಪತ್ತೆಯಾಗಲಿಲ್ಲ
ಕೊನೆಗೆ ಒಂದು ತಿಂಗಳ ಬಳಿಕ ಮನೆಯ ಸಮೀಪವೇ ಹಾವಿನ ಬಾಲ ಇರುವುದು ಗಮನಕ್ಕೆ ಬಂತು. ಬಳಿಕ ಬಲೆಯಿಂದ ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಬಳಿಕ ಅರಣ್ಯ ಇಲಾಖೆಯ ಹಾವು ಹಿಡಿಯುವವರಾದ ಅಭಿಷೇಕ ಆಗಮಿಸಿ ಹಾವನ್ನು ಹಿಡಿದು, ಸುಜಿತ್ ಹಾಗೂ ಸ್ಥಳೀಯರು ನಿಟ್ಟುಸಿರು ಬಿಡುವಂತೆ ಮಾಡಿದರು. (ಏಜೆನ್ಸೀಸ್)
ಕುತೂಹಲಕ್ಕೆ ತೆರೆ ಎಳೆದ ನಟಿ ರಮ್ಯಾ: ಮತ್ತೆ ಸಿನಿಮಾಗೆ ಎಂಟ್ರಿ ಕೊಟ್ಟ ಮೋಹಕ ತಾರೆ, ಆದ್ರೆ ನಟಿಯಾಗಿ ಅಲ್ಲ
ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದ್ರೂ ಮಂಡ್ಯಕ್ಕೆ ಬಾರದ ಸಂಸದೆ ಸುಮಲತಾ ವಿರುದ್ಧ ಜನಾಕ್ರೋಶ