More

    ಪ್ರೇಯಸಿ ಕೋಣೆಗೆ ನುಗ್ಗಿದ ಪ್ರಿಯಕರ! ವರ್ಷದ ಹಿಂದಷ್ಟೇ ಆಗಿದ್ದ ಪರಿಚಯ ದುರಂತದಲ್ಲಿ ಅಂತ್ಯ

    ಕೊಚ್ಚಿ: ಯುವಕನೊಬ್ಬ ಡೆಂಟಲ್​ ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಚ್ಚಿಯಿಂದ ಸುಮಾರು 35 ಕಿಮೀ ದೂರದಲ್ಲಿರುವ ಕೋತಮಂಗಲಂ ಬಳಿಯ ನೆಲ್ಲಿಕುಳಿಯಲ್ಲಿ ನಡೆದಿದೆ. ಈ ಘಟನೆ ಕೇರಳದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಕ್ಲಬ್​ ಹೌಸ್​ನಂತಹ ಜಾಲತಾಣದಲ್ಲಿ ಯುವಕರು ಈ ಘಟನೆಯ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿದ್ದಾರೆ.

    ಮೃತಳನ್ನು ಮಾನಸ ಪಿ.ವಿ (24) ಎಂದು ಹಾಗೂ ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಾಖಿಲ್​ (32) ಎಂದು ಗುರುತಿಸಲಾಗಿದೆ. ಮಾನಸ ಕಣ್ಣೂರು ಮೂಲದವಳು. ಕೋತಮಂಗಲಂದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಡೆಂಟಲ್​ ಕೋರ್ಸ್​ ಮಾಡುತ್ತಿದ್ದಳು. ತನ್ನ ಫ್ರೆಂಡ್ಸ್​ ಜತೆ ಕೋತಮಂಗಲಂದ ನೆಲ್ಲಿಕುಳಿಯಲ್ಲಿ ರೂಮ್​ನಲ್ಲಿ ಉಳಿದುಕೊಂಡಿದ್ದಳು.

    ರಾಖಿಲ್​ ಕೂಡ ಕಣ್ಣೂರು ಮೂಲದವನೆ. ಇಬ್ಬರು ಕೂಡ ಸಾಮಾಜಿಕ ಜಾಲತಾಣ ಮೂಲಕ ವರ್ಷದ ಹಿಂದೆ ಪರಿಚಿತರಾಗಿದ್ದರು. ಇದಾದ ಬಳಿಕ ಇಬ್ಬರ ಸ್ನೇಹಿ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಆದರೆ, ಒಂದು ತಿಂಗಳ ಹಿಂದೆ ಮಾನಸ, ಲವ್​ ಬ್ರೇಕಪ್​ ಮಾಡಿಕೊಳ್ಳುವುದಾಗಿ ರಾಖಿಲ್​ ಬಳಿ ಹೇಳಿದ್ದಳಂತೆ. ಇದು ಆತನ ಕೋಪಕ್ಕೆ ಕಾರಣವಾಗಿ ಕಿರುಕುಳ ನೀಡಲು ಆರಂಭಿಸಿದ್ದ ಎಂದು ತಿಳಿದುಬಂದಿದೆ. ನನ್ನ ಪಾಡಿಗೆ ಬಿಟ್ಟುಬಿಡು ಎಂದು ಮಾನಸ, ರಾಖಿಲ್​ ಬಳಿ ಕೇಳಿಕೊಂಡಿದ್ದಳು.

    ಕೊನೆಗೆ ಆತನ ಕಿರುಕುಳ ತಾಳದೇ ಮಾನಸ, ಕಣ್ಣೂರು ಪೊಲೀಸ್​ ಠಾಣೆಗೆ ದೂರು ಸಹ ನೀಡಿದ್ದಳು. ಇದಾದ ಬಳಿಕ ರಾಖಿಲ್​ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಾಲಕರ ಮನವಿ ಮೇರೆಗೆ ಆತನಿಗೆ ಎಚ್ಚರಿಕೆಯನ್ನು ನೀಡಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ರಾಖಿಲ್​, ಮಾನಸಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ.

    ರಾಖಿಲ್​ ತನ್ನ ಪ್ಲಾನ್​ನಂತೆ ಶುಕ್ರವಾರ ಮಧ್ಯಾಹ್ನ ಮಾನಸ ರೂಮ್​ಗೆ ತೆರಳಿ, ಮಾನಸಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಆಕೆಯ ರೂಮ್​ಮೇಟ್​ಗಳು ಮಧ್ಯ ಪ್ರವೇಶಿಸಿದಾಗ ಗನ್​ ತೋರಿಸಿ, ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದಾದ ನಂತರ ಮಾನಸಳನ್ನು ಮತ್ತೊಂದು ಕೊಠಡಿಯಲ್ಲಿ ಲಾಕ್​ ಮಾಡಿಕೊಂಡಿದ್ದಾನೆ. ಬಳಿಕ ಮಾನಸಳ ಮೇಲೆ ಗುಂಡಿನ ದಾಳಿ ನಡೆಸಿ, ತಾನೂ ಗುಂಡು ಹಾರಿಕೊಂಡು ರಾಖಿಲ್​ ಪ್ರಾಣ ಬಿಟ್ಟಿದ್ದಾನೆ. (ಏಜೆನ್ಸೀಸ್​)

    ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್​ ಶಾಕ್​ ಕೊಟ್ಟ ನಟಿ

    ಫೇಸ್​ಬುಕ್​ ಪರಿಚಯ; ಉದ್ಯಮಿಯನ್ನು ಮನೆಗೆ ಆಹ್ವಾನಿಸಿದ ಮಹಿಳೆಯಿಂದ ನಡೆದಿತ್ತು ಭಾರೀ ಸಂಚು

    ಯಾರಾಗಲಿದ್ದಾರೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​? ಸಣ್ಣ ಸುಳಿವು ಕೊಟ್ರಾ ಕಾರ್ಯಕ್ರಮದ ನಿರ್ದೇಶಕರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts