ಕೊಚ್ಚಿ: ಯುವಕನೊಬ್ಬ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಚ್ಚಿಯಿಂದ ಸುಮಾರು 35 ಕಿಮೀ ದೂರದಲ್ಲಿರುವ ಕೋತಮಂಗಲಂ ಬಳಿಯ ನೆಲ್ಲಿಕುಳಿಯಲ್ಲಿ ನಡೆದಿದೆ. ಈ ಘಟನೆ ಕೇರಳದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಕ್ಲಬ್ ಹೌಸ್ನಂತಹ ಜಾಲತಾಣದಲ್ಲಿ ಯುವಕರು ಈ ಘಟನೆಯ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿದ್ದಾರೆ.
ಮೃತಳನ್ನು ಮಾನಸ ಪಿ.ವಿ (24) ಎಂದು ಹಾಗೂ ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಾಖಿಲ್ (32) ಎಂದು ಗುರುತಿಸಲಾಗಿದೆ. ಮಾನಸ ಕಣ್ಣೂರು ಮೂಲದವಳು. ಕೋತಮಂಗಲಂದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಅಂತಿಮ ವರ್ಷದ ಡೆಂಟಲ್ ಕೋರ್ಸ್ ಮಾಡುತ್ತಿದ್ದಳು. ತನ್ನ ಫ್ರೆಂಡ್ಸ್ ಜತೆ ಕೋತಮಂಗಲಂದ ನೆಲ್ಲಿಕುಳಿಯಲ್ಲಿ ರೂಮ್ನಲ್ಲಿ ಉಳಿದುಕೊಂಡಿದ್ದಳು.
ರಾಖಿಲ್ ಕೂಡ ಕಣ್ಣೂರು ಮೂಲದವನೆ. ಇಬ್ಬರು ಕೂಡ ಸಾಮಾಜಿಕ ಜಾಲತಾಣ ಮೂಲಕ ವರ್ಷದ ಹಿಂದೆ ಪರಿಚಿತರಾಗಿದ್ದರು. ಇದಾದ ಬಳಿಕ ಇಬ್ಬರ ಸ್ನೇಹಿ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಆದರೆ, ಒಂದು ತಿಂಗಳ ಹಿಂದೆ ಮಾನಸ, ಲವ್ ಬ್ರೇಕಪ್ ಮಾಡಿಕೊಳ್ಳುವುದಾಗಿ ರಾಖಿಲ್ ಬಳಿ ಹೇಳಿದ್ದಳಂತೆ. ಇದು ಆತನ ಕೋಪಕ್ಕೆ ಕಾರಣವಾಗಿ ಕಿರುಕುಳ ನೀಡಲು ಆರಂಭಿಸಿದ್ದ ಎಂದು ತಿಳಿದುಬಂದಿದೆ. ನನ್ನ ಪಾಡಿಗೆ ಬಿಟ್ಟುಬಿಡು ಎಂದು ಮಾನಸ, ರಾಖಿಲ್ ಬಳಿ ಕೇಳಿಕೊಂಡಿದ್ದಳು.
ಕೊನೆಗೆ ಆತನ ಕಿರುಕುಳ ತಾಳದೇ ಮಾನಸ, ಕಣ್ಣೂರು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳು. ಇದಾದ ಬಳಿಕ ರಾಖಿಲ್ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಾಲಕರ ಮನವಿ ಮೇರೆಗೆ ಆತನಿಗೆ ಎಚ್ಚರಿಕೆಯನ್ನು ನೀಡಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ರಾಖಿಲ್, ಮಾನಸಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ.
ರಾಖಿಲ್ ತನ್ನ ಪ್ಲಾನ್ನಂತೆ ಶುಕ್ರವಾರ ಮಧ್ಯಾಹ್ನ ಮಾನಸ ರೂಮ್ಗೆ ತೆರಳಿ, ಮಾನಸಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಆಕೆಯ ರೂಮ್ಮೇಟ್ಗಳು ಮಧ್ಯ ಪ್ರವೇಶಿಸಿದಾಗ ಗನ್ ತೋರಿಸಿ, ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದಾದ ನಂತರ ಮಾನಸಳನ್ನು ಮತ್ತೊಂದು ಕೊಠಡಿಯಲ್ಲಿ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಮಾನಸಳ ಮೇಲೆ ಗುಂಡಿನ ದಾಳಿ ನಡೆಸಿ, ತಾನೂ ಗುಂಡು ಹಾರಿಕೊಂಡು ರಾಖಿಲ್ ಪ್ರಾಣ ಬಿಟ್ಟಿದ್ದಾನೆ. (ಏಜೆನ್ಸೀಸ್)
ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್ ಶಾಕ್ ಕೊಟ್ಟ ನಟಿ
ಫೇಸ್ಬುಕ್ ಪರಿಚಯ; ಉದ್ಯಮಿಯನ್ನು ಮನೆಗೆ ಆಹ್ವಾನಿಸಿದ ಮಹಿಳೆಯಿಂದ ನಡೆದಿತ್ತು ಭಾರೀ ಸಂಚು
ಯಾರಾಗಲಿದ್ದಾರೆ ಬಿಗ್ಬಾಸ್ ಸೀಸನ್ 8ರ ವಿನ್ನರ್? ಸಣ್ಣ ಸುಳಿವು ಕೊಟ್ರಾ ಕಾರ್ಯಕ್ರಮದ ನಿರ್ದೇಶಕರು?