More

    ಟೀಮ್​ ಇಂಡಿಯಾ ವಿರುದ್ಧ ಸರಣಿ ಗೆಲುವು: ಜೈ ಶ್ರೀರಾಮ್​ ಎಂದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ ಆಟಗಾರ!

    ನವದೆಹಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್​ವಾಶ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದ ಪ್ರವಾಸಿ ಟೀಮ್​ ಇಂಡಿಯಾಗೆ ಈ ಟೂರ್ನಿ ಒಂದು ನೋವಿನ ಅನುಭವವಾಗಿದೆ. ಇನ್ನೊಂದೆಡೆ ಈ ಟೂರ್ನಿಯಿಂದ ಆಫ್ರಿಕಾ ತಂಡದಲ್ಲಿ ಕೇಶವ್​ ಮಹಾರಾಜ್​, ಮಾರ್ಕೋ ಜನಸೇನ್​ ಹೆಸರು ದೊಡ್ಡದಾಗಿ ಕೇಳಿಬರುತ್ತಿದೆ.

    ಈಗಾಗಲೇ ಹಶೀಮ್​ ಆಮ್ಲ, ಎಬಿ ಡಿವಿಲಿಯರ್ಸ್​, ಫಾಫ್​ ಡುಪ್ಲೆಸಿಸ್​ ಮತ್ತು ಡೇಲ್ ​ಸ್ಟೇನ್​ನಂತಹ ಅಗ್ರಗಣ್ಯ ಆಟಗಾರರು ವಿದಾಯ ಹೇಳಿರುವುದು ಆಫ್ರಿಕಾ ತಂಡಕ್ಕೆ ಭಾರೀ ನಷ್ಟವಾಗಿದೆ. ಈ ಮಹಾನ್​ ಆಟಗಾರರ ಸ್ಥಾನವನ್ನು ಮುಂದೆ ಯಾರು ತುಂಬಲಿದ್ದಾರೆ ಎಂಬ ನೋವು ತಂಡವನ್ನು ಕಾಡುತ್ತಿತ್ತು​. ಆದರೆ, ಪ್ರವಾಸಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ನಿರ್ವಹಣೆ ತೋರಿದ ರೀತಿಯನ್ನು ನೋಡಿದರೆ ಇನ್ಮುಂದೆ ಆ ನೋವು ತಂಡಕ್ಕೆ ಕಾಡುವುದಿಲ್ಲ ಎಂಬ ಭರವಸೆ ದೊರೆತಿದೆ.

    ಅದರಲ್ಲೂ ಹೊಸ ಆಟಗಾರರಿಗೆ ಈ ಅದ್ಭುತ ಗೆಲುವು ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕಿದೆ. ಹೀಗಾಗಿ ಅನೇಕ ಆಟಗಾರರು ಈ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಸ್ಪಿನ್ನರ್​ ಕೇಶವ್​ ಮಹಾರಾಜ್​ ಸಂಭ್ರಮದ ಪೋಸ್ಟ್​ ಇದೀಗ ಎಲ್ಲರ ಗಮನ ಸೆಳೆದಿದೆ.

    ಏಕದಿನ ಸರಣಿ ಗೆದ್ದ ಬಳಿಕ ಈ ಟೂರ್ನಿಯಲ್ಲಿ ಎರಡು ಬಾರಿ ವಿರಾಟ್​ ಕೊಹ್ಲಿ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾ ಸ್ಪಿನ್ನರ್​ ಮಹಾರಾಜ್​, ತಂಡದ ವಿಜಯೋತ್ಸವ ಫೋಟೋವನ್ನು ಪೋಸ್ಟ್​ ಮಾಡಿ, ಬಹಳ ಕುತೂಹಲಕಾರಿ ಅಡಿಬರಹವನ್ನು ಬರೆದಿದ್ದಾರೆ. ಇದು ಎಂತಹ ಅದ್ಭುತ ಸರಣಿಯಾಗಿದೆ ಎಂದು ತಂಡದ ಬಗ್ಗೆ ಹೆಚ್ಚು ಹೆಮ್ಮೆಪಡಲಾಗದು. ಏಕೆಂದರೆ, ಮುಂದಿನ ಪಂದ್ಯಕ್ಕೆ ತಯಾರಿ ಆಗಬೇಕಿದೆ ಮತ್ತು ತಯಾರಿ ಆಗಲು ಎಷ್ಟು ಸಮಯ ಇದೆ ಎಂಬುದೇ ಮುಖ್ಯ ಎಂದು ಅಡಿಬರಹ ನೀಡಿರುವ ಕೇಶವ್​ ಮಹಾರಾಜ್​ ಕೊನೆಯಲ್ಲಿ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ.

    ಭಾರತೀಯ ಮೂಲದ ಕೇಶವ್​ ಮಹಾರಾಜ್​, ಈ ಏಕದಿನ ಟೂರ್ನಿಯಲ್ಲಿ ಟೀಮ್​ ಇಂಡಿಯಾಗೆ ಕಠಿಣವಾಗಿ ಪರಿಣಮಿಸಿದರು. ಎರಡು ಬಾರಿ ವಿರಾಟ್​ ಕೊಹ್ಲಿ ಅವರನ್ನು ಔಟ್​ ಮಾಡಿದ್ದಲ್ಲದೆ, ರನ್​ ವೇಗಕ್ಕೂ ಕಡಿವಾಣ ಹಾಕುವ ಮೂಲಕ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಚೆನ್ನಾಗಿ ನಿರ್ವಹಿಸಿದ್ದು, ಆಫ್ರಿಕಾ ತಂಡದಲ್ಲಿ ಶ್ರೇಷ್ಠ ಆಟಗಾರನೆಂದ ಹೆಸರು ಗಳಿಸಿದ್ದಾರೆ. (ಏಜೆನ್ಸೀಸ್​)

    ನಿಮ್ಮ ಮದ್ವೆ ಯಾವಾಗ? ನಟಿ ಸೋನಾಕ್ಷಿ ಸಿನ್ಹಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಗರಂ

    ಮನೆಯಿಂದ ತಂದೆಯನ್ನು ಹೊರಹಾಕಿದ ಮಗನಿಗೆ ತಕ್ಕಶಾಸ್ತಿ: ಮಗನನ್ನೇ ಹೊರಹಾಕುವಂತೆ ಕೋರ್ಟ್​ ಆದೇಶ

    VIDEO| ಕಾರು ಚಾಲಕನಿಂದ ಅಪಾಯಕಾರಿ ಯೂಟರ್ನ್​: ವೈರಲ್​ ವಿಡಿಯೋದ ಅಸಲಿಯತ್ತು ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts