ಕಾಮರೆಡ್ಡಿ: ಮದುವೆಯಾದ ಒಂದೇ ತಿಂಗಳಲ್ಲಿ ಸೈಕೋ ಪತಿಯೊಬ್ಬ ಪತ್ನಿಯ ಮೇಲೆ ಅನುಮಾನಗೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಜಿಲ್ಲೆಯ ಬಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಸುಧಾರಾಣಿ ಕೊಲೆಯಾದ ನವವಿವಾಹಿತೆ. ಮೃತೆ ಕಾಮರೆಡ್ಡಿ ಜಿಲ್ಲೆಯ ತಿಮ್ಮಾಪ್ಪೂರ್ ಮೂಲದವಳು. ಮದುವೆ ಹೊಸದರಲ್ಲಿ ಅನೇಕ ಭರವಸೆಗಳನ್ನು ಇಟ್ಟುಕೊಂಡು ಅತ್ತೆ ಮನೆಗೆ ಬಂದ ಆಕೆಯ ಬದುಕು ಒಂದೇ ತಿಂಗಳಲ್ಲಿ ದುರಂತ ಅಂತ್ಯ ಕಂಡಿದ್ದು ದುರಾದೃಷ್ಟಕರ. ಅನುಮಾನ ಪಿಶಾಚಿಯಾದ ಗಂಡ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಪತಿ ಕಿರಣ್ ಕುಮಾರ್, ಹೈದರಾಬಾದ್ನ ಪ್ರಗತಿ ನಗರದ ಶ್ರೀಶೈದ್ವಾರಕ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದನು. ಮಗಳನ್ನು ನೋಡಲು ಶನಿವಾರ ಹೈದರಾಬಾದ್ಗೆ ಬರುವುದಾಗಿ ಸುಧಾರಣಿ ಪಾಲಕರು ಕಿರಣ್ಗೆ ಹೇಳಿದ್ದರು. ಅದರಂತೆ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಪ್ರಗತಿ ನಗರದ ಮನೆಗೆ ಪಾಲಕರು ಬಂದಿದ್ದಾರೆ. ಕಾಲಿಂಗ್ ಬೆಲ್ ಮಾಡಲು ಯಾರೂ ಮನೆಯ ಬಾಗಿಲು ತೆರೆಯದಿದ್ದಾಗ ಮಗಳ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ, ಮಗಳ ಕರೆ ಸ್ವೀಕರಿಸದೇ ಇರುವುದನ್ನು ನೋಡಿದ ಪಾಲಕರು ಅನುಮಾನಗೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಸುಧಾರಾಣಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು. ಕಿರಣ್ ಕೂಡ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದನ್ನು. ಇದನ್ನು ನೋಡಿದ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಸುಧಾರಾಣಿಯ ಕುತ್ತಿಗೆ, ಕಾಲು ಮತ್ತು ತೋಳುಗಳಲ್ಲಿ ಕಿರಣ್ ಚಾಕುವಿನಿಂದ ಇರಿದಿದ್ದಾನೆ.
ಇಬ್ಬರು ಎರಡು ವಾರಗಳ ಹಿಂದಷ್ಟೇ ಅಪಾರ್ಟ್ಮೆಂಟ್ಗೆ ಬಂದಿದ್ದರಂತೆ. ಅಂದಿನಿಂದ ಯಾರೊಂದಿಗೂ ಇಬ್ಬರು ಹೆಚ್ಚಿಗೆ ಮಾತನಾಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 2 ರಿಂದ 3 ಗಂಟೆಗೆ ಸುಧಾರಾಣಿಯನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಕಿರಣ್ ಕೂಡ ತನ್ನ ಕುತ್ತಿಗೆ ಕೂಯ್ದುಕೊಂಡಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿಯು ತುಂಬಾ ಗಂಭೀರವಾಗಿದೆ. ಮತ್ತೆ ಪ್ರಜ್ಞೆ ಬಂದರೆ ಆತನಿಂದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳಲಿದ್ದಾರೆ. (ಏಜೆನ್ಸೀಸ್)
ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ
ನೂರಕ್ಕೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್ ಬಂಧನ..!
ಕೇಶ ವಿನ್ಯಾಸ ಮತ್ತು ಗಡ್ಡ ಶೇವಿಂಗ್ಗೆ ಬ್ರೇಕ್ ಹಾಕಿದ ತಾಲಿಬಾನಿಗಳು: ಸಲೂನ್ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ
ಕೈಗಾರಿಕಾ ಕ್ರಾಂತಿಗೆ ಕಹಳೆ!; ಹೂಡಿಕೆ ಆಕರ್ಷಿಸಿ ಉದ್ಯೋಗಸೃಷ್ಟಿ ಹೆಚ್ಚಿಸಲು ಸರ್ಕಾರ ಪಣ