More

    ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತದೆ! ಸಮಂತಾ ಮಾಜಿ ಲವರ್​ ಸಿದ್ಧಾರ್ಥ್ ಟ್ವೀಟ್​ ವೈರಲ್​

    ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ದಿನದಿಂದಲೂ ಅವರ ಡಿವೋರ್ಸ್​ ವಿಚಾರ ಒಂದಲ್ಲ ಒಂದು ಕಾರಣಕ್ಕೆ ಇನ್ನು ಚರ್ಚೆಯಾಗುತ್ತಲೇ ಇದೆ. ಸಮಂತಾ ಅವರು ಜಾಲತಾಣದಲ್ಲಿ ಪ್ರತಿದಿನ ಏನೇ ಪೋಸ್ಟ್​ ಮಾಡಿದರೂ, ಅದನ್ನು ಡಿವೋರ್ಸ್​ಗೆ ಲಿಂಕ್​ ಮಾಡಿ ಟ್ರೋಲ್​ ಮಾಡಲಾಗುತ್ತಿದೆ.

    ಇತ್ತಿಚೆಗಷ್ಟೇ ನಟಿ ಸಮಂತಾ ಅವರು ಡಿವೋರ್ಸ್​ ಕುರಿತು ಮುಕ್ತವಾಗಿ ಮಾತನಾಡಿದ್ದರು. 2021ನೇ ವರ್ಷ ನನ್ನ ವೈಯಕ್ತಿಕ ಜೀವನಕ್ಕೆ ಅತಿದೊಡ್ಡ ಹಿನ್ನೆಡೆಯನ್ನು ನೀಡಿದೆ. ಭವಿಷ್ಯದ ಬಗ್ಗೆ ಯಾವುದೇ ಭರವಸೆಗಳು ನನ್ನಲ್ಲಿ ಉಳಿದಿಲ್ಲ ಎಂದು ಮನದ ನೋವನ್ನು ಹೇಳಿಕೊಂಡರು. ಇದೇ ವೇಳೆ ತಮ್ಮ ವಿರುದ್ಧದ ಟ್ರೋಲ್​ಗಳ ಬಗ್ಗೆ ಮಾತನಾಡಿ, ಸಾಮಾಜಿಕ ಜಾಲತಾಣ ಅಭಿಮಾನಿಗಳನ್ನು ಮತ್ತಷ್ಟು ಆಪ್ತರನ್ನಾಗಿಸಿದೆ. ನಾನು ಅನೇಕರಿಂದ ಪ್ರೀತಿಯನ್ನು ಪಡೆದಿದ್ದೇನೆ. ಇಂದು ಅಭಿಮಾನಿಗಳು ನನ್ನ ಜೀವನದ ಭಾಗವಾಗಿದ್ದಾರೆ. ಆದರೆ, ಕೆಲವು ಮಂದಿ ನನ್ನನ್ನು ತುಂಬಾ ಟ್ರೋಲ್​ ಮಾಡುತ್ತಿದ್ದಾರೆ. ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ನಾನು ಎಲ್ಲರನ್ನು ಕೇಳುವುದು ಒಂದೇ, ನಾನು ಮಾಡುವ ಪ್ರತಿಯೊಂದು ಕೆಲಸ ಹಾಗೂ ಆಡುವ ಮಾತನ್ನು ಒಪ್ಪಿಕೊಳ್ಳಬೇಕೆಂದು ನಾನು ಒತ್ತಾಯಿಸುವುದಿಲ್ಲ. ಆದರೆ ನನ್ನ ಅಭಿಪ್ರಾಯಗಳು ನಿಮಗೆ ಇಷ್ಟವಾಗದಿದ್ದರೆ ಅದನ್ನು ಹೇಳಲು ಒಂದು ಮಾರ್ಗವಿದೆ. ಅದನ್ನು ಬಿಟ್ಟು ಕೆಟ್ಟದಾಗಿ ಟ್ರೋಲ್​ ಮಾಡಬೇಡಿ ಎಂದು ಸಮಂತಾ ಮನವಿ ಮಾಡಿದ್ದರು.

    ತಾಜಾ ಬೆಳವಣಿಗೆಯೆಂದರೆ ಸಮಂತಾ ಮಾಜಿ ಲವರ್​ ನಟ ಸಿದ್ಧಾರ್ಥ್​ ಮಾಡಿರುವ ಲೇಟೆಸ್ಟ್​ ಟ್ವೀಟ್​ ಸಮಂತಾರಿಗೆ ತಿರುಗೇಟು ಕೊಟ್ಟಂತಿದೆ. ಸಮಂತಾ ಹೆಸರೇಳದಿದ್ದರೂ, ಸಿದ್ಧಾರ್ಥ್​ ಹೇಳಿರುವುದು ಸಮಂತಾರಿಗೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಈ ಹಿಂದೆಯೂ ನಟ ಸಿದ್ಧಾರ್ಥ್​ ಒಂದು ಟ್ವೀಟ್​ ಮಾಡಿದ್ದರು. ಸಮಂತಾ ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ನಟ ಸಿದ್ಧಾರ್ಥ್​ ಟ್ವೀಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಟ್ವಿಟರ್​​ನಲ್ಲಿ ಟ್ರೆಂಡ್​ ಕೂಡ ಆಗಿತ್ತು. “ನಾನು ಶಿಕ್ಷಕರಿಂದ ಕಲಿತ ಮೊದಲ ಪಾಠವೆಂದರೆ ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ” ಎಂದು ಸಿದ್ಧಾರ್ಥ್​ ಟ್ವೀಟ್​ ಮಾಡಿದ್ದರು. ಸಮಂತಾರನ್ನೇ ಗುರಿಯಾಗಿರಿಸಿ ಸಿದ್ಧಾರ್ಥ್​ ಟ್ವೀಟ್​ ಮಾಡಿದ್ದಾರೆ ಎಂದು ಚರ್ಚೆ ಆಗಿತ್ತು. ಈ ಕಾರಣದಿಂದಲೇ ಟ್ವೀಟ್​ ವೈರಲ್​ ಆಗಿತ್ತು.

    ಇದೀಗ ಮತ್ತೊಂದು ಟ್ವೀಟ್​ ಮಾಡಿರುವ ಸಿದ್ಧಾರ್ಥ್​ ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತದೆ ಎಂಬ ಪಾಠವನ್ನು ಹೇಳಿದಂತಿದೆ. ಕೆಲವು ಸ್ಟಾರ್​ಗಳಿಂದ ಸಾಮಾಜಿಕ ಜಾಲತಾಣ ಜಗತ್ತಿನಲ್ಲಿ ವಿಷವನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಫ್ಯಾನ್​ ಗ್ರೂಪ್​ ಸಂಘಟಿಸಲು ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ, ತಮ್ಮ ಅಸ್ತ್ರಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಯಾವುದೂ ಕೂಡ ತನ್ನಷ್ಟಕ್ಕೆ ತಾನೇ ಆಗುವುದಿಲ್ಲ. ಕೊನೆಯಲ್ಲಿ ತಮ್ಮ ಅಭಿಮಾನಿಗಳು ತಮ್ಮನ್ನೇ ಹದ್ದಾಗಿ ಕುಕ್ಕುತ್ತಾರೆ ಎಂಬುದನ್ನು ಸ್ಟಾರ್​ಗಳ ಅರ್ಥ ಮಾಡಿಕೊಳ್ಳಬೇಕು. ಪ್ರೀತಿ ಮತ್ತು ದ್ವೇಷಕ್ಕಾಗಿ ಹಣ ಪಾವತಿಸುವುದನ್ನು ನಿಲ್ಲಿಸಿ ಎಂದು ಟ್ವೀಟ್​ ಮಾಡಿದ್ದಾರೆ.

    ಇದೀಗ ಈ ಟ್ವೀಟ್​ ಅನ್ನು ಸಮಂತಾ ಅವರು ಟ್ರೋಲಿಗರ ಬಗ್ಗೆ ಹೇಳಿದ್ದಕ್ಕೆ ಲಿಂಕ್​ ಮಾಡಿ ಮತ್ತೆ ಟ್ರೋಲ್​ ಮಾಡುತ್ತಿದ್ದಾರೆ. ಆದರೆ, ಅವರು ಯಾರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದಾರೆ ಎಂಬುದು ಸಿದ್ಧಾರ್ಥ್​ ಅವರಿಗೆ ಮಾತ್ರ ತಿಳಿದಿರುತ್ತದೆ. ಸದ್ಯ ಟ್ವೀಟ್​ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

    ಅದಕ್ಕೆಲ್ಲ ನಾನು ಜವಾಬ್ದಾರನಲ್ಲ: ವೈರಲ್​ ಟ್ವೀಟ್​ ಬಗ್ಗೆ ಸಮಂತಾರ ಮಾಜಿ ಲವರ್ ನಟ ಸಿದ್ಧಾರ್ಥ್​ ಸ್ಪಷ್ಟನೆ..!

    27ರ ಯುವನಟಿ ಹೃದಯಾಘಾತದಿಂದ ಸಾವು: ವಿಧಿಯ ಕ್ರೂರತ್ವಕ್ಕೆ ಕನಸುಗಳು ನುಚ್ಚುನೂರು

    ಬ್ರಾಲೆಸ್​ ಫೋಟೋಶೂಟ್​: ಚಿತ್ರರಂಗ ಬಿಡುವಂತೆ ನಟಿ ಪಾಯಲ್​ ರಜಪೂತ್​ಗೆ ತಾಯಿಯ ತಾಕೀತು!

    ತೆಲುಗು ನಟಿಯೊಂದಿಗೆ ವಸಿಷ್ಠ ಸಿಂಹ ಲಿಪ್​ಲಾಕ್​: ಬೋಲ್ಡ್​ ವಿಡಿಯೋ ವೈರಲ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts