More

    ಹೃದಯಾಘಾತದಿಂದ ಯೋಜನಾ ಆಯೋಗದ ಮಾಜಿ ಸದಸ್ಯ, ಅರ್ಥಶಾಸ್ತ್ರಜ್ಞ ಅಭಿಜಿತ್​ ಸೇನ್ ವಿಧಿವಶ

    ನವದೆಹಲಿ: ಯೋಜನಾ ಆಯೋಗದ ಮಾಜಿ ಸದಸ್ಯ ಹಾಗೂ ದೇಶದ ಗ್ರಾಮೀಣ ಆರ್ಥಿಕ ತಜ್ಞರಲ್ಲಿ ಅಗ್ರಗಣ್ಯರಾದ ಅರ್ಥಶಾಸ್ತ್ರಜ್ಞ ಅಭಿಜಿತ್​ ಸೇನ್ (72)​ ಅವರು ಸೋಮರಾತ್ರಿ ರಾತ್ರಿ ವಿಧಿವಶರಾಗಿದ್ದಾರೆ.

    ರಾತ್ರಿ 11 ಗಂಟೆಗೆ ಹೃದಯಾಘಾತದಿಂದ ಬಳಲಿದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಸೇನ್​ ಅವರ ಸಹೋದರ ಮಾಹಿತಿ ನೀಡಿದ್ದಾರೆ.

    ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯ ವೃತ್ತಿಜೀವನದಲ್ಲಿ, ಅಭಿಜಿತ್ ಸೇನ್, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಪಕರಾಗಿ ಮತ್ತು ಕೃಷಿ ವೆಚ್ಚ ಹಾಗೂ ಬೆಲೆಗಳ ಆಯೋಗದ ಅಧ್ಯಕ್ಷರು ಸೇರಿದಂತೆ ಹಲವಾರು ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರು 2004 ರಿಂದ 2014 ರವರೆಗೆ ಯೋಜನಾ ಆಯೋಗದ ಸದಸ್ಯರಾಗಿದ್ದರು. (ಏಜೆನ್ಸೀಸ್​)

    ರಾಮನಗರದಲ್ಲಿ ಮಳೆ ನಿಂತರು ನಿಲ್ಲದ ಪ್ರವಾಹದ ಭೀತಿ: ಮಳೆ ಹಾನಿಯ ಸ್ಪಷ್ಟ ಚಿತ್ರಣ ಗೋಚರ

    ಬಲವಂತವಾಗಿ ದನದ ಮಾಂಸ ತಿನ್ನಿಸಿದ ಪ್ರೇಯಸಿ: ಮನನೊಂದು ಸಾವಿನ ಹಾದಿ ಹಿಡಿದ ಹಿಂದು ಯುವಕ

    ಪೊಲೀಸ್​ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದ ಯುವತಿ ದುರಂತ ಅಂತ್ಯ: ಮನಕಲಕುತ್ತೆ ಈಕೆಯ ಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts