ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಅವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. 50 ಲಕ್ಷ ರೂ. ಸಾಲದ ಪಡೆದು, ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿರುವ ಆರೋಪವಿದ್ದು, ಹಣ ಮರುಪಾವತಿಸುವಂತೆ ಕೋರ್ಟ್ ತೀರ್ಪು ನೀಡಿದೆ.
ಸಾಲ ಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿ ದ್ವಾರಕೀಶ್ ಸೋತಿದ್ದರು. ಇದೀಗ 52 ಲಕ್ಷ ರೂಪಾಯಿ ಸಾಲದ ಹಣ ವಾಪಸ್ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ. 2013ರಲ್ಲಿ ಕೆಸಿಎನ್ ಚಂದ್ರಶೇಖರ್ರಿಂದ ದ್ವಾರಕೀಶ್ ಅವರು ಸಾಲ ಪಡೆದುಕೊಂಡಿದ್ದರು. ನಟಿ ಪ್ರಿಯಾಮಣಿ ಅಭಿನಯದ ಚಾರುಲತಾ ಸಿನಿಮಾ ಬಿಡುಗಡೆಗಾಗಿ ದ್ವಾರಕೀಶ್ ಸಾಲ ಪಡೆದಿದ್ದರು.
ದ್ವಾರಕೀಶ್ ಸಂಬಂಧಿ ಸಂಜೀವ್ ಎಂಬುವರು ಕೆಸಿಎನ್ ಚಂದ್ರಶೇಖರ್ರಿಂದ ಹಣ ಕೊಡಿಸಿದ್ದರು. 50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ದ್ವಾರಕೀಶ್ ಅವರು ಚೇಕ್ ನೀಡಿದ್ದರು. ಆದರೆ, ನಾನು ಚೆಕ್ ನೀಡಿಯೇ ಇಲ್ಲ ಮತ್ತು ಚೆಕ್ನಲ್ಲಿರುವ ಸಹಿಯೂ ಕೂಡ ನನ್ನದಲ್ಲ ಎಂದು ಕೋರ್ಟಿನಲ್ಲಿ ದ್ವಾರಕೀಶ್ ವಾದಿಸಿದ್ದರು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಚೆಕ್ ಮೇಲಿರುವ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು.
2019 ರಲ್ಲಿ ಕೋರ್ಟ್ 52 ಲಕ್ಷ ರೂ. ಹಣ ಹಿಂದಿರುಗಿಸುವಂತೆ ದ್ವಾರಕೀಶ್ ಅವರಿಗೆ ಆದೇಶಿಸಿತ್ತು. ಆದರೆ, ಹಣ ಹಿಂದಿರುಗಿಸದೇ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು ಇದೀಗ ದ್ವಾರಕೀಶ್ಗೆ ಮುಖಭಂಗವಾಗಿದೆ. ಕೇವಲ ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ಸಂಬಂಧಿ ಸಂಜೀವ್ ಕುಮಾರ್, ನಾನು ಮತ್ತು ಚಂದ್ರಶೇಖರ್ ಸ್ನೇಹಿತರು. ಚಾರುಲತಾ ಸಿನಿಮಾ ರಿಲೀಸ್ ವೇಳೆ ದ್ವಾರಕೀಶ್ ಅವರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ 2013ರಲ್ಲಿ ನಾನೇ ಚಂದ್ರಶೇಖರ್ ಬಳಿ ಮಾತನಾಡಿ 50 ಲಕ್ಷ ರೂ. ಹಣ ಕೊಡಿಸಿದ್ದೆ. ನಂತರ ಸಾಕಷ್ಥು ಬಾರಿ ಹಣ ಕೊಡದೆ ಸತಾಯಿಸಿದ್ದರು. ಅಲ್ಲದೆ, ಚೆಕ್ ಕೊಟ್ಟು ನಂತರ ಸಹಿನೂ ನನ್ನದಲ್ಲ ಅಂತ ಕೋರ್ಟ್ನಲ್ಲಿ ಹೇಳಿದ್ದರು. ನನ್ನ ಮೇಲೆ ಹಾಗೂ ಚಂದ್ರಶೇಖರ್ ಮೇಲೆ ಈ ಹಿಂದೆ ಎಚ್ಎಸ್ಆರ್ ಲೇಔಟ್ನಲ್ಲಿ ಕೊಲೆ ಕೇಸ್ ಸಹ ದಾಖಲಿಸಿದ್ದರು. ನಂತರ ನಾವು ಬೇಲ್ ತೆಗೆದುಕೊಂಡಿದ್ವಿ. ಕೆಳ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿತ್ತು. ಆದ್ರೆ, ದ್ವಾರಕೀಶ್ ಮತ್ತೆ 5 ಲಕ್ಷ ರೂ. ಕಟ್ಟಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಮತ್ತೆ ಕೇಸ್ ನಮ್ಮ ಪರವಾಗಿದೆ. ದ್ವಾರಕೀಶ್ ಈ ರೀತಿ ಮಾತನಾಡಬಾರದು. ನಮಗೆ ನ್ಯಾಯಕ್ಕೆ ಸಿಕ್ಕಿದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)
ಜೂನಿಯರ್ ಎನ್ಟಿಆರ್ ಧರಿಸಿರುವ ಈ ವಾಚ್ನ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತಿರಾ..!
VIDEO: ಏಲಿಯನ್ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್!
ಅಪರಿಚಿತನ ಪುಂಡಾಟಕ್ಕೆ ಹೈರಾಣಾದ ಫ್ಯಾಮಿಲಿ: ಮಧ್ಯರಾತ್ರಿ ಕಾರಿನಲ್ಲಿ ಚೇಸ್ ಮಾಡಿ ಬಂದು ಅಸಭ್ಯ ವರ್ತನೆ
ತಲ್ವಾರ್ ಹಿಡಿದು ಚರ್ಚ್ ಒಳಗೆ ನುಗ್ಗಿದ ಅಪರಿಚಿತನಿಂದ ಫಾದರ್ಗೆ ಬೆದರಿಕೆ: ಬೆಳಗಾವಿಯಲ್ಲಿ ಘಟನೆ