ಹೈದರಾಬಾದ್: ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಹಾಗೂ ಬಾಲಿವುಡ್ ಕಲಾವಿದರ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಅಧಿಕೃತ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಕಲಾವಿದರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಸೆಲೆಬ್ರಿಟಿಗಳಾದ ಅನುಪಮ್ ಖೇರ್, ಫರ್ಹಾನ್ ಅಖ್ತಾರ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಮಾಸ್ ಮಹರಾಜ ರವಿತೇಜ, ರಾಕುಲ್ ಪ್ರೀತ್ ಸಿಂಗ್, ಅಲ್ಲು ಸಿರೀಷ್ ಮತ್ತು ಚಾರ್ಮಿ ಕೌರ್ ದಿಶಾ ಪ್ರಕರಣದ ಬಗ್ಗೆ ಟ್ವೀಟ್ ಮಾಡುವಾಗ ಸಂತ್ರಸ್ತ ಯುವತಿಯ ಅಧಿಕೃತ ಹೆಸರನ್ನು ಉಲ್ಲೇಖಿಸಿದ್ದರು.
ದೆಹಲಿ ಮೂಲದ ವಕೀಲರಾದ ಗೌರವ್ ಗುಲಾಟಿ ಈ ಸೆಲೆಬ್ರಿಟಿಗಳ ವಿರುದ್ಧ ಐಪಿಸಿ ಸೆಕ್ಷನ್ 228 ಎ ಅಡಿಯಲ್ಲಿ ಸಾಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ತೀಸ್ ಹಜಾರಿ ಕೋರ್ಟ್ನಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವುದನ್ನು ಕಾನೂನು ನಿಷೇಧಿಸಿದ್ದರೂ ಈ ಸೆಲೆಬ್ರಿಟಿಗಳು ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಗೌರವ್ ಗುಲಾಟಿ ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
2019ರ ಡಿಸೆಂಬರ್ನಲ್ಲಿ ಕೆಲಸದ ನಿಮಿತ್ತ ಬೈಕ್ನಲ್ಲಿ ತೆರಳಿದ್ದ ದಿಶಾ (ಅತ್ಯಾಚಾರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮೂಲ ಹೆಸರನ್ನು ಬಹಿರಂಗಪಡಿಸುವಂತಿಲ್ಲ). ಬೈಕ್ ಪಂಚರ್ ಆದ ಕಾರಣ, ಪೆಟ್ರೋಲ್ ಬಂಕ್ ಬಳಿ ಅದನ್ನು ನಿಲ್ಲಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ನಾಲ್ಕು ಮಂದಿ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಹೊತ್ತೊಯ್ದು ಸಾಮೂಹಿಕ ಆತ್ಯಾಚಾರ ಮಾಡಿದ್ದೂ ಅಲ್ಲದೇ, ಕೊಲೆ ಮಾಡಿ ಶವವನ್ನು ಸುಟ್ಟುಹಾಕಿದ್ದರು. ಹೈದರಾಬಾದ್-ಬೆಂಗಳೂರು ಹೆದ್ದಾರಿಯ ಶಾದ್ನಗರದ ಬಳಿ ಕಾಮುಕರು ದಿಶಾ ಶವನ್ನು ಸುಟ್ಟು ಹಾಕಿದ್ದರು. ಘಟನೆ ನಡೆದ ಮರುದಿನ ದಿಶಾ ಶವ ಪತ್ತೆಯಾಗಿತ್ತು. ದಿಶಾ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು.
ಇಡೀ ದೇಶಾದ್ಯಂತ ಈ ಘಟನೆಯ ವಿರುದ್ಧ ಪ್ರತಿಭಟನೆ ಕೇಳಿಬಂದಿದ್ದವು. ಬಳಿಕ ಆರೋಪಿಗಳಾ ಮಹಮ್ಮದ್ ಆರೀಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಾಕುಂಟ ಚನ್ನಕೇಶವುಲು ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು 2019 ಡಿಸೆಂಬರ್ 6ರಂದು ತನಿಖೆ ಕರೆದೊಯ್ದಾಗ ಎನ್ಕೌಂಟರ್ ಮಾಡಿದ್ದರು. (ಏಜೆನ್ಸೀಸ್)
ತಾರಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ ಸಮಂತಾರ ಈ ನಡೆ..!
ಕೃತಿ ಶೆಟ್ಟಿ ಜತೆ ಅಂತ ಕೆಲಸ ಮಾಡಲ್ಲ! ಅವಳನ್ನು ನನ್ನ ಮಗಳೆಂದು ಭಾವಿಸಿದ್ದೇನೆಂದ ವಿಜಯ್ ಸೇತುಪತಿ
ವ್ಯಾನ್ ಡ್ರೈವರ್ನನ್ನು ಪ್ರೀತಿಸಿ ಮದ್ವೆಯಾದ ಒಂದೇ ವರ್ಷದಲ್ಲಿ ಜೂನಿಯರ್ ಲೆಕ್ಚರರ್ ಜೀವನ ದುರಂತ ಅಂತ್ಯ..!