More

    ದರ್ಶನ್ ಕೇಸ್​ಗೆ ಮೆಗಾ ಟ್ವಿಸ್ಟ್? ಎಚ್​ಡಿಕೆ-ಇಂದ್ರಜಿತ್ ಲಂಕೇಶ್ ಭೇಟಿಯ ಫೋಟೋ ವೈರಲ್​

    ಬೆಂಗಳೂರು: ನಟ ದರ್ಶನ್​ ವಿರುದ್ಧ ಗಂಭೀರ ಆರೋಪಗಳ ಕೇಳಿಬರುತ್ತಿರುವ ಬೆನ್ನಲ್ಲೇ ಇಂದ್ರಜಿತ್​ ಲಂಕೇಶ್​ ಮತ್ತು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಭೇಟಿ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಅಭಿಮಾನಿಗಳು ಹರಿಬಿಟ್ಟಿದ್ದು, ದರ್ಶನ್​ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.

    ಇಂದ್ರಜಿತ್​ ಲಂಕೇಶ್​ ಅವರು ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಟೀಕೆ ಮಾಡಿದ್ದರು. ಎಲ್ಲಿದ್ದೀಯಾ ಸುಮಲತಾ…ಕರೊನಾ ಸಮಯದಲ್ಲಿ ಜನರ ಜತೆ ಇರೋದು ಬಿಟ್ಟು ಎಲ್ಲಿ ಹೋಗಿದ್ದೀಯಾ? ಕರೊನಾ ಸಮಯದಲ್ಲಿ ಮಂಡ್ಯ ಸ್ವಾಭಿಮಾನಿ ಜನ ಮರೆತುಹೋದ್ರಾ ಎಂದು ಇಂದ್ರಜಿತ್​​ ಟೀಕೆ ಮಾಡಿದ್ದರು.

    ಇದನ್ನೂ ಓದಿರಿ: ಹುಡುಗಿಯನ್ನು ಕಾಪಾಡಲು ಹೋಗಿ ಬಾವಿಗೆ ಬಿದ್ದ 30 ಮಂದಿ: ನಾಲ್ವರು ಸಾವು, ಮುಂದುವರಿದ ರಕ್ಷಣಾ ಕಾರ್ಯ

    ಇದೀಗ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಯಾವುದೇ ತಾರ್ಕಿಕ ಅಂತ್ಯ ಕಾಣದೇ ರಾಜಿ-ಸಂಧಾನ ಮಾಡಿಕೊಂಡ ಬೆನ್ನಲ್ಲೇ ಪ್ರತ್ಯಕ್ಷರಾದ ಇಂದ್ರಜಿತ್​ ಲಂಕೇಶ್​, ನಟ ದರ್ಶನ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಂಚನೆ ಯತ್ನ ಪ್ರಕರಣದಲ್ಲಿ ಕೇಳಿಬಂದಿರುವ ಅರುಣಾ ಕುಮಾರಿಗೆ ದರ್ಶನ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಸಂದೇಶ್​ ನಾಗರಾಜ್​ ಒಡೆತನದ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ.

    ಇದರೊಂದಿಗೆ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೈಸೂರು ಪೊಲೀಸ್​ ಠಾಣೆಗಳು ಸೆಟಲ್​ಮೆಂಟ್​ ಅಡ್ಡೆಗಳಾಗುತ್ತಿವೆ. ಓರ್ವ ಸೆಲೆಬ್ರಿಟಿಯಾಗಿ ಠಾಣೆಯ ಮುಂದೆಯೇ ತಲೆ ಕಡಿಯುತ್ತೇನೆ ಅನ್ನುವುದು ಸರಿಯಲ್ಲ. ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಲಂಕೇಶ್​ ಹಲವು ಗಂಭೀರ ವಿಚಾರಗಳನ್ನು ಕೆದಕಿ ದರ್ಶನ್​ರನ್ನು ಇದೀಗ ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ.

    ಲಂಕೇಶ್​ ವಿರುದ್ಧ ದರ್ಶನ್​ ಫ್ಯಾನ್ಸ್​ ಗರಂ
    ಲಂಕೇಶ್​ ಆರೋಪಗಳಿಂದ ಕೆಂಡಾಮಂಡಲರಾಗಿರುವ ದರ್ಶನ್​ ಅಭಿಮಾನಿಗಳು ಲಂಕೇಶ್​ ವಿರುದ್ಧ ಗರಂ ಆಗಿದ್ದಾರೆ. ಇದೀಗ ಲಂಕೇಶ್​ ಮತ್ತು ಮಾಜಿ ಸಿಎಂ ಎಚ್​ಡಿಕೆ ಭೇಟಿ ಆಗಿರುವ ಫೋಟೋಗಳನ್ನು ಅಭಿಮಾನಿಗಳು ಟ್ರೋಲ್​ ಮಾಡುತ್ತಿದ್ದಾರೆ. ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿ, ಇಂದ್ರಜಿತ್ ಎಚ್​ಡಿಕೆ ಭೇಟಿಯಾಗಿದ್ದಾರೆ ಎಂದು ದೂರಿದ್ದಾರೆ. ಪರೋಕ್ಷವಾಗಿ ಇದರ ಹಿಂದೆ ಎಚ್​ಡಿಕೆ ಇದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದರ್ಶನ್​ ಅವರು ಸುಮಲತಾ ಅಂಬರೀಷ್​ ಪರವಾಗಿ ನಿಂತಿದ್ದರು.

    ಇದನ್ನೂ ಓದಿರಿ: ಪೆಟ್ರೋಲ್​-ಡೀಸೆಲ್​ ದರವನ್ನು ಏಕೆ ಕಡಿತಗೊಳಿಸಲಾಗದು?: ನೀತಿ ಆಯೋಗದ ಸಿಇಒ ಹೇಳಿದ್ದು ಹೀಗೆ

    ಮತ್ತಷ್ಟು ದಾಖಲೆಗಳು ಬಿಡುಗಡೆ ಮಾಡ್ತಾರಾ?
    ದರ್ಶನ ವಿರುದ್ಧ ಇಂದು ಇಂದ್ರಜಿತ್ ಲಂಕೇಶ್​ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬೆಳಗ್ಗೆ 11.30ಕ್ಕೆ ಲಂಕೇಶ್​ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಇಂದಿನ ಸುದ್ದಿಗೋಷ್ಠಿಯ ಮೇಲೆ ಸಾಕಷ್ಟು ದೃಷ್ಟಿ ನೆಟ್ಟಿದೆ. ಪ್ರಕರಣ ಮತ್ತೊಂದು ಹಂತಕ್ಕೆ ಹೋಗುತ್ತಾ ಎಂಬ ಚರ್ಚೆಗಳು ಆರಂಭವಾಗಿದೆ.

    ದರ್ಶನ್​ ಸುದ್ದಿಗೊಷ್ಠಿ
    ಬೆಂಗಳೂರಿನಲ್ಲಿ ಲಂಕೇಶ್​ ಸುದ್ದಿಗೋಷ್ಠಿ ನಡೆಸಿದರೆ, ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ದರ್ಶನ್​ ಸಹ ಇಂದು ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಹೋಟೆಲ್​ ಸಂದೇಶ್​ ಪ್ರಿನ್ಸ್​ನಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ತಮ್ಮ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ನಟ ದರ್ಶನ್​ ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಹೀಗಾಗಿ ಇಂದು ದರ್ಶನ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ದಟ್ಟವಾಗಿದೆ.

    ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ

    ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!

    ಒಟಿಟಿಗೆ ಕಂಗನಾ: ಟೆಂಪ್ಟೇಶನ್ ಐಲ್ಯಾಂಡ್ ಕಾರ್ಯಕ್ರಮ ನಿರೂಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts