ಲಂಡನ್: ಥಾಯ್ಲೆಂಡ್ ಮೂಲದ ವೇಶ್ಯೆಯನ್ನು ಆಕೆಯ ತವರಿನಲ್ಲೇ ಹತ್ಯೆ ಮಾಡಿ ಸ್ವದೇಶಕ್ಕೆ ಪರಾರಿಯಾದ ಆರೋಪ ಹೊತ್ತಿರುವ ಬ್ರಿಟಿಷ್ ಮೂಲದ ವ್ಯಕ್ತಿ, ಹಸ್ತಾಂತರ ಹೋರಾಟದಲ್ಲಿ ಸೋಲನ್ನು ಅನುಭವಿಸಿದ್ದು, ಬ್ಯಾಂಕಾಕ್ನಲ್ಲಿ ಮುಂದಿನ ವಿಚಾರಣೆ ಎದುರಿಸಬೇಕಿದೆ.
ಇಂಗ್ಲೆಂಡಡ್ನ ಸ್ಟೋಕ್ ಆನ್ ಟ್ರೆಂಟ್ ನಿವಾಸಿ ಶ್ಯಾನೆ ಲೂಕರ್ (51) 2014ರಲ್ಲಿ ಥಾಯ್ಲೆಂಡ್ ಪ್ರವಾಸ ವೇಳೆ ಕ್ಲಬ್ ಡ್ಯಾನ್ಸರ್ ಹಾಗೂ ವೇಶ್ಯೆ ಲಕ್ಸಮಿ ಮೊನೊಚಾಟ್ (31) ಎಂಬಾಕೆಯನ್ನು ಕೊಂದು, ಆಕೆಯ ಮೃತದೇಹವನ್ನು ಸೂಟ್ಕೇಸ್ ಒಂದರಲ್ಲಿ ತುಂಬಿಟ್ಟಿದ್ದನು.
ಲಕ್ಷಮಿ ನಾಪತ್ತೆಯಾದ ಒಂದು ವಾರದ ಬಳಿಕ ಆಕೆಯ ಮೃತದೇಹ ಥಾಯ್ಲೆಂಡ್ನ ಕಾಂಚನಬುರಿ ಪ್ರಾಂತ್ಯದಿಂದ 95 ಮೈಲಿ ದೂರದಲ್ಲಿರುವ ನದಿಯೊಂದರಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಲೂಕರ್ನನ್ನು 2017ರಲ್ಲಿ ಇಬಿಜಾ ರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಇಬಿಜಾದಲ್ಲಿ ಆರೋಪಿ ತನ್ನದೆಯಾದ ಸ್ವಂತ ಹೋಟೆಲ್ ನಡೆಸುತ್ತಿದ್ದ. ಬಂಧನವಾದ ದಿನದಿಂದ ಇಂದಿನವರೆಗೂ ಲೂಕರ್ ಕಾನೂನು ತಂಡ ಆತನ ಹಸ್ತಾಂತರಕ್ಕಾಗಿ ಹೋರಾಟ ಮಾಡುತ್ತಲೇ ಇದೆ.
ಲೂಕರ್ನನ್ನು ಹಸ್ತಾಂತರಿಸಬೇಕೆಂದು ಸ್ಪ್ಯಾನಿಷ್ ಹೈಕೋರ್ಟ್ ತೀರ್ಪು ನೀಡಿತು. ಆದರೆ ವಕೀಲರು ಸರಣಿ ಮೇಲ್ಮನವಿಗಳನ್ನು ಸಲ್ಲಿಸಿದರು. ಇದೀಗ ಹೊಸ ತೀರ್ಪು ನೀಡಿರುವ ಸ್ಟ್ರಾಸ್ಬರ್ಗ್ನಲ್ಲಿರುವ ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯ, ಲೂಕರ್ ಥಾಯ್ಲೆಂಡ್ ವಿಚಾರಣೆ ಎದುರಿಸಲೇಬೇಕೆಂದು ಆದೇಶಿಸಿದೆ.
ಬ್ಯಾಂಕಾಕ್ನಲ್ಲಿ ರಾಯಲ್ ಥಾಯ್ಲೆಂಡ್ ಪೊಲೀಸರು ಸಲ್ಲಿಸಿರುವ ವ್ಯಾಪಕ ಕೇಸ್ ಫೈಲ್ಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಲಕ್ಷಾಮಿಯನ್ನು ಕೊಲೆ ಮಾಡಿದ ವ್ಯಕ್ತಿ ಲುಕರ್ ಎಂದು ದಾಖಲೆಗಳು ಸಾಬೀತುಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೆ ಪ್ರತಿಯಾಗಿ ಲೂಕರ್ಗೆ ಮರಣದಂಡನೆ ನೀಡುವುದಾಗಲಿ ಅಥವಾ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಥಾಯ್ಲೆಂಡ್ ಅಧಿಕಾರಿಗಳು ಇಯು ಕಾನೂನಿನಡಿಯಲ್ಲಿ ಅಗತ್ಯವಾದ ಭರವಸೆಗಳನ್ನು ನೀಡಿದ್ದಾರೆಂದು ವರದಿಯಾಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಆರೋಪಿ ಲೂಕರ್ ಪ್ರವಾಸದ ವೇಲೆ ಥಾಯ್ಲೆಂಡ್ನ ನಾನಾ ಪ್ಲಾಜಾದ ಹಾಟ್ ಲಿಪ್ಸ್ ಬಾರ್ನಲ್ಲಿದ್ದನು. ಈ ವಿಶೇಷ ಪ್ರದೇಶವು ಪ್ರತಿದಿನ ರಾತ್ರಿ ನೂರಾರು ವಿದೇಶಿ ಪುರುಷರನ್ನು ಮದ್ಯ ಮತ್ತು ಲೈಂಗಿಕತೆಯ ಹುಡುಕಾಟದಲ್ಲಿ ಆಕರ್ಷಿಸುತ್ತದೆ. ಲಕ್ಷಾಮಿಯನ್ನು ಹಣ ಕೊಟ್ಟು ಬುಕ್ ಮಾಡಿದ್ದ ಲೂಕರ್ ಆಕೆಯೊಂದಿಗೆ ಸೆಕ್ಸ್ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಏಕೆ ಕೊಲೆ ಮಾಡಿದ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.
ಲಕ್ಷಾಮಿ ಕೊಲೆಯ ಬಳಿಕ ಶಂಕಿತ ಆರೋಪಿಯಾಗಿದ್ದ ಲೂಕರ್, ಆಕೆ ಲಕ್ಷಾಮಿ ಯಾರೆಂದು ಗೊತ್ತಿಲ್ಲ. ಆದರೆ, ಆಕೆಯೊಂದಿಗೆ ಸಮಯ ಕಳೆದಿದ್ದಾಗಿ ಒಪ್ಪಿಕೊಂಡಿದ್ದ. ಆದರೆ, ಆಕೆಯನ್ನು ಕೊಲೆ ಮಾಡಿಲ್ಲ ಎಂದು ಹೇಳಿದ್ದ. ಹೀಗಿರುವಾಗ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಿಂದ 70 ಮೈಲಿ ದೂರದಲ್ಲಿರುವ ಕಾಂಚನಬರಿ ಸಮೀಪದ ಮೇ ಕಾಂಗ್ ನದಿಯಲ್ಲಿ ಸೂಟ್ಕೇಸ್ ಒಂದರಲ್ಲಿ ಲಕ್ಷಾಮಿ ಮೃತದೇಹ 2014ರ ನವೆಂಬರ್ 9ರಂದು ಪತ್ತೆಯಾಗಿತ್ತು.
ಆರಂಬಂಧಲ್ಲಿ ಆರೋಪಿ ಗುರುತು ಕಷ್ಟವಾಗಿತ್ತು. ಆದರೆ, ಥಾಯ್ ಬ್ಲಾಗ್ ಸ್ಟಿಕ್ಬಾಯ್ ನೀಡಿದ ಒಂದೇ ಒಂದು ಸುಳಿವಿನಿಂದ, ಲೂಕರ್ನ ಇಡೀ ಮಾಹಿತಿಯನ್ನು ಕಲೆಹಾಕಲಾಗಿತ್ತು. ಅಷ್ಟರಲ್ಲಾಗಲೇ ಆತ ಊರು ಬಿಟ್ಟಿದ್ದ. ಲಕ್ಷಾಮಿ ಸಂಬಂಧಿಸಿದ ಪ್ರದೇಶವೊಂದರ ಸಿಸಿಟಿವಿ ಕ್ಯಾಮೆರಾದಲ್ಲೂ ಲೂಕರ್ ಸೆರೆಯಾಗಿದ್ದು, ಘಟನೆಗೆ ಮತ್ತಷ್ಟು ಪುಷ್ಠಿ ನೀಡಿತು. ಬಳಿಕ ಆತನ ಡಿಎನ್ಎ ಪರೀಕ್ಷೆ ನಡೆಸಿದಾಗ ಆತನೇ ಕೊಲೆಗಾರ ಎಂಬ ಅನುಮಾನ ದೊಡ್ಡದಾಯಿತು. ಬಳಿಕ 2017ರಲ್ಲಿ ಆತನನ್ನು ಇಬಿಜಾದಲ್ಲಿ ಬಂಧಿಸಿ ಥಾಯ್ಲೆಂಡ್ಗೆ ಕರೆತರಲಾಗಿತ್ತು.
ಅಂದಿನಿಂದ ಆರೋಪಿಯ ಕಾನೂನು ತಂಡ ಹಸ್ತಾಂತರ ಸಂಬಂಧ ಹೋರಾಟ ನಡೆಸುತ್ತಲೇ ಬಂದಿತ್ತು. ಆದರೆ, ಸಾಕ್ಷ್ಯಾಧಾರಗಳು ಲೂಕರ್ ವಿರುದ್ಧ ಇದ್ದಿದ್ದರಿಂದ ಇದೀಗ ಥಾಯ್ಲೆಂಡ್ ನ್ಯಾಯಾಲಯವನ್ನು ಎದುರಿಸಲೇಬೇಕೆಂದು ನಲ್ಲಿರುವ ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯ ಆದೇಶಿಸಿದೆ. (ಏಜೆನ್ಸೀಸ್)
ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ
ಚಾಮರಾಜನಗರದಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಬೆಚ್ಚಿಬೀಳಿಸಿದ್ದ ಬಾಂಗ್ಲಾ ಯುವತಿ ಗ್ಯಾಂಗ್ ರೇಪ್: ಗುಪ್ತಾಂಗಕ್ಕೆ ಬಾಟ್ಲಿ ತುರುಕಿ ವಿಕೃತಿ ಮೆರೆದಿದ್ದವ ಇವನೇ…