ಹೈದರಾಬಾದ್: ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ, ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಮತ್ತು ನಾಗಚೈತನ್ಯ ಟಾಲಿವುಡ್ ಮತ್ತು ಕಾಲಿವುಡ್ ಸಿನಿ ಅಂಗಳದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಆದರೆ, ಇದುವರೆಗೂ ಸಮಂತಾ ಆಗಲಿ, ನಾಗಚೈತನ್ಯವಾಗಲಿ ಅಥವಾ ಅಕ್ಕಿನೇನಿ ಕುಟುಂಬವಾಗಲಿ ಯಾರೋಬ್ಬರು ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಇಬ್ಬರು ಬೇರೆಯಾಗುವುದು ಖಚಿತ ಎಂಬ ಮಾತುಗಳು ಸಿನಿ ಗಲ್ಲಿಯಲ್ಲಿ ಕೇಳಿಬರುತ್ತಿವೆ.
ನಾಗಚೈತನ್ಯ ಮತ್ತು ಸಮಂತಾ ನಡೆಯಿಂದ ಅಭಿಮಾನಿಗಳಂತೂ ಗೊಂದಲಕ್ಕೀಡಾಗಿದ್ದಾರೆ. ವೈಯಕ್ತಿಕ ವಿಚಾರದಲ್ಲಿ ಇಬ್ಬರು ನಡೆದುಕೊಳ್ಳುತ್ತಿರುವ ರೀತಿ ವಂದತಿಗಳಿಗೆ ಪುಷ್ಠಿ ನೀಡುವಂತಿದೆ. ಹೀಗಾಗಿ ಈ ವಿಚಾರದಲ್ಲಿ ತಾರಾದಂಪತಿ ಏನು ಹೇಳುತ್ತಾರೆಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗಾಗಲೇ ಇಬ್ಬರ ಡಿವೋರ್ಸ್ ಕುರಿತು ಬೇಕಾದಷ್ಟು ಸ್ಟೋರಿ ಪ್ರಸಾರವಾಗಿವೆ. ಇದೇ ವೇಳೆ ಎಲ್ಲ ವಂದತಿಗಳಿಗೆ ಸಮಂತಾ ತೆರೆಎಳೆದಿದ್ದು, ಕೊನೆಗೂ ಮೌನ ಮುರಿದಿದ್ದಾರೆ.
ಬಟ್ಟೆಯ ಬ್ರ್ಯಾಂಡ್ “ಸಾಕಿ” ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಂತಾ ತಮ್ಮ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸೆಷನ್ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬ ನೀವು ಮುಂಬೈಗೆ ಸ್ಥಳಾಂತರ ಆಗುತ್ತಿದ್ದೀರಾ? ಎಂದು ಸಮಂತಾರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಮಂತಾ, ಹೈದರಾಬಾದ್ ನನ್ನ ಮನೆ, ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವದಂತಿಗಳು ಹೇಗೆ ಶುರುವಾಯಿತು ಎಂದು ನಿಜಕ್ಕೂ ನನಗೆ ತಿಳಿದಿಲ್ಲ. ಆದರೆ, ನೂರಾರು ವದಂತಿಗಳು ಮಾತ್ರ ನಿಜವಲ್ಲ. ಹೈದರಾಬಾದ್ ನನ್ನ ಮನೆ, ಅದು ಯಾವಾಗಲೂ ನನ್ನ ತವರಾಗಿಯೇ ಉಳಿಯುತ್ತದೆ. ಹೈದರಾಬಾದ್ ನನಗೆ ಎಲ್ಲವನ್ನು ನೀಡಿದೆ ಮತ್ತು ನನ್ನ ಜೀವನವನ್ನು ಇಲ್ಲಿಯೇ ಮುಂದುವರಿಸುತ್ತೇನೆ ಎಂದು ಸಮಂತಾ ಫ್ಯಾನ್ಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.
ಪ್ರಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ಒಬ್ಬರು ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಆಗಲಿದ್ದಾರೆ ಎಂದು ಇತ್ತಿಚೆಗಷ್ಟೇ ಭವಿಷ್ಯ ನುಡಿದಿದ್ದಾರೆ. ನಾಗಚೈತನ್ಯ ತಮ್ಮ ಸ್ಟಾರ್ಡಮ್ ಹೆಚ್ಚಿಸಿಕೊಂಡರೆ, ಸಮಂತಾ ಸೋಲುಗಳಿಂದ ತಮ್ಮ ಖ್ಯಾತಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಸಮಂತಾ ಮುಂಬೈಗೆ ಸ್ಥಳಾಂತರ ಆಗಲಿದ್ದಾರೆಂದು ಸಹ ಜ್ಯೋತಿಷಿ ಭವಿಷ್ಯ ನುಡಿದಿದ್ದು, ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮಂತಾರ ಅನೇಕ ಅಭಿಮಾನಿಗಳು ನೇರವಾಗಿಯೇ ಡಿವೋರ್ಸ್ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ, ಅದನೆಲ್ಲ ನಿರ್ಲಕ್ಷಿಸಿದ ಸಮಂತಾ ಕೇವಲ ಒಂದು ಪ್ರಶ್ನೆಯನ್ನು ಆಯ್ಕೆ ಮಾಡಿಕೊಂಡರು. ಆದರೆ, ಎಲ್ಲಿಯೂ ಇಬ್ಬರು ಪ್ರತ್ಯೇಕದ ವಿಚಾರದ ಬಗ್ಗೆ ಉಲ್ಲೇಖಿಸಲೇ ಇಲ್ಲ. ಇತರೆ ನೂರಾರು ವದಂತಿಗಳು ಮಾತ್ರ ಸುಳ್ಳು ಎಂದರು. ಆದರೆ, ಸರಿಯಾದ ಸ್ಪಷ್ಟನೆ ನೀಡದ ಸಮಂತಾ ಮತ್ತೆ ಅಡ್ಡಗೋಡೆ ಮೇಲೆ ದೀಪ ಇಟ್ಟಿರುವುದು ಅಭಿಮಾನಿಗಳನ್ನು ಮತ್ತೆ ಗೊಂದಲಕ್ಕೆ ದೂಡಿದೆ.
ಸಮಂತಾ ಅಥವಾ ನಾಗಚೈತನ್ಯ ಇಬ್ಬರಲ್ಲಿ ಯಾರಾದರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ತಿಳಿಸುತ್ತಾರೆಂದು ಇಬ್ಬರ ಅಭಿಮಾನಿಗಳು ಸಹ ಕಾದು ಕುಳಿತಿದ್ದಾರೆ. ಆದರೆ, ಈವರೆಗೂ ಇಬ್ಬರು ಕೂಡ ಸರಿಯಾಗಿ ಸ್ಪಷ್ಟನೆ ನೀಡಿಲ್ಲ. (ಏಜೆನ್ಸೀಸ್)
ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್ ಮಾತುಗಳನ್ನಾಡಿದ ಟಾಲಿವುಡ್ ಬ್ಯೂಟಿ
ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!
ಒಂದೇ ಒಂದು ಜವಾನನ ಕೆಲಸಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಿ..!
ಮೈಸೂರು ಗ್ಯಾಂಗ್ರೇಪ್ ಮಾಸುವ ಮುನ್ನವೇ ಮತ್ತೊಂದು ಘಟನೆ: ಏಕಾಂತದಲ್ಲಿ ಲವರ್ಸ್ ಮಧ್ಯೆ ಕೀಚಕರ ಎಂಟ್ರಿ