More

    ಬೆಂಗ್ಳೂರಲ್ಲಿ ಸುರಿದ ಭಾರೀ ಮಳೆಗೆ ಕಾರ್ಮಿಕರಿಬ್ಬರು ಬಲಿ: ಪೈಪ್​ಲೈನ್​ ಕಾಮಗಾರಿ ವೇಳೆ ದುರಂತ

    ಬೆಂಗಳೂರು: ನಿನ್ನೆ (ಮೇ.17) ರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಗೆ ಇಬ್ಬರು ಕಾರ್ಮಿಕರು ದುರಂತ ಸಾವಿಗೀಡಾಗಿರುವ ಘಟನೆ ಉಲ್ಲಾಳ ಉಪನಗರದ ಉಪ್ಕಾರ್ ಲೇಔಟ್ ಬಸ್ ನಿಲ್ದಾಣದ ಬಳಿ ನಡೆದಿದೆ.

    ಪೈಪ್​ಲೈನ್​ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದು, ಬಿಹಾರ ಮೂಲದ ದೇವಬಾತ್ ಮತ್ತು ಯುಪಿ ಮೂಲದ ಅಂಕಿತ್ ಕುಮಾರ್ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ 7 ಗಂಟೆ ನಡುವೆ ದುರಂತ ಸಂಭವಿಸಿದೆ.

    ಕಾವೇರಿ 5ನೇ ಹಂತದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮೂವರು ಕೆಲಸ ಮಾಡುತ್ತಿದ್ದರು. ಭಾರೀ ಮಳೆಯಿಂದಾಗಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ತ್ರಿಲೋಕ್ ಎಂಬುವರು ಪಾರಾಗಿದ್ದಾರೆ.

    ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಕಾಂಟ್ರಾಕ್ಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ.

    ನಡು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿದ 20 ವಿದ್ಯಾರ್ಥಿನಿಯರು: ಜಡೆ ಜಗಳದಲ್ಲಿ ಪಾಲಕರು ಭಾಗಿ, ವಿಡಿಯೋ ವೈರಲ್​!

    ನಿರ್ದೇಶಕ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್​​​​: ಸಿನಿಮಾ ಯೋಜನೆಯನ್ನೇ ಕೈಬಿಟ್ಟ ಪುಷ್ಪರಾಜ್​!

    ಮೇಲುಕೋಟೆಯಲ್ಲಿ ಶೀಘ್ರವೇ ನಿಲ್ಲಲಿದೆ ದೀವಟಿಗೆ ಸಲಾಂ! ಮುಜರಾಯಿ ಆಯುಕ್ತರಿಗೆ ಪತ್ರ ಬರೆದ ಮಂಡ್ಯ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts