ಕೊಚ್ಚಿ: ಮದುವೆ ಹೆಸರಿನಲ್ಲಿ ಹಿಂದೊಮ್ಮೆ ವಂಚನೆಗೆ ಒಳಗಾಗಿ ಭಾರೀ ಸುದ್ದಿಯಾಗಿದ್ದ ಬಹುಭಾಷಾ ನಟಿ ಶಾಮ್ನಾ ಖಾಸಿಂ ಅಲಿಯಾಸ್ ಪೂರ್ಣಾ ಮೇ ತಿಂಗಳ ಅಂತ್ಯದಲ್ಲಿ ನಿಶ್ವಿತಾರ್ಥ ಮಾಡಿಕೊಂಡು ಅದಕ್ಕೆ ಸಂಬಂಧಸಿದ ಫೋಟೋಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಮದುವೆಯ ಸುಳಿವು ನೀಡಿದ್ದರು.
ಇದೀಗ ಕೆಲವು ದಿನಗಳಿಂದ ವದಂತಿಯೊಂದು ಹರಿದಾಡುತ್ತಿದೆ. ಪೂರ್ಣಾ ಅವರ ಮದುವೆ ಮುರಿದುಬಿದ್ದಿದೆ ಎಂಬ ಸುದ್ದಿ ಕಾಳ್ಗಿಚ್ಚಿನ ರೀತಿ ಹರಡುತ್ತಿದ್ದಂತೆ ಇನ್ಸ್ಟಾಗ್ರಾಂನಲ್ಲಿ ಪೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಪೂರ್ಣಾ ಅವರು ಜೂನ್ 1ರಂದು ತಮ್ಮ ಭಾವಿ ಪತಿ ಜೊತೆಗಿರುವ ಫೋಟೋಳನ್ನು ಇನ್ಸ್ಟಾಗ್ರಾಂ ಶೇರ್ ಮಾಡಿಕೊಂಡಿದ್ದರು. ಕುಟುಂಬದ ಆಶೀರ್ವಾದದೊಂದಿಗೆ ಜೀವನದ ಮತ್ತೊಂದು ಹಂತಕ್ಕೆ ಪ್ರವೇಶಿಸುತ್ತಿದ್ದೇನೆಂದು ಶಾಮ್ನಾ ಹೇಳಿದ್ದರು. ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಸಹ ಕಲಾವಿದರು ಶಾಮ್ನಾ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.
ಜೆಬಿಎಸ್ ಗ್ರೂಪ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಶಾಜಿಜ್ ಆಸಿಫ್ ಅವರನ್ನು ಶಾಮ್ನಾ ಮದುವೆಯಾಗಲಿದ್ದು, ಅವರ ಜತೆಗಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಡುವ ಮೂಲಕ ಭಾವಿ ಪತಿಯನ್ನು ಎಲ್ಲರಿಗೂ ಈಗಾಗಲೇ ಪರಿಚಯಿಸಿದ್ದಾರೆ. ಆದರೆ, ಈಗ ಕೆಲ ಟ್ರೋಲರ್ಸ್ ಮದುವೆ ಮುರಿದುಬಿದ್ದಿದೆ ಎಂಬ ವದಂತಿ ಹರಿಬಿಟ್ಟಿದ್ದು, ಈ ಸುದ್ದಿ ಗೊತ್ತಾಗುತ್ತಿದ್ದಂತೆ ಪೂರ್ಣಾ, ತಮ್ಮ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಭಾವಿ ಪತಿಯನ್ನು ತಬ್ಬಿಕೊಂಡು ಚುಂಬಿಸುತ್ತಿದ್ದು, ಯಾವಾಗಲೂ ನನ್ನವನೇ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮದುವೆ ಮುರಿದುಬಿತ್ತು ಎಂಬ ವದಂತಿಗೆ ಬ್ರೇಕ್ ಹಾಕಿದ್ದಾರೆ. ಬಹುಶಃ ಶೀಘ್ರದಲ್ಲೇ ಇಬ್ಬರು ವಿವಾಹವಾಗಲಿದ್ದಾರೆ.
ಅಂದಹಾಗೆ ಕಣ್ಣೂರು ಮೂಲದ ಶಾಮ್ನಾ, ಮಂಜು ಪೊಲೊರು ಪೆಂಕುಟ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಶಾಮ್ನಾ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಜೋಶ್ ಮತ್ತು ಕೆಲವು ತಿಂಗಳ ಹಿಂದೆ ತೆರೆಕಂಡ ರಮೇಶ್ ಅರವಿಂದ್ ಅಭಿನಯದ 100 ಚಿತ್ರದಲ್ಲೂ ನಟಿಸಿದ್ದಾರೆ. ಮಲಯಾಳಂ ಹಾಗೂ ತಮಿಳಿನಲ್ಲಿ ಸಾಕಷ್ಟು ಚಿತ್ರದಲ್ಲಿ ನಟಿಸಿದ್ದಾರೆ. ನಟ ಸೂರ್ಯ ನಟನೆಯ ಕಾಪ್ಪನ್, ಜಯರಾಂ ಹಾಗೂ ವಿಜಯ್ ಸೇತುಪತಿ ಅಭಿನಯದ ಮಾರ್ಕೋನಿ ಮಥಾಯಿ ಮತ್ತು ಮಮ್ಮೂಟ್ಟಿ ನಟನೆಯ ಒರು ಕುಟ್ಟನದನ್ ಸೇರಿದಂತೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ. ಶಾಮ್ನಾ ಓರ್ವ ಒಳ್ಳೆಯ ಡಾನ್ಸರ್ ಕೂಡ ಹೌದು.
ಮದುವೆ ಹೆಸರಲ್ಲಿ ವಂಚನೆಗೆ ಒಳಗಾಗಿದ್ದ ಶಾಮ್ನಾ
ಈ ಹಿಂದೆ ಅಂದರೆ, 2020ರಲ್ಲಿ ಮದುವೆ ಹೆಸರಲ್ಲಿ ಶಾಮ್ನಾ ವಂಚನೆಗೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಆರೋಪಿಗಳಲ್ಲಿ ಓರ್ವ ಆರೋಪಿ ಶಾಮ್ನಾ ಅವರ ಮೊಬೈಲ್ ನಂಬರ್ ಪಡೆದು ಆರಂಭದಲ್ಲಿ ತಾನೋಬ್ಬ ಶ್ರೀಮಂತ, ಕೊಳಿಕ್ಕೋಡ್ ಮೂಲದ ಜ್ಯುವೆಲ್ಲರಿ ಮಾಲೀಕನಾಗಿದ್ದು, ದುಬೈನಲ್ಲಿ ಬಿಸಿನೆಸ್ ನಡೆಸುತ್ತಿದ್ದೇನೆಂದು ನಂಬಿಸಿದ್ದ. ನನ್ನ ಹೆಸರು ಅನ್ವರ್ ಅಲಿ ಎಂದು ನಕಲಿ ಹೆಸರಿನ ಮೂಲಕ ಶಾಮ್ನಾ ಅವರ ಪರಿಚಯ ಮಾಡಿಕೊಂಡಿದ್ದ. ಹೀಗೆ ಹಲವು ದಿನಗಳವರೆಗೆ ಮಾತನಾಡಿ ತುಂಬಾ ಹತ್ತಿರವಾಗಿದ್ದರು.
ಸಾಲದಕ್ಕೆ ಆರೋಪಿ ತನ್ನ ಕುಟುಂಬವನ್ನು ಶಾಮ್ನಾ ಅವರ ಕುಟುಂಬಕ್ಕೆ ಪರಿಚಯಿಸುವ ಮೂಲಕ ಮತ್ತಷ್ಟು ಹತ್ತಿರವಾಗಿದ್ದ. ಆ ಬಳಿಕ ಮದುವೆ ಪ್ರಸ್ತಾಪವನ್ನೂ ಮಾಡಿದ್ದ. ಅನ್ವರ್ ಕುಟುಂಬದೊಂದಿಗೆ ಮಾತಾನಾಡಿದ ಬಳಿಕ ಆತನನ್ನು ನಂಬಿದ್ದ ಶಾಮ್ನಾ ಕುಟುಂಬ, ಮದುವೆಗೂ ಒಪ್ಪಿಕೊಂಡಿತ್ತು. ಅಲ್ಲದೆ, ಶಾಮ್ನಾ ಅನ್ವರ್ ತಂದೆ-ತಾಯಿಯೊಂದಿಗೂ ಮಾತನಾಡಿದ್ದರು. ಇನ್ನೊಬ್ಬರನ್ನು ನಂಬಿಸಲು ನಕಲಿ ಕುಟುಂಬ ಸದಸ್ಯರನ್ನು ತಂತ್ರಗಾರಿಕೆಯಾಗಿ ಆರೋಪಿ ಬಳಸಿಕೊಳ್ಳುತ್ತಿದ್ದ.
ಎಲ್ಲವೂ ಆರೋಪಿ ಅಂದುಕೊಂಡಂತೆ ನಡೆದಿತ್ತು. ಎರಡು ಕುಟುಂಬದ ಭೇಟಿಗೆ 2020ರ ಜುಲೈ 3ಕ್ಕೆ ದಿನಾಂಕ ನಿಗದಿಯಾಗಿತ್ತು. ಜುಲೈ 3ರ ಸಂಜೆ ನಮ್ಮ ಕುಟುಂಬದ ಆರು ಮಂದಿ ನಿಮ್ಮ ಮನೆಗೆ ಬರುತ್ತೇವೆ ಎಂದು ಅನ್ವರ್ ಹೇಳಿದ್ದ. ಅದಕ್ಕೂ ಮುಂಚೆ ಶಾಮ್ನಾರಿಗೆ ಕರೆ ಮಾಡಿ, ನಮ್ಮ ಅಂಕಲ್ ಮತ್ತು ಸೋದರಸಂಬಂಧಿಗಳು ತುರ್ತು ಕೆಲಸದ ಮೇರೆಗೆ ಕೊಳ್ಳಿಕೋಡ್ನಿಂದ ಕೊಚ್ಚಿಗೆ ಆಗಮಿಸಿದ್ದಾರೆ. ಅವರು ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದ. ಅನ್ವರ್ ಕುಟುಂಬದವರು ಹೇಳಿಕೊಂಡು 6 ಮಂದಿ ಶಾಮ್ನಾ ಮನೆಗೆ ಭೇಟಿ ನೀಡಿ 1 ಲಕ್ಷ ರೂ. ಹಣ ಕೇಳಿದ್ದರು. ಇದರಿಂದ ಅನುಮಾನಗೊಂಡ ಶಾಮ್ನಾ ಕುಟುಂಬ ಹಣ ನೀಡಲು ನಿರಾಕರಿಸಿದ್ದರು. ಬಳಿಕ ಹೊರ ಹೋಗುವಾಗ ಶಾಮ್ನಾ ಮನೆಯ ಹೊರಾಂಗಣ ಮತ್ತು ಕಾರನ್ನು ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿಕೊಂಡು ಹೋಗಿದ್ದರು.
ಬಳಿಕ ಶಾಮ್ನಾ ಅನ್ವರ್ಗೆ ಕರೆ ಮಾಡಿ ನಡೆದಿದ್ದನ್ನೆಲ್ಲಾ ಹೇಳಿದರು. ಬಳಿಕ ಇಬ್ಬರ ನಡುವಿನ ಮಾತುಕತೆ ವಾಗ್ವಾದಕ್ಕೆ ತಿರುಗಿ ತನ್ನ ವರಸೆ ಬದಲಿಸಿದ ಅನ್ವರ್, ಶಾಮ್ನಾಗೆ ಬೆದರಿಕೆ ಹಾಲಕು ಶುರು ಮಾಡಿದ. ನಿನ್ನ ವೃತ್ತಿಯನ್ನೇ ಕೊನೆಗಾಣಿಸುತ್ತೇನೆ, ಕೇಳಿದಷ್ಟು ಹಣ ಕೊಡದಿದ್ದರೆ ನನ್ನ ಬಳಿಯಿರುವ ನಿನ್ನ ಪೋಟೋಗಳು, ವಿಡಿಯೋಗಳು ಮತ್ತು ಮಸೇಜ್ಗಳನ್ನು ಬಹಿರಂಗಪಡಿಸುತ್ತೇನೆಂದು ಬೆದರಿಕೆವೊಡ್ಡಿದ್ದ. ಬಳಿಕ ಎಚ್ಚೆತ್ತ ಶಾಮ್ನಾ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಶಾಮ್ನಾ ಬಳಿ ಮೊಬೈಲ್ ನಂಬರ್ ಪಡೆದು ಜಾಡು ಪತ್ತೆಹಚ್ಚಿದಾಗ ಮೊಬೈಲ್ ನಂಬರ್ ಅನ್ವರ್ ಅಲಿ ಹೆಸರಿನಲ್ಲಿ ಇರಲಿಲ್ಲ. ಹೀಗಾಗಿ ಅನ್ವರ್ ಎಂಬ ನಕಲಿ ಹೆಸರಿನಲ್ಲಿ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. (ಏಜೆನ್ಸೀಸ್)
ಇದೊಂದು ಪರಿಪೂರ್ಣ ಸೀಕ್ವೆಲ್; ಗಾಳಿಪಟ ಪ್ರೀತಿ ಪ್ರಯಾಣ ಹಾಸ್ಯ ಹಾಡು …
ಲೋಕಾ ಬಲ ಕಸಿದು ಕೈಗೊಂಬೆಯಾಗಿದ್ದ ಎಸಿಬಿ: ಸಣ್ಣವರ ಮೇಲಷ್ಟೇ ಪ್ರತಾಪ..