ಹೈದರಾಬಾದ್: ಮಧ್ಯರಾತ್ರಿ ಗರ್ಲ್ಫ್ರೆಂಡ್ ಬೆಡ್ರೂಮ್ಗೆ ನುಗ್ಗಿದ ಯುವಕನೊಬ್ಬ ಆಕೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಹೈದರಾಬಾದ್ನ ಗಾಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ವಟ್ಟಿನಗುಪಲ್ಲಿಯಲ್ಲಿ ನಡೆದಿದೆ. ಯುವತಿ ಜೋರಾಗಿ ಕೂಗಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಪಾಲಕರು ಆರೋಪಿ ಯುವಕನನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಬಯಾನಾ ಪ್ರೇಮ್ ಸಿಂಗ್ (21) ಜೀಡಿಮೆಟ್ಲ ನಿವಾಸಿ. ಈತ ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿ (ಕೆಪಿಬಿಎಚ್)ಯ ಎಂಎನ್ಆರ್ ಪದವಿ ಕಾಲೇಜಿನ ವಿದ್ಯಾರ್ಥಿ. ರುಖಿ ಸಿಂಗ್ (21) ಮಧುಫುರ್ನ ವೆಂಕಟೇಶ್ವರ ಫೈನ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿನಿ. ಇಬ್ಬರು ಸಂಬಂಧಿಕರಾಗಿರುವುದರಿಂದ ಒಬ್ಬರಿಗೊಬ್ಬರು ಪರಿಯಸ್ಥರು.
ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಟ್ಟಿನಗುಲಪಲ್ಲಿಯಲ್ಲಿರುವ ರುಖಿ ಸಿಂಗ್ ಮನೆಗೆ ತೆರಳಿದ ಪ್ರೇಮ್ ಸಿಂಗ್, ಆಕೆಯ ಬೆಡ್ ರೂಮ್ ಬಾಗಿಲನ್ನು ಬಡಿಯುತ್ತಾನೆ. ಆಕೆ ಬಾಗಿಲು ತೆಗೆಯುತ್ತಿದ್ದಂತೆ ಆಕೆಯ ಗಂಟಲನ್ನು ಸೀಳಲು ಆರೋಪಿ ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾಗುವ ರುಖಿ ಸಿಂಗ್ ಜೋರಾಗಿ ಕೂಗುತ್ತಾಳೆ. ತಕ್ಷಣ ಎಚ್ಚರಗೊಳ್ಳುವ ಕುಟುಂಬಸ್ಥರು ಆರೋಪಿಯನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ.
ಇತ್ತ ಚಾಕು ದಾಳಿಯಿಂದ ಗಂಟಲು, ಅಂಗೈ, ಕಾಲು ಮತ್ತು ಮೊಣಕೈನಲ್ಲಿ ಗಾಯಗೊಂಡಿದ್ದ ರುಖಿ ಸಿಂಗ್ಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ಗಾಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರೇಮ್ ಸಿಂಗ್ ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್)
ದಕ್ಷಿಣ ಭಾರತದ ಚಿತ್ರಗಳಲ್ಲಿ ಈವರೆಗೂ ನಟಿಸದಿರಲು ಜಾಹ್ನವಿ ಕಪೂರ್ ಕೊಟ್ಟ ಕಾರಣ ಹೀಗಿದೆ..!
ಈ ಇಟಲಿಯವಳ ಕಾಟ ತಾಳಲಾರೆ, ಪ್ಲೀಸ್ ನನ್ನನ್ನು ಅರೆಸ್ಟ್ ಮಾಡಿ ಜೈಲಿಗೆ ದಬ್ಬಿಬಿಡಿ ಎಂದು ಅಂಗಲಾಚಿದ ಪತಿ!
ಪಾಕ್ ಪರ ಘೋಷಣೆ: ಆಗ್ರಾ ಪೊಲೀಸರಿಂದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ