ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನ ಶಿಕ್ಷಣ ಕೇಂದ್ರವೊಂದರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 100 ಮಕ್ಕಳು ಮೃತಪಟ್ಟಿರುವುದಾಗಿ ಶುಕ್ರವಾರ ವರದಿಯಾಗಿದೆ.
ಘಟನೆಯಲ್ಲಿ ಹತ್ಯೆಗೀಡಾದ ಬಹುತೇಕ ಮಕ್ಕಳು ಹಜಾರಸ್ ಮತ್ತು ಶಿಯಾ ಪಂಗಡಕ್ಕೆ ಸೇರಿದವರೆಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಹಜಾರಸ್, ಆಫ್ಘಾನ್ನ ಮೂರನೇ ಅತಿ ದೊಡ್ಡ ಜನಾಂಗೀಯ ಗುಂಪಾಗಿದೆ. ಕಾಬೂಲ್ ನಗರದ ಪಶ್ಚಿಮ ಭಾಗದಲ್ಲಿರುವ ದಶ್ತ್ ಇ ಬಾರ್ಚಿಯ ಕಾಜ್ ಶಿಕ್ಷಣ ಕೇಂದ್ರದಲ್ಲಿ ಬಾಂಬ್ ಸ್ಫೋಟಿಸಲಾಗಿದೆ.
ಘಟನೆಯ ಬಗ್ಗೆ ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಟ್ವೀಟ್ ಮಾಡಿದ್ದು, ಇಲ್ಲಿವರೆಗೆ ನಾವು 100 ವಿದ್ಯಾರ್ಥಿಗಳ ಮೃತದೇಹವನ್ನು ಲೆಕ್ಕ ಹಾಕಿದ್ದೇವೆ. ದಾಳಿಯಲ್ಲಿ ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಯೂನಿವರ್ಸಿಟಿ ಪ್ರವೇಶ ಪರೀಕ್ಷೆಯಾಗಿದ್ದರಿಂದ ತರಗತಿ ತುಂಬಿ ತುಳುಕುತ್ತಿತ್ತು. ಸ್ಫೋಟದ ಪರಿಣಾಮ ಕೈ-ಕಾಲುಗಳು ಹಾಗೂ ದೇಹದ ಭಾಗಗಳು ಛಿದ್ರ ಛಿದ್ರವಾಗಿದ್ದು, ಇಡೀ ಘಟನಾ ಸ್ಥಳ ಭೀಕರವಾಗಿತ್ತು ಎಂದಿದ್ದಾರೆ.
“We have so far counted 100 dead bodies of our students. The number of students killed is much higher. Classroom was packed. This was a mock university entrance exam, so students could prepare for the real one.” A member of the Kaaj higher education center tells me.
— BILAL SARWARY (@bsarwary) September 30, 2022
ಬಾಂಬ್ ದಾಳಿಗೂ ಮುನ್ನ ತುಂಬಿದ್ದ ತರಗತಿಯ ವಿಡಿಯೋ ಮತ್ತು ದಾಳಿಯ ನಂತರ ಶಾಲೆಯ ಸ್ಥಿತಿ ಮತ್ತು ವಿದ್ಯಾರ್ಥಿಗಳ ಶವಗಳು ಬಿದ್ದಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದಾಳಿಯ ತೀವ್ರತೆಗೆ ಸಾಕ್ಷಿಯಾಗಿವೆ.
VIDEO from the before the blast showing the class of students that was targeted. #Afghanistan pic.twitter.com/EomWpjonI4
— FJ (@Natsecjeff) September 30, 2022
ಪಶ್ಚಿಮ ಕಾಬೂಲ್ನ ದಷ್ಟೆ ಬರ್ಚೆ ಏರಿಯಾವು ನಿರಂತರವಾಗಿ ಐಎಸ್ಕೆಪಿ ದಾಳಿಗೆ ಗುರಿಯಾಗುತ್ತಿದೆ. ಬಾಂಬ್ ದಾಳಿ ನಡೆದಾಗ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಯಾರು ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ವಕ್ತಾರ ಖಾಲಿದ್ ಜರ್ದಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಅಮೆರಿಕ ಕೂಡ ಬಾಂಬ್ ದಾಳಿಯನ್ನು ಖಂಡಿಸಿದೆ. (ಏಜೆನ್ಸೀಸ್)
#AFG Brutal attack against one of Afghanistan’s most oppressed communities. Dashte Barche in West Kabul have been constantly the target of deadly ISKP attacks. Hazaras and Shias murdered inside their classrooms. #NOTJUSTNUMBERSLIVES pic.twitter.com/viZ46TXUC7
— BILAL SARWARY (@bsarwary) September 30, 2022
ಬೆಂಗಾವಲು ವಾಹನ ನಿಲ್ಲಿಸಿ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ! ವಿಡಿಯೋ ವೈರಲ್
ನಟ ವಿಶಾಲ್ ಮನೆಯ ಮೇಲೆ ಕಲ್ಲು ತೂರಾಟ: ದಾಳಿ ಹಿಂದಿನ ಕಾರಣ ಬಿಚ್ಚಿಟ್ಟ ನಾಲ್ವರು ಆರೋಪಿಗಳು
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ವಿಜೇತ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ