ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ವಿಶಾಲ್ ಅವರ ಚೆನ್ನೈ ನಿವಾಸದ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದಾಳಿ ನಡೆಸಿದ್ದರ ಹಿಂದಿನ ಕಾರಣ ಏನೆಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದ ಆರೋಪಿಗಳು ಏಕಾಏಕಿ ವಿಶಾಲ್ ಮನೆಯ ಮೇಲೆ ಕಲ್ಲುಗಳನ್ನು ತೂರಾಡಿ ದಾಳಿ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು. ಈ ಸಂಬಂಧ ವಿಶಾಲ್ ಅವರ ಆಪ್ತ ಸಹಾಯಕ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಲ್ಲಿ ಒಬ್ಬನಾಗಿರುವ ಪುದುಕೊಟ್ಟೈ ಮೂಲದ ಮಣಿರತ್ನಂ ಸಿವಿಲ್ ಇಂಜಿನಿಯರ್ ಎಂಬುದು ತಿಳಿದುಬಂದಿದೆ. ಉಳಿದ ಮೂವರು ಆರೋಪಿಗಳು ಚೆನ್ನೈ ಮೂಲದವರು. ನಾಲ್ವರು ಆರೋಪಿಗಳು ಕೂಡ ಸ್ನೇಹಿತರಾಗಿದ್ದು, ವಿಶಾಲ್ ಅವರ ಮನೆಯ ಬಳಿ ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡಿದ್ದರು. ಈ ವೇಳೆ ಪರಸ್ಪರ ಹಲ್ಲೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕಲ್ಲು ವಿಶಾಲ್ ಅವರ ಮನೆಯ ಕಿಟಕಿಗೆ ಬಡಿದಿದೆ ಎಂದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇನ್ನು ವಿಶಾಲ್ ಅವರ ಸಿನಿಮಾ ವಿಚಾರಕ್ಕೆ ಬಂದರೆ, ತಮ್ಮ ಮುಂದಿನ ಲಾಠಿ ಚಿತ್ರದ ಶೂಟಿಂಗ್ ಅನ್ನು ವಿಶಾಲ್ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮುಂದೆ “ಮಾರ್ಕ್ ಆ್ಯಂಟೋನಿ” ಸಿನಿಮಾದಲ್ಲಿ ವಿಶಾಲ್ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ವಿಜೇತ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ
ಬೆಂಗಳೂರು ಮಳೆ ಅವಾಂತರ: 11 ಲಕ್ಷ ರೂ. ಮೌಲ್ಯದ ಕಾರು ರಿಪೇರಿಗೆ ಅಂದಾಜು ಬಿಲ್ ನೋಡಿ ಮಾಲೀಕ ಶಾಕ್
ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್: ಹೈಕೋರ್ಟ್ ನೀಡಿದೆ ಈ ಗಡುವು….