More

    ನಟ ವಿಶಾಲ್​ ಮನೆಯ ಮೇಲೆ ಕಲ್ಲು ತೂರಾಟ: ದಾಳಿ ಹಿಂದಿನ ಕಾರಣ ಬಿಚ್ಚಿಟ್ಟ ನಾಲ್ವರು ಆರೋಪಿಗಳು

    ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ವಿಶಾಲ್​ ಅವರ ಚೆನ್ನೈ ನಿವಾಸದ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದಾಳಿ ನಡೆಸಿದ್ದರ ಹಿಂದಿನ ಕಾರಣ ಏನೆಂಬುದು ವಿಚಾರಣೆಯಿಂದ ತಿಳಿದುಬಂದಿದೆ.

    ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದ ಆರೋಪಿಗಳು ಏಕಾಏಕಿ ವಿಶಾಲ್​ ಮನೆಯ ಮೇಲೆ ಕಲ್ಲುಗಳನ್ನು ತೂರಾಡಿ ದಾಳಿ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು. ಈ ಸಂಬಂಧ ವಿಶಾಲ್​ ಅವರ ಆಪ್ತ ಸಹಾಯಕ ದೂರು ದಾಖಲಿಸಿದ್ದರು.

    ತನಿಖೆ ಆರಂಭಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಲ್ಲಿ ಒಬ್ಬನಾಗಿರುವ ಪುದುಕೊಟ್ಟೈ ಮೂಲದ ಮಣಿರತ್ನಂ ಸಿವಿಲ್​ ಇಂಜಿನಿಯರ್​ ಎಂಬುದು ತಿಳಿದುಬಂದಿದೆ. ಉಳಿದ ಮೂವರು ಆರೋಪಿಗಳು ಚೆನ್ನೈ ಮೂಲದವರು. ನಾಲ್ವರು ಆರೋಪಿಗಳು ಕೂಡ ಸ್ನೇಹಿತರಾಗಿದ್ದು, ವಿಶಾಲ್ ಅವರ ಮನೆಯ ಬಳಿ ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡಿದ್ದರು. ಈ ವೇಳೆ ಪರಸ್ಪರ ಹಲ್ಲೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕಲ್ಲು ವಿಶಾಲ್​ ಅವರ ಮನೆಯ ಕಿಟಕಿಗೆ ಬಡಿದಿದೆ ಎಂದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

    ಇನ್ನು ವಿಶಾಲ್​ ಅವರ ಸಿನಿಮಾ ವಿಚಾರಕ್ಕೆ ಬಂದರೆ, ತಮ್ಮ ಮುಂದಿನ ಲಾಠಿ ಚಿತ್ರದ ಶೂಟಿಂಗ್​ ಅನ್ನು ವಿಶಾಲ್​ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮುಂದೆ “ಮಾರ್ಕ್​ ಆ್ಯಂಟೋನಿ” ಸಿನಿಮಾದಲ್ಲಿ ವಿಶಾಲ್​ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ವಿಜೇತ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ

    ಬೆಂಗಳೂರು ಮಳೆ ಅವಾಂತರ: 11 ಲಕ್ಷ ರೂ. ಮೌಲ್ಯದ ಕಾರು ರಿಪೇರಿಗೆ ಅಂದಾಜು ಬಿಲ್ ನೋಡಿ ಮಾಲೀಕ ಶಾಕ್​​

    ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್​: ಹೈಕೋರ್ಟ್​ ನೀಡಿದೆ ಈ ಗಡುವು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts