ಹಾವೇರಿ: ಬೈಕ್ವೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಅದನ್ನು ಓಡಿಸುವ ಬದಲು ಜನರು ಬೈಕ್ನ ಬಿಡಿಭಾಗ ಬಿಚ್ಚಿ ಆ ಹಾವನ್ನು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ. ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೃಷಿಕ ರಮೇಶ್ ಚಿನಕಾಳಿ ಎಂಬುವವರ ಬೈಕ್ನಲ್ಲಿ ಸೇರಿಕೊಂಡಿದ್ದ ನಾಗರಹಾವು ಜನರ ಕ್ರೌರ್ಯಕ್ಕೆ ಬಲಿಯಾಗಿದೆ. ಅವರು ಕೆಲಸಕ್ಕೆಂದು ಜಮೀನಿಗೆ ಬೈಕ್ ತೆಗೆದುಕೊಂಡು ಹೋಗಿದ್ದರು. ಮನೆಗೆ ಮರಳುವಾಗ ಬೈಕ್ ಸೀಟ್ ಅಡಿಯಲ್ಲಿ ಹಾವು ಸೇರಿಕೊಂಡಿತ್ತು.
ಅಲ್ಲಿ ಹಾವು ಇರುವುದನ್ನು ಕಂಡು ಅಜ್ಜಿಯೊಬ್ಬರು ಬೆಚ್ಚಿಬಿದ್ದಿದ್ದರು. ಎಷ್ಟು ಹೊತ್ತಾದರೂ ಹಾವು ಪೂರ್ಣವಾಗಿ ಹೊರಗೆ ಬರದ್ದರಿಂದ ಆ ಜಾಗದಲ್ಲಿ ಸೀಮೆಎಣ್ಣೆ ಹಾಕಿ ಹಾವು ಅಲ್ಲಿಂದ ಹೊರಬರುವಂತೆ ಮಾಡಿ ಕೆಳಕ್ಕೆ ಬೀಳಿಸಿದ ಜನರು ಅದನ್ನು ಹೊಡೆದು ಸಾಯಿಸಿದ್ದಾರೆ. ಈ ಬಗ್ಗೆ ಉರಗಪ್ರಿಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಹಾವನ್ನು ಹೊಡೆದು ಸಾಯಿಸುವ ಬದಲು ಉರಗಪರಿಣತರನ್ನು ಕರೆಸಿ ಹಿಡಿಸಿ ಕಾಡಿಗೆ ಬಿಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾವನ ಮಗನಿಂದಲೇ ಮತ್ತೆ ಮತ್ತೆ ಅತ್ಯಾಚಾರ?; ಅಜ್ಜಿ ತೀರಿ ಹೋದಾಗ ಊರಿಗೆ ಬಂದಿದ್ದ ಯುವತಿಗೆ ಮದುವೆ ಆಮಿಷ…
ಇನ್ನೆರಡು ತಿಂಗಳಂತೂ ಬಹಳ ಹುಷಾರಾಗಿರಬೇಕು: ನೀತಿ ಆಯೋಗದ ಸದಸ್ಯರ ಎಚ್ಚರಿಕೆ
ಡಾ.ವಿಷ್ಣುಗೆ ಪೂಜೆ ಮಾಡ್ಬೇಕು ಪ್ಲೀಸ್ ಬಿಟ್ಬಿಡಿ… ಎಂದು ಅಧಿಕಾರಿಗಳ ಕಾಲಿಗೆ ಬಿದ್ರೂ ಪ್ರತಿಮೆ ತೆರವು ಮಾಡ್ಬಿಟ್ರು