More

    ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಿ

    ಹುಣಸೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಮನು ಅಭಿಪ್ರಾಯಪಟ್ಟರು.

    ನಗರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ, ಐಟಿಸಿ ಮತ್ತು ಔಟ್‌ರೀಚ್ ಸಂಸ್ಥೆಯ ಸಹಯೋಗದಲ್ಲ್ಲಿ ಗ್ರಾಮೀಣ ಭಾಗದಲ್ಲಿ ದ್ರವತ್ಯಾಜ್ಯ ನಿರ್ವಹಣೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆರಂಭಿಕ ಹಂತದಲ್ಲೇ ತ್ಯಾಜ್ಯಗಳ ಸಮರ್ಪಕ ವಿಂಗಡಣೆ ಮತ್ತು ನಿರ್ವಹಣೆ ಪರಿಣಾಮಕಾರಿಯಾಗಿ ಕೈಗೊಂಡಲ್ಲಿ ಪರಿಸರ ಕಲುಷಿತಗೊಳ್ಳುವ ಪ್ರಮಾಣ ಕಡಿಮೆಯಾಗುವುದು. ಕೈಗಾರಿಕೆಗಳಿಂದ ಮಾತ್ರ ಪರಿಸರ ಮಾಲಿನ್ಯ, ದ್ರವತ್ಯಾಜ್ಯಗಳ ಮಲಿನತೆ ಉಂಟಾಗುತ್ತದೆ ಎಂಬ ಭಾವನೆ ಬೇಡ. ಗೃಹಬಳಕೆಯ ತ್ಯಾಜ್ಯ ನೀರಿನಿಂದ ಕೂಡ ಅಕ್ಕಪಕ್ಕದ ಕೆರೆ, ನದಿಗಳ ಒಡಲು ಕಲುಷಿತವಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಕೇವಲ ಒಬ್ಬರ ಜವಾಬ್ದಾರಿಯಲ್ಲ. ಎಲ್ಲರ ಸಹಕಾರದಿಂದ ಮಾತ್ರ ಸ್ವಚ್ಛತೆ ಕಾಪಾಡಲು ಸಾಧ್ಯವೆನ್ನುವುದನ್ನು ಅರಿಯೋಣವೆಂದರು.

    ಸಿಡಿಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರೋಹಿಣಿ ಪ್ರದೀಪ್ ಮಾತನಾಡಿ, ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 55 ಲೀಟರ್ ನೀರು ಬೇಕು. ಇದರಲ್ಲಿ ಶೇ.70 ರಿಂದ 80 ರಷ್ಟು ನೀರು ಬೂದು ನೀರಾಗಿ ಪರಿವರ್ತನೆಯಾಗುತ್ತದೆ. ಕೈತೋಟ, ಇಂಗು ಗುಂಡಿ, ಸಮುದಾಯ ಇಂಗು ಗುಂಡಿ, ಚರಂಡಿಗಳ ನೀರು ನಿರ್ವಹಣೆಯನ್ನು ಮಾಡುವುದರ ಮೂಲಕ ಬೂದು ನೀರನ್ನು ಸಂಸ್ಕರಣೆ ಮಾಡುವುದರಿಂದ ಅಂರ್ತಜಲವನ್ನು ವೃದ್ಧಿಸುವುದರ ಜತೆಗೆ ನೀರನ್ನು ಮರು ಬಳಕೆ ಮಾಡಬಹುದು ಎಂದರು.

    ಐಟಿಸಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಮನೋಜ್ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಘನ ಹಾಗೂ ದ್ರವತ್ಯಾಜ್ಯ ನಿರ್ವಹಣೆ ಮಾಡಲು ಜಿಲ್ಲೆಯ 256 ಗ್ರಾಮ ಪಂಚಾಯಿತಿಗಳಿಗೆ ಐಇಸಿ ಚಟುವಟಿಕೆಗಳ ಮೂಲಕ ಚುನಾಯಿತ ಪ್ರತಿನಿಧಿಗಳು, ಪಿಡಿಒ, ಸಂಜೀವಿನಿ ಒಕ್ಕೂಟ ಜಾಗೃತಿ ಮೂಡಿಸಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಾಗಾರದಲ್ಲಿ 41 ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಔಟ್‌ರೀಚ್ ಸಂಸ್ಥೆಯ ಸಂಯೋಜಕರಾದ ಪ್ರಶಾಂತ್, ಮಹೇಶಪ್ರಸಾದ್, ಜಿ.ಎಸ್.ಜಗದೀಶ, ಕ್ಷೇತ್ರ ಸಿಬ್ಬಂದಿ ಶಶಿಕುಮಾರ, ಮಹದೇಶ, ಸಂಪತ್ತು ಸೇರಿದಂತೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts