ಲಿಂಗಸುಗೂರು: ಕಚೇರಿಗಳನ್ನು ಸ್ವಂತ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಎಸಿ ಕಚೇರಿ ಎಫ್ಡಿಸಿ ಅಮರೇಶಗೆ ಸೋಮವಾರ ಮನವಿ ಸಲ್ಲಿಸಿದರು.
ಬಾಡಿಗೆ ಕಟ್ಟಡದಿಂದ ಹಣ ವ್ಯರ್ಥ
ಪಟ್ಟಣದಲ್ಲಿ ಹಳೆಯ ಗ್ರಂಥಾಲಯ, ತಾಲೂಕು ಪಂಚಾಯ್ತಿ, ಬಿಸಿಯೂಟ, ಪ್ರಥಮ ದರ್ಜೆ ಕಾಲೇಜು, ಬಾಲಕರ ವಸತಿ ನಿಲಯ, ಬಿಸಿಎಂ ಬಾಲಕಿಯರ ವಸತಿ ನಿಲಯ ಹಾಗೂ ಅನೇಕ ಕಟ್ಟಡಗಳು ಖಾಲಿ ಇವೆ. ಆದರೂ ಕಾರ್ಮಿಕ ಇಲಾಖೆ, ಬಿಸಿಎಂ, ಮಹಿಳಾ ವಸತಿ ನಿಲಯ, ಯೋಜನಾ ಪ್ರಾಧಿಕಾರ, ಅಬಕಾರಿ ಇಲಾಖೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ, ಸಿಡಿಪಿಒ, ಭೂ ಸೇನಾ ಸೇರಿ ಅನೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ಸರ್ಕಾರದ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕ್ರಿಸ್ಮಸ್ ಉಡುಗೊರೆಗಳ ನಡುವೆ ಇದೆ ಉಂಗರ; ಅದ್ಭುತ ದೃಷ್ಟಿ ಇದ್ದರೆ 7 ಸೆಕೆಂಡುಗಳಲ್ಲಿ ಪತ್ತೆ ಮಾಡಿ….
ಬರ ನಿರ್ವಹಣೆಗೆ ಸರ್ಕಾರ ಹರಸಾಹಸ ಪಡುತ್ತಿದೆ. ಸ್ವಂತ ಕಟ್ಟಡಗಳನ್ನು ಬಳಸಿಕೊಂಡಾದ ಹಣ ಉಳಿತಾಯವಾಗಲಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.