ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ದಸರಾ ಉದ್ಘಾಟನಾ ಸಮಾರಂಭಕ್ಕೆ ಮೈಸೂರಿನಲ್ಲಿ ತಯಾರಿಸಲಾದ ರೇಷ್ಮೆ ಸೀರೆಯನ್ನೇ ಧರಿಸಿದ್ದು ವಿಶೇಷವಾಗಿತ್ತು.
ದಸರಾ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಲು ದೆಹಲಿಗೆ ಹೋಗಿದ್ದಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಈ ಸೀರೆಯನ್ನು ದ್ರೌಪದಿ ಮುರ್ಮು ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಇಂದು ರಾಷ್ಟ್ರಪತಿಯವರು ಅದೇ ಸೀರೆ ಧರಿಸಿ ಮೈಸೂರಿಗೆ ಬಂದಿದ್ದರು. 70 ಸಾವಿರ ರೂಪಾಯಿ ಬೆಲೆಯ, ಕೆನೆ ಬಣ್ಣದ ಈ ರೇಷ್ಮೆ ಸೀರೆ, ವೇದಿಕೆ ಕಾರ್ಯಕ್ರಮದಲ್ಲೂ ಎಲ್ಲರ ಗಮನ ಸೆಳೆಯಿತು.
ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಗೆ ಬಿದ್ದು ಸಾವು!; ಇನ್ನೊಂದು ವಾರ ಕಳೆದಿದ್ದರೆ ಫಸ್ಟ್ ಬರ್ತ್ಡೇ..