ಕಾನ್ಪುರ: ಅಯೋಧ್ಯೆಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಸುಸಂದರ್ಭದಲ್ಲಿ ದೇಶದೆಲ್ಲೆಡೆ ಸಂತಸ ಕಾಣುತ್ತಿದೆ. ಒಂದೆಡೆ, ಜನವರಿ 22 ರಂದು ಅಯೋಧ್ಯೆಗೆ ಹೋಗಲು ದೇಶಾದ್ಯಂತ ಜನರು ಪೈಪೋಟಿ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ, ಈ ವಿಶೇಷ ದಿನ ಅಂದರೆ ಜನವರಿ 22 ರಂದು ಗರ್ಭಿಣಿಯರಲ್ಲಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ.
ಜನವರಿ 22 ರ ಆಸುಪಾಸಿನಲ್ಲಿ ಹೆರಿಗೆಯ ಸಮಯ ಹೊಂದಿರುವ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕಾನ್ಪುರ ವೈದ್ಯಕೀಯ ಕಾಲೇಜಿಗೆ ಸಂಯೋಜಿತವಾಗಿರುವ ಆಸ್ಪತ್ರೆಯ ವೈದ್ಯರಿಗೆ ಆಪರೇಷನ್ ಮಾಡಿ ಜನವರಿ 22 ರಂದು ಹೆರಿಗೆ ಮಾಡುವಂತೆ ವಿನಂತಿಸುತ್ತಿದ್ದಾರೆ. ಇದರ ಹಿಂದಿರುವ ಅವರ ತರ್ಕವೆಂದರೆ ಈ ವಿಶೇಷ ಮತ್ತು ಮಂಗಳಕರ ದಿನದಂದು ಜನಿಸಿದ ತಮ್ಮ ಮಗುವು ಭಗವಾನ್ ಶ್ರೀರಾಮನಂತಹ ಗುಣಗಳು ಮತ್ತು ಮೌಲ್ಯಗಳನ್ನು ಹೊಂದಿರುತ್ತದೆ. ಎರಡನೆಯ ತರ್ಕವೆಂದರೆ ಅವರ ಮಗು ಈ ದಿನದಂದು ಜನಿಸಿದರೆ, ಭವಿಷ್ಯದಲ್ಲಿ ಅವರು ಈ ವಿಶೇಷ ದಿನದಿಂದ ಆಶೀರ್ವದಿಸಲ್ಪಟ್ಟಿರುತ್ತದೆ. ಹಾಗೆಯೇ ಆ ನೆನಪು ಯಾವಾಗಲೂ ಅವರ ಮನಸ್ಸಿನಲ್ಲಿ ಉಳಿಯುತ್ತದೆ.
ಮಹಿಳೆಯರಿಂದ ಮನವಿ ಸಲ್ಲಿಕೆ
ಕಾನ್ಪುರದ ಜಿಎಸ್ವಿಎಂ ವೈದ್ಯಕೀಯ ಕಾಲೇಜು ಅಧೀನದ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯೆ ಸೀಮಾ ದ್ವಿವೇದಿ ಮಾತನಾಡಿ, ಹೆಚ್ಚಿನ ಗರ್ಭಿಣಿಯರಿಗೆ ಜನವರಿ ತಿಂಗಳಿನಲ್ಲಿ ಮತ್ತು ಜನವರಿ 22 ರ ಸುಮಾರಿಗೆ ದಿನಾಂಕವಿದೆ. ಅವರು ಜನವರಿ 22 ರಂದು ಹೆರಿಗೆಯಾಗಬೇಕು ಎಂದು ಹೇಳುತ್ತಾರೆ. ಈವರೆಗೆ ಸುಮಾರು 13 ರಿಂದ 14 ಮಹಿಳೆಯರು ಸಂಪರ್ಕಿಸಿ ಇಂತಹ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಮಹಿಳೆಯರು ಇಂತಹ ನಿರ್ದಿಷ್ಟ ಸಮಯದಲ್ಲಿ ತಮ್ಮ ಮಕ್ಕಳ ಜನನಕ್ಕಾಗಿ ವಿನಂತಿಸುತ್ತಿದ್ದರು, ಆದರೆ ಜನವರಿ 22 ಈ ದಿನಾಂಕಕ್ಕೆ ಗರ್ಭಿಣಿಯರಲ್ಲಿ ಹೆಚ್ಚಿನ ಉತ್ಸಾಹವಿದೆ. ಜನವರಿ 22 ರಂದು ಹೆರಿಗೆಗೆ ಕೋರಿಕೆ ಸಲ್ಲಿಸಿದ ಮಹಿಳೆಯರ ಆರೋಗ್ಯ ಮತ್ತು ಅವರ ಮಕ್ಕಳ ಆರೋಗ್ಯವನ್ನು ಪರಿಗಣಿಸಿ, ಆ ದಿನದಂದು ಸಮಯದ ಲಭ್ಯತೆಯ ಮೇರೆಗೆ ಹೆರಿಗೆ ಮಾಡಲಾಗುವುದು. ಈ ವಿಶೇಷ ದಿನದಂದು ಡೆಲಿವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಿದ್ಧತೆಗಳನ್ನು ಸಹ ಮಾಡಲಾಗಿದೆ.
ರಾಮಮಂದಿರದಲ್ಲಿ ಎಲ್ಲಿಯೂ ಒಂದೇ ಒಂದು ಕಬ್ಬಿಣದ ತುಂಡು, ಸಿಮೆಂಟ್ ಬಳಸಿಲ್ಲ…ಈ ವಿಶೇಷ ತಂತ್ರಜ್ಞಾನದಿಂದ ನಿರ್ಮಾಣ!