More

    ಆರೋಗ್ಯ ಸೇತು ಆ್ಯಪ್​ಗೆ ಸಿಗಲಿದೆ ಪವರ್​; ಜಾಗೃತಿಗಾಗಿ ಸರ್ಕಾರದ ಜತೆ ಕೈ ಜೋಡಿಸಿದ ಪುನೀತ್​​ ರಾಜ್​ಕುಮಾರ್​

    ಬೆಂಗಳೂರು: ಈಗಾಗಲೇ ಕೋವಿಡ್​ 19 ವೈರಸ್​ ಬಗ್ಗೆ ಮತ್ತು ಕ್ವಾರಂಟೈನ್ ಸೇರಿ ಹಲವು ಉಪಯುಕ್ತ ಮಾಹಿತಿ ಒಂದೇ ಕಡೆ ಲಭ್ಯವಾಗುವ ಉದ್ದೇಶದಿಂದ ಆರೋಗ್ಯ ಸೇತು ಆ್ಯಪ್​ ಅನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಆ್ಯಪ್​ನಲ್ಲಿ ಕರೊನಾ ಲಕ್ಷಣಗಳು ಸೇರಿ ಅದರಿಂದ ಪಾರಾಗುವ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ. ಹೀಗಿರುವಾಗಲೇ ಆ ಆ್ಯಪ್​ನ್ನು ಮತ್ತಷ್ಟು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​ ನಾರಾಯಣ್ ಹೊಸ ದಾರಿ ಕಂಡುಕೊಂಡಿದ್ದಾರೆ. ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​​ ಮನೆಗೆ ತೆರಳಿ ಆರೋಗ್ಯ ಸೇತು ಆ್ಯಪ್​ ಬಗ್ಗೆ ಜನಜಾಗೃತಿ ಮೂಡಿಸಲು ಅವರ ಬಳಿ ಕೋರಿದ್ದಾರೆ. ಉಪಮುಖ್ಯಮಂತ್ರಿಗಳ ಮಾತಿಗೆ ಗ್ರೀನ್​ ಸಿಗ್ನಲ್​ ನೀಡಿರುವ ಪುನೀತ್​ ಶೀಘ್ರದಲ್ಲಿ ಆರೋಗ್ಯ ಸೇತು ಆ್ಯಪ್​ ಉಪಯುಕ್ತತೆ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರದ ಪರಿಹಾರ ನಿಧಿಗೆ ಪುನೀತ್​ 50ಲಕ್ಷ ದೇಣಿಗೆ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts