More

    ಗಂಡನ ವಿರುದ್ಧದ ದೂರು ವಾಪಸ್ಸು ತಗೊಳ್ತಾರಂತೆ ಪೂನಂ … ಯಾಕೆ ಗೊತ್ತಾ?

    ಮುಂಬೈ: ಎರಡ್ಮೂರು ದಿನಗಳ ಹಿಂದಷ್ಟೇ ತಮ್ಮ ಗಂಡ ಸ್ಯಾಮ್​ ಬಾಂಬೆ ವಿರುದ್ಧ ದೈಹಿಕ ಹಲ್ಲೆ ನಡೆಸಿದ್ದಿಕ್ಕೆ ದೂರು ಕೊಟ್ಟಿದ್ದರು ಪೂನಂ ಪಾಂಡೆ. ಅಷ್ಟೇ ಅಲ್ಲ, ಅವರಿಂದ ಡೈವೋರ್ಸ್​ ಪಡೆಯುವುದಕ್ಕೆ ಯೋಚಿಸಿದ್ದರು. ಆದರೆ, ಇದೀಗ ಅವರು ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಗಂಡನ ವಿರುದ್ಧದ ದೂರು ಹಿಂಪಡೆಯುವುದಕ್ಕೆ ತೀರ್ಮಾನಿಸಿದ್ದಾರೆ.

    ಇದನ್ನೂ ಓದಿ: ಹೆಂಡತಿ ಆಸೆಯನ್ನು ಪೂರೈಸುವುದಕ್ಕೆ ಚಿರಂಜೀವಿ ಏನ್​ ಮಾಡಿದ್ರು?

    ಎರಡು ದಿನಗಳ ಅಂತರದಲ್ಲಿ ಪೂನಂ ಪಾಂಡೆ ತಮ್ಮ ಮನಸ್ಸು ಬದಲಾಯಿಸಿದ್ದು ಏಕೆ ಮತ್ತು ಹೇಗೆ ಎಂದು ಆಶ್ಚರ್ಯವಾಗಬಹುದು. ಅದಕ್ಕೆ ಕಾರಣವೂ ಇದೆ. ಸ್ಯಾಮ್​ ಬಾಂಬೆ ಕಳೆದೆರೆಡು ದಿನಗಳಿಂದ ಸಿಕ್ಕಾಪಟ್ಟೆ ಅಳುತ್ತಿದ್ದಾರಂತೆ. ಅವರ ಮೇಲಿನ ಅನುಕಂಪದಿಂದ ದೂರು ಹಿಂದೆ ಪಡೆಯಲು ಪೂನಂ ಮುಂದಾಗಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಸ್ಯಾಮ್​ ಈ ವಿಷಯವಾಗಿ ತುಂಬಾ ನೊಂದಿದ್ದಾರೆ. ಸತತವಾಗಿ ಅಳುತ್ತಲೇ ಇದ್ದಾರೆ. ನನಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಪ್ರತೀ ಬಾರಿ ಅವರು ನನಗೆ ಹೊಡೆದ ಮೇಲೆ, ಸಾರಿ ಎಂದು ಅಳುತ್ತಾರೆ. ಈ ಬಾರಿ ಸಹ ಅವರು ಅದೇ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಾಮಿಸ್​ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

    ಇನ್ನು ಪೊಲೀಸರಿಗೆ ತಾವು ಫೋನ್​ ಮಾಡಿ ದೂರು ನೀಡಲಿಲ್ಲ ಎಂದಿರುವ ಅವರು, ‘ನಮ್ಮ ರೂಮ್​ನಲ್ಲಿ ಗಲಾಟೆ ಕೇಳಿಸುತ್ತಿದ್ದಂತೆಯೇ, ಹೋಟೆಲ್​ನವರೇ ಪೊಲೀಸರಿಗೆ ಫೋನ್​ ಮಾಡಿ ಕರೆಸಿದ್ದಾರೆ. ಪೊಲೀಸರು ಬಂದಾಗ, ನನ್ನ ಮುಖ ಊದಿತ್ತು. ನನ್ನ ದೇಹದ ಮೇಲೆಲ್ಲಾ ಗಾಯದ ಗುರುತುಗಳಿದ್ದವು. ಅವರು ತಕ್ಷಣವೇ ಆಕ್ಷನ್​ ತೆಗೆದುಕೊಳ್ಳಲು ತೀರ್ಮಾನಿಸಿ ಸ್ಯಾಮ್​ನ ಬಂಧಿಸಿದರು. ನನ್ನ ಜತೆಗೆ ಈ ತರಹ ನಿರಂತರವಾಗಿ ಆಗುತ್ತಲೇ ಇದ್ದುದರಿಂದ, ನಾನು ಸಹ ಬೇಸತ್ತು ಸ್ಯಾಮ್ ವಿರುದ್ಧ ಕಾನೂನೂ ರೀತಿಯ ಹೋರಾಟ ಮಾಡುವುದಕ್ಕೆ ನಿರ್ಧರಿಸಿದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಐವರು ಅಧಿಕಾರಿಗಳಿಂದ ಐದು ತಾಸು ವಿಚಾರಣೆ; ಸತ್ಯ ಒಪ್ಪಿಕೊಂಡ ನಟಿ ದೀಪಿಕಾ ಪಡುಕೋಣೆ

    ಇದಕ್ಕೂ ಮುನ್ನ, ಸೆಪ್ಟೆಂಬರ್​ನ ಎರಡನೆಯ ವಾರದಲ್ಲಿ ಪೂನಂ ಮತ್ತು ಸ್ಯಾಮ್​ ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಅದಾದ ಕೆಲವೇ ದಿನಗಳ ಅಂತರದಲ್ಲಿ ತಮ್ಮ ಪತಿಯ ಬಗ್ಗೆ ಪೂನಂ ಪೊಲೀಸರಿಗೆ ದೂರು ನೀಡಿದ್ದರು.

    ಬಾಲುನ ಕೊನೇ ಬಾರಿ ನೋಡೋದಕ್ಕೂ ಸಾಧ್ಯವಾಗಲಿಲ್ಲ … ಯೇಸುದಾಸ್​ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts