More

    ಈದ್​ ಹಬ್ಬದಂದು ನೆಚ್ಚಿನ ನಟನನ್ನು ನೋಡಲು ಬಂದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು; ವಿಡಿಯೋ ವೈರಲ್

    ಮುಂಬೈ: ಇಸ್ಲಾಂ ಧರ್ಮದಲ್ಲಿ ಮಹತ್ವದ ತಿಂಗಳು ಎಂದರೆ ಅದು ರಂಜಾನ್ ಎಂದು ಹೇಳಬಹುದಾಗಿದೆ. ಮುಸ್ಲಿಂ ಭಾಂದವರು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪ್ರಾರ್ಥನೆ ಸಲ್ಲಿಸಿ ದಾನ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ವಿಶ್ವದಾದ್ಯಂತ ಇಂದು ರಂಜಾನ್​ ಹಬ್ಬವನ್ನು ಆಚರಿಸಲಾಗುತ್ತಿದ್ದು, ಸೆಲೆಬ್ರಿಟಿಗಳು ತಮ್ಮ ಕೆಲಸಗಳಿಗೆ ಬಿಡುವು ನೀಡಿ ಹಬ್ಬವನ್ನು ಆಚರಿಸುತ್ತಿದ್ದಾರೆ.

    ಅದರಂತೆ ಈದ್​ ಹಬ್ಬದ ಆಚರಣೆಯಲ್ಲಿ ಬಾಲಿವುಡ್​ ಖಾನ್​ತ್ರಯರಾದ ಶಾರುಖ್​, ಸಲ್ಮಾನ್​ ಹಾಗೂ ಆಮೀರ್​ ಭಾಗಿಯಾಗಿದ್ದಾರೆ. ಅದರಂಎತ ಅವರನ್ನು ನೋಡಲು ಅಭಿಮಾನಿಗಳು ಅವರ ನಿವಾಸದ ಬಳಿ ಜಮಾಯಿಸಿದ್ದು, ಹಬ್ಬದ ದಿನದಂದು ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ., ನೆಚ್ಚಿನ ನಟನನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಈದ್​ ಪ್ರಯುಕ್ತ ಖಾನ್​ತ್ರಯರಾದ ಸಲ್ಮಾನ್​​, ಶಾರುಖ್​ ಹಾಗೂ ಆಮೀರ್​ ತಮ್ಮ ಮನೆಯ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ಶುಭಾಶಯ ಕೋರುತ್ತಾರೆ. ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ಈ ವರ್ಷವೂ ಈದ್​ ಪ್ರಯುಕ್ತ ತಮ್ಮ ನೆಚ್ಚಿನ ನಟನನ್ನು ನೋಡಲು ಜನ ಬಂದಿದ್ದಾರೆ. ಅದರಂತೆ ಶಾರುಖ್​ ಹಾಗೂ ಆಮೀರ್​ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದು, ಸಲ್ಮಾನ್​ ಖಾನ್​ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಬಳಿಕ ತೆಲಂಗಾಣ ಸಿಎಂ ಬಿಜೆಪಿ ಸೇರುತ್ತಾರೆ: ಬಿಆರ್​ಎಸ್​ ನಾಯಕ ಕೆಟಿಆರ್​

    ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಎಷ್ಟು ಹೊತ್ತು ಕಾದರು ಸಲ್ಮಾನ್​ ಮನೆಯಿಂದ ಹೊರಬಾರದ ಕಾರಣ ನೆರೆದಿದ್ದ ಅಭಿಮಾನಿಗಳಿಂದ ಟ್ರಾಫಿಕ್​ ಜಾಮ್​ ಉಂಟಾಯಿತು. ಪರಿಸ್ಥಿತಿ ಸುಧಾರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಮಹಿಳೆಯರು ಕೂಡ ಪೊಲೀಸರ ಲಾಠಿ ಏಟು ತಿಂದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ರಂಜಾನ್​ ಹಬ್ಬದ ಪ್ರಯುಕ್ತ ಸಲ್ಮಾನ್​ ಖಾನ್​ ಹೊಸ ಚಿತ್ರವನ್ನು ಘೋಷಿಸಿದ್ದು, ಈ ಸಿನಿಮಾಗೆ ಸಿಕಂದರ್​ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಎ.ಆರ್. ಮರುಗದಾಸ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, 2025ರ ಈದ್​ಗೆ ಚಿತ್ರ ತೆರೆ ಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts