ಬೆಂಗಳೂರು: ಮುಸ್ಲಿಂ ಮಹಿಳೆಗೆ ಬೈಕ್ನಲ್ಲಿ ಡ್ರಾಪ್ ನೀಡುತ್ತಿದ್ದ ಎಂದು ಹಿಂದೂ ಪುರುಷನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ದುಷ್ಕರ್ಮಿಗಳನ್ನು ನಗರದ ಎಸ್.ಜಿ.ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಗರದ ಡೈರಿ ಸರ್ಕಲ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಬ್ಯಾಂಕ್ವೊಂದರ ನೌಕರರಾದ ಮಹೇಶ್ ತಮ್ಮ ಸಹೋದ್ಯೋಗಿ ಮುಸ್ಲಿಂ ಮಹಿಳೆಯನ್ನು ಬೈಕ್ನಲ್ಲಿ ಮನೆಗೆ ಡ್ರಾಪ್ ಮಾಡುತ್ತಿದ್ದ ವೇಳೆ ಹಿಂಬಾಲಿಸಿ ಬಂದಿದ್ದ ಆರೋಪಿಗಳು ಹಲ್ಲೆ ಮಾಡಿದ್ದರು. ಮಹೇಶ್ಗೆ ಹೊಡೆಯುತ್ತಾ, ಇನ್ನೊಂದು ಸಾರಿ ಬುರ್ಖಾ ಹಾಕಿಕೊಂಡಿರುವವರನ್ನು ಕೂರಿಸಿಕೊಂಡು ಹೋದ್ರೆ ಅಷ್ಟೇ ಎಂದು ಬೆದರಿಕೆ ಹಾಕಿದ್ದ ದೃಶ್ಯವು ವೈರಲ್ ವಿಡಿಯೋದಲ್ಲಿ ಕಂಡಿತ್ತು.
ಇದನ್ನೂ ಓದಿ: ಡಿಸಿ ಆದ ಗುಜರಾತ್ ಬಾಲಕಿ! ಬರ್ತ್ಡೇ ವಿಶ್ಗೆ ಜಿಲ್ಲಾಧಿಕಾರಿ ಮೊಹರು!
ಇದೇ ವೇಳೆ ಮಹಿಳೆಗೂ ಅವಾಜ್ ಹಾಕಿದ್ದ ಪುಂಡರು, ನಿನಗೆ ನಾಚಿಕೆಯಾಗಲ್ವಾ.. ಈ ಜಗತ್ತಲ್ಲಿ ಏನಾಗ್ತಿದೆ ಅಂತ ಗೊತ್ತಿಲ್ವಾ? ಅನ್ಯಕೋಮಿನವರೊಂದಿಗೆ ಹೀಗೆ ಕೂತು ಹೋಗ್ತಿದ್ದೀಯ ಅಂತ ಗದರಿಸಿ, ಬೈಕ್ನಿಂದ ಇಳಿಸಿ ಆಟೋದಲ್ಲಿ ಹೋಗು ಎಂದು ಕಳುಹಿಸಿದ್ದರು. ಮಹಿಳೆಯು, ಏನ್ ಅಣ್ಣ ನಿನ್ ಸಮಸ್ಯೆ? ನಾನು ಇದೇ ದಾರಿಯಲ್ಲಿ ಮನೆಗೆ ಹೊರಟಿದ್ದೆ. ನನಗೆ ಮದುವೆ ಆಗಿದೆ ಎಂದು ಹೇಳಿದಾಗ, ಆಕೆಯ ಗಂಡನಿಗೂ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
In connection with the case of assault on a bike rider travelling alongwith a woman of different faith,@BlrCityPolice has acted swiftly, identified & secured 2 accused persons. A case is registered & legal action is initiated. My Govt. deals with such incidents with an iron hand.
— Basavaraj S Bommai (@BSBommai) September 19, 2021
ಈ ಬಗ್ಗೆ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, “ಪ್ರಕರಣದಲ್ಲಿ ಪೊಲೀಸರು ಚುರುಕಾಗಿ ನಡೆದುಕೊಂಡು, ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸಿರುತ್ತಾರೆ. ಕೇಸು ದಾಖಲಿಸಿದ್ದು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ನನ್ನ ಸರ್ಕಾರ ಇಂಥ ಪ್ರಸಂಗಗಳಲ್ಲಿ ಉಕ್ಕಿನ ಹಸ್ತದಿಂದ ಕ್ರಮ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.
ಅಪಾಯಕಾರಿ ಸೆರೋಟೈಪ್-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ