More

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ಭುವನೇಶ್ವರ್​: ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆ ಬದಿಯಲ್ಲಿ ಜನವರಿ 27ರಂದು ಯುವತಿಯ ಮೃತದೇಹವೊಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ಮೃತ ಯುವತಿಯನ್ನು ಜರಾಫುಲಾ ನಾಯಕ್​ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಜಾಜ್​ಪುರ್​ ಪೊಲೀಸರು ಕಮಿಷನರೇಟ್ ಪೊಲೀಸ್ ಸಹಕಾರದೊಂದಿಗೆ ಸುಂದರ್​​ಪಾದ ಏರಿಯಾದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ರಾಕೇಶ್​ ಎಂದು ಗುರುತಿಸಲಾಗಿದೆ. ಸದ್ಯ ಜಾಜ್​ಪುರ್​ ಪೊಲೀಸರ ವಶದಲ್ಲಿರುವ ರಾಕೇಶ್​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

    ಇದನ್ನೂ ಓದಿರಿ: ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಬಹುದಾ?

    ಯುವತಿ ಜರಾಫುಲಾ ಮಯೂರ್​ಬಂಜ್​ ಜಿಲ್ಲೆಯ ನಿವಾಸಿ. ಆರ್​ಡಿ ಮಹಿಳಾ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದ ಜರಾಫುಲಾಳನ್ನು ಭುವನೇಶ್ವರದಲ್ಲಿ ಕೊಲೆ ಮಾಡಲಾಗಿದೆ. ಆರೋಪಿ ರಾಕೇಶ್​ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ಆಘಾತಕಾರಿಯೆಂದರೆ ಕೊಲೆ ಮಾಡಿದ ಬಳಿಕ ಜರಾಪುಲಾಳ ಮೃತದೇಹವನ್ನು ರಾಕೇಶ್​ ತನ್ನ ಸ್ನೇಹಿತನ ಜತೆ ಸೇರಿಕೊಂಡು ಮುಲಪಲಾದಲ್ಲಿ ಎಸೆದು ಬಂದಿದ್ದರು. ಸ್ಕೂಟರ್​​ನಲ್ಲಿ ಮೃತದೇಹವನ್ನು ಕೂರಿಸಿಕೊಂಡು ಹೋಗಿ ಯಾರಿಗೂ ಗೊತ್ತಾಗದಂತೆ ಎಸೆದುಬಂದಿದ್ದರು. ಇದೀಗ ರಾಕೇಶ್​ ಬಂಧಿಯಾಗಿದ್ದು, ಸ್ಕೂಟರ್​ ಓಡಿಸುತ್ತಿದ್ದ ರಾಕೇಶ್​ ಸ್ನೇಹಿತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಓರ್ವ ಡಿಸಿಪಿ ಪ್ರಕರಣ ಸಮಗ್ರ ತನಿಖೆಯನ್ನು ನಡೆಸುತ್ತಿದ್ದಾರೆ.

    ಇದನ್ನೂ ಓದಿರಿ: ಸೆಕ್ಸ್​ ವೇಳೆ ದುರಂತ ಸಾವಿಗೀಡಾದ ವ್ಯಕ್ತಿ: ಮರಣೋತ್ತರ ವರದಿಯಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ!

    ಜನವರಿ 27ರಂದು ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆಯ ಬದಿಯಲ್ಲಿ ಪತ್ತೆಯಾಗಿದ್ದ ಜರಾಪುಲಾಳ ಮೃತದೇಹವನ್ನು ಪಕ್ಕದಲ್ಲಿ ಬಿದ್ದಿದ್ದ ಬ್ಯಾಗ್​ನಲ್ಲಿದ್ದ ಮಾಹಿತಿ ಆಧಾರದಲ್ಲಿ ಪತ್ತೆಹಚ್ಚಲಾಗಿತ್ತು.

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ಜರಾಫುಲಾ ಎಲ್ಲಿಗೆ ಹೋಗಿದ್ದಳು?
    ಈ ಬಗ್ಗೆ ಮಾಹಿತಿ ನೀಡಿರುವ ಜಲಾಫುಲಾ ತಂದೆ ರಮಾಕಾಂತ್​, ಜನವರಿ 24ರಂದು ಜಲಾಫುಲಾ ಆಕೆಯ ಚಕ್ರಧರ್ ಟೀಚರ್​ ಮಗಳ ಬರ್ತಡೇ ಕಾರ್ಯಕ್ರಮಕ್ಕೆಂದು ತೆರಳಿದ್ದಳು. 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಅಂದರೆ 26ನೇ ತಾರೀಖು ಬೆಳಗ್ಗೆ 11 ಗಂಟೆಗೆ ಚಕ್ರಧರ್​, ಜಲಾಫುಲಾಳನ್ನು ಜಯದೇವ್​ ವಿವಾರ್​ ಸ್ಕ್ವೇರ್​ಗೆ ಡ್ರಾಪ್​ ಮಾಡಿದ್ದರು. ಖಾಸಗಿ ಬಸ್​ ಮೂಲಕ ಊರಿಗೆ ಮರಳಲು ಮುಂದಾಗಿದ್ದಳು. ಹೊಟ್ಟೆ ನೋವಿದೆ ಆಸ್ಪತ್ರೆಗೆ ಹೋಗಿ ನಂತರ ಬಸ್​ನಲ್ಲಿ ಊರಿಗೆ ಮರಳುತ್ತೇನೆಂದು ಹೇಳಿದ್ದಳು. ಆದರೆ, ಮಧ್ಯಾಹ್ನ 3 ಗಂಟೆಗೆ ಫೋನ್​ ಮಾಡಿ, ಹೊಟ್ಟೆ ನೋವಿದೆ, ಫ್ರೆಂಡ್ಸ್​ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಮತ್ತು ನಾಳೆ ಬೆಳಗ್ಗೆ ಬರುವುದಾಗಿ ಹೇಳಿದಳು. ಅಂದು ರಾತ್ರಿಯಿಡಿ ಎಷ್ಟೇ ಫೋನ್​ ಮಾಡಿದರು ಸ್ವೀಕರಿಸಲಿಲ್ಲ. ಚಕ್ರಧರ್ ಸರ್ ಒಬ್ಬರೇ ಭುವನೇಶ್ವರದಲ್ಲಿ ಆಕೆಯ ಸ್ಥಳೀಯ ರಕ್ಷಕರಾಗಿದ್ದರು ಎನ್ನುತ್ತಾರೆ ರಮಾಕಾಂತ್​.

    ಇದನ್ನೂ ಓದಿರಿ: ಟಿಕ್​ಟಾಕ್​ನಲ್ಲಿ ಅರೆಬೆತ್ತಲೆ ವಿಡಿಯೋ ಹರಿಬಿಡ್ತಿದ್ದ ಪ್ರಭಾವಿ ಮಹಿಳೆ ಗಂಡನಿಂದಲೇ ದುರಂತ ಅಂತ್ಯ!

    ಸ್ಥಳೀಯ ಯುವಕ ಮೇಲೆ ಗಂಭೀರ ಆರೋಪ
    ಹೀಗಿರುವಾಗ ಜರಾಫುಲಾಳ ಮೃತದೇಹ ಮಾರನೇ ದಿನ ಅಂದರೆ ಜ. 27ರಂದು ಮುಲಪಲಾದ ರಸ್ತೆಯ ಬದಿಯಲ್ಲಿ ಪತ್ತೆಯಾಗುತ್ತದೆ. ಮೃತದೇಹವನ್ನು ಪಕ್ಕದಲ್ಲಿ ಬಿದ್ದಿದ್ದ ಬ್ಯಾಗ್​ನಲ್ಲಿದ್ದ ಮಾಹಿತಿ ಆಧಾರದಲ್ಲಿ ವಿಳಾಸವನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗುತ್ತದೆ. ಇದರಿಂದ ಶಾಕ್​ ಆಗುವ ಕುಟುಂಬ ಶೋಕ ಸಾಗರದಲ್ಲಿ ಮುಳುಗುತ್ತದೆ. ಮಗಳ ಕೊಲೆಯಾಗಿದೆ ಎಂದು ಗೊತ್ತಾದ ತಕ್ಷಣವೇ ಸ್ಥಳೀಯ ಯುವಕನ ವಿರುದ್ಧ ಜರಾಫುಲಾಳ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಕೊಲೆಗೆ ಆತನೇ ಕಾರಣ ಎಂದು ದೂರಿದ್ದಾರೆ. ಆತನೇ ರಾಕೇಶ್​.

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ಊರಿನಲ್ಲಿ ಪೈಪ್​ಲೈನ್​ ಕೆಲಸ ಮಾಡಿಕೊಂಡಿದ್ದ ರಾಕೇಶ್​ ನನ್ನ ಮಗಳನ್ನು ಲವ್​ ಮಾಡುತ್ತಿದ್ದ. ಲಾಕ್​ಡೌನ್​ ಬಳಿಕ ಯೂನಿವರ್ಸಿಟಿ ಬಿಟ್ಟು ಮಗಳು ಊರಿಗೆ ಬಂದಿದ್ದಾಗ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಇಬ್ಬರು ವಾಟ್ಸ್​ಆ್ಯಪ್​ ಮತ್ತು ವಿಡಿಯೋ ಕಾಲ್​ ಮೂಲಕ ಮಾತನಾಡುತ್ತಿದ್ದರು ಎಂದು ರಮಾಕಾಂತ್​ ದೂರಿದ್ದಾರೆ.

    ಇದನ್ನೂ ಓದಿರಿ: ಪತಿಗೆ ಬ್ಲೂಫಿಲಂ ನೋಡುವ ಚಟ- ಮಧ್ಯರಾತ್ರಿಯೂ ಎದ್ದು ವೀಕ್ಷಿಸುತ್ತಾರೆ, ಇದನ್ನು ತಪ್ಪಿಸುವುದು ಹೇಗೆ?

    ಆರೋಪಿ ರಾಕೇಶ್​ ಸಿಕ್ಕಿಬಿದ್ದಿದ್ಹೇಗೆ?
    ಸಂಶಯಾಸ್ಪದ ರೀತಿಯಲ್ಲಿ ಜರಾಫುಲಾಳ ಮೃತದೇಹ ಪತ್ತೆಯಾದ ಮೇಲೆ ಅನುಮಾನಗೊಂಡ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾರೆ. ಇಬ್ಬರು ಯುವಕರು ಸ್ಕೂಟರ್​ನಲ್ಲಿ ಬಂದು ಯುವತಿಯ ಮೃತದೇಹವನ್ನು ಎಸೆದು ಸ್ಕೂಟರ್​​ನಲ್ಲಿ ಪರಾರಿಯಾಗುವ ದೃಶ್ಯ ದಾಖಲಾಗಿರುತ್ತದೆ. ಸ್ಥಳೀಯರು ಸಹ ಇಬ್ಬರು ಯುವಕರು ಸ್ಕೂಟರ್​ನಲ್ಲಿ ಬಂದಿದ್ದಾಗಿ ಹೇಳುತ್ತಾರೆ. ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದ ಜಾಜ್​ಪುರ್​ ಪೊಲೀಸರು ಆರೋಪಿ ರಾಕೇಶ್​ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಈ ಹುಡುಗನಿಗಾಗಿ ಲಂಡನ್​ ತೊರೆದು ಕಾಡಿನಲ್ಲಿರುವ ಬೆತ್ತಲೆ ಯೋಗ ಶಿಕ್ಷಕಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    35ರ ಶಿಕ್ಷಕಿ 15ರ ವಿದ್ಯಾರ್ಥಿಯನ್ನು ಪುಸಲಾಯಿಸಿದ್ಹೇಗೆ? ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!

    ಎಟಿಎಂ ಕೀಪ್ಯಾಡ್​ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts