ದೆಹಲಿ: ರಾಜ್ಯೋತ್ಸವದ ಮಾಸವಾದ ನವೆಂಬರ್ನಲ್ಲಿ ಮೊನ್ನೆಮೊನ್ನೆಯಷ್ಟೇ ರಾಜ್ಯದ ಅನೇಕರು ಪದ್ಮ ಪ್ರಶಸ್ತಿಗಳನ್ನು ಪಡೆದ ಬೆನ್ನಿಗೇ ಕನ್ನಡಿಗರು ಖುಷಿಪಡುವಂಥ ಮತ್ತೊಂದು ಪ್ರಶಸ್ತಿ ಪ್ರದಾನ ನಡೆದಿದೆ. ಪ್ಯಾರಾಲಿಂಪಿಯನ್ ಸುಹಾಸ್ ಯತಿರಾಜ್ ಅವರು ಇಂದು ಅರ್ಜುನ ಪುರಸ್ಕಾರಕ್ಕೆ ಪಾತ್ರರಾಗಿದ್ದೇ ಆ ಖುಷಿಗೆ ಕಾರಣ.
ನವದೆಹಲಿಯಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸುಹಾಸ್ ಯತಿರಾಜ್ ಅವರಿಗೆ ಅರ್ಜುನ ಪುರಸ್ಕಾರ ಪ್ರದಾನ ಮಾಡಿದರು.
2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಸುಹಾಸ್ ಯತಿರಾಜ್ ಅವರು ಮೂಲತಃ ಕರ್ನಾಟಕದ ಹಾಸನ ಜಿಲ್ಲೆಯವರು. ಆದರೆ, ಸದ್ಯ ಉತ್ತರ ಪ್ರದೇಶದ ಗೌತಮಬುದ್ಧ ನಗರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ನಟಿ ರಚಿತಾ ರಾಮ್ ಮುಖದಲ್ಲೀಗ ಮತ್ತೆ ಖುಷಿಯ ಡಿಂಪಲ್; ಬೇಸರದ ಮಧ್ಯೆಯೇ ‘ಏಕ್ಲವ್ಯಾ’ಗೂ ಸಂತೋಷ!
ಇವರು ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆದ, ದೇಶದ ಮೊದಲ ಐಎಎಸ್ ಅಧಿಕಾರಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಮಾತ್ರವಲ್ಲ ಅರ್ಜುನ ಪ್ರಶಸ್ತಿ ಪಡೆದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಯೂ ಇವರ ಪಾಲಾಗಿದೆ.
ಇದನ್ನೂ ಓದಿ: ಕೈ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ; ಸಿದ್ದರಾಮಯ್ಯ ಅಭಿಮಾನಿಯ ಕೆನ್ನೆಗೆ ಬಾರಿಸಿದ ಮಾಜಿ ಸಚಿವ…
ಕೆಲವು ದಿನಗಳ ಹಿಂದೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದ್ದು, ಅದಕ್ಕೆ ಆಯ್ಕೆಯಾದ 35 ಕ್ರೀಡಾಪಟುಗಳ ಪೈಕಿ ಸುಹಾಸ್ ಕೂಡ ಒಬ್ಬರು. ಇವರು ಉತ್ತರಪ್ರದೇಶ ಕೇಡರ್ನ 2007ರ ಬ್ಯಾಚ್ನ ಐಎಎಸ್ ಅಧಿಕಾರಿ. ಅರ್ಜುನ ಪ್ರಶಸ್ತಿಯ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾಗಿದ್ದು, ಇದನ್ನು ಕೇಂದ್ರ ಕ್ರೀಡಾ ಸಚಿವಾಲಯದಿಂದ ನೀಡಲಾಗುತ್ತದೆ.
ಮದ್ವೆ ಆದ್ಮೇಲೆ ಫಸ್ಟ್ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್