More

    ಕೆರೆ ಬಸದಿ ಪಂಚಕಲ್ಯಾಣ ಪುಣ್ಯಕಾರ್ಯದಲ್ಲಿ ಭಾಗಿ: ಕಾರ್ಕಳ ಆನೆಕೆರೆಯಲ್ಲಿ ದಿನ ಘೋಷಣೆ ಮಾಡಿ ಶ್ರೀ ಲಲಿತಕೀರ್ತಿ ಭಟ್ಟಾರಕ ಶ್ರೀ ಕರೆ

    ಕಾರ್ಕಳ: ಕೆರೆ ಬಸದಿ ಜೀರ್ಣೋದ್ಧಾರ, ಕಾಯಕಲ್ಪ ಹಾಗೂ ಪಂಚಕಲ್ಯಾಣ ಕಾರ‌್ಯ ನಡೆಯುತ್ತಿದೆ. ಈ ಅಪರೂಪದ ಪುಣ್ಯ ಕಾರ್ಯ ಎಲ್ಲರೂ ಒಟ್ಟಾದಾಗ ಯಶಸ್ವಿಯಾಗುತ್ತದೆ ಎಂದು ದಾನಶಾಲೆ ಜೈನ ಮಠ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಹೇಳಿದರು.

    ಕಾರ್ಕಳ ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ದಿನ ಘೋಷಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಜೈನ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ಘೋಷಣೆಗಳನ್ನು ಮಾಡಿದ್ದು, ಸರ್ಕಾರ ಮಟ್ಟದಲ್ಲಿ ಅನುದಾನ ತರಲು ಪ್ರಯತ್ನಿಸಲಾಗುವುದು. ಸಮಾಜದವರ ಸಹಕಾರದಲ್ಲಿ ಜೈನ ಬಸದಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಆನೆಕೆರೆ ಬಸದಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಮಾತನಾಡಿದರು.
    ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಉಪಾಧ್ಯಕ್ಷ ಕೆ.ಗುಣಪಾಲ ಕಡಂಬ, ಪ್ರ. ಕಾರ್ಯದರ್ಶಿ ಭರತ್‌ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಜೈನ್, ಸುದರ್ಶನ ಇಂದ್ರ, ವರ್ಧಮಾನ್ ಇಂದ್ರ ಉಪಸ್ಥಿತರಿದ್ದರು. ರಾಜೇಶ್ ಜೈನ್ ನಿರೂಪಿಸಿ, ಸುಜಿತ್ ಜೈನ್ ವಂದಿಸಿದರು.

    ಜನವರಿ 18-22ರ ತನಕ ಐದು ದಿನಗಳ ಪಂಚಕಲ್ಯಾಣ

    ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನವೀಕರಣ ಕಾರ್ಯಗಳು ನಡೆದಿವೆ. ಜನವರಿ 18ರಿಂದ 22ರ ತನಕ ಐದು ದಿನಗಳ ಪಂಚಕಲ್ಯಾಣ ವಿಜೃಂಭಣೆಯಿಂದ ನಡೆಸಲು ಸಂಕಲ್ಪಿಸಲಾಗಿದೆ. ಸಮಾಜ ಬಾಂಧವರು ಇತರೆ ಸಮಾಜದವರು ಕೈ ಜೋಡಿಸಿ ಪಂಚಕಲ್ಯಾಣ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಆನೆಕೆರೆ ಚತುರ್ಮುಖ ಕೆರೆಬಸದಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಸಮಾಜ ಮುಖಂಡರ ನಾಯಕತ್ವದಲ್ಲಿ ಹಾಗೂ ಇತರ ಸಮಾಜದ ಸಹಕಾರದಲ್ಲಿ ಸಂಪೂರ್ಣ ಶಿಲಾಮಯ ಬಸದಿ ನಿರ್ಮಾಣಗೊಂಡಿದ್ದು ಕೆರೆ ಬಸದಿ ಚರಿತ್ರೆಯಲ್ಲಿ ಉಳಿಯುವಂತೆ ಇಲ್ಲಿ ಕೆಲಸಗಳಾಗಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಆನೆಕೆರೆ ಬಸದಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು

    ಬೆಳಗಾವಿ ಚಿಕ್ಕೋಡಿ ನಂದಿ ಮಹಾರಾಜರ ಹತ್ಯೆ ಅತ್ಯಂತ ದುಃಖಕರ. ಸಂತರ ಹತ್ಯೆ ತಡೆಯುವಲ್ಲಿ ಆಳುವವರ ಪಾತ್ರ ಬಹಳವಿದೆ. 5 ಬೆರಳುಗಳಂತೆ ಭಾರತೀಯ ಪರಂಪರೆಯಲ್ಲಿ ಎಲ್ಲರೂ ಸಮಾನರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಸರ್ಕಾರದ ಪಾತ್ರ ಮುಖ್ಯ. ಸಾಧು-ಸಂತರಿಗೆ ರಕ್ಷಣೆ ನೀಡಬೇಕಾಗಿದೆ.
    -ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ
    ದಾನಶಾಲೆ ಜೈನ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts