More

    ಅಧಿಕಾರಿಗಳ ಎದುರಲ್ಲೇ ಮತಯಂತ್ರ ನೆಲಕ್ಕೆ ಕುಕ್ಕಿ ಹಾಳುಗೆಡವಿದ YSRCP ಶಾಸಕ; ವಿಡಿಯೋ ವೈರಲ್​

    ಅಮರಾವತಿ: ದೇಶದಲ್ಲಿ ಲೋಕಸಬೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಂಧ್ರಪ್ರದೇಶದಲ್ಲಿ ತುಸು ಜೋರು ಎಂದು ಹೇಳಬಹುದಾಗಿದೆ. ರಕ್ತಸಿಕ್ತ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶದಲ್ಲಿ ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಪಕ್ಷದ ಶಾಸಕ ಮತಕೇಂದ್ರದಲ್ಲಿ ವೋಟಿಂಗ್​ ಮೆಷಿನ್​ ಹೊಡೆದು ಹಾಕುವ ಮೂಲಕ ಮತದಾನಕ್ಕೆ ಅಡ್ಡಿಪಡಿಸಿದ್ದಾರೆ.

    ಮೇ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೈಎಸ್​ಆರ್​​ಸಿಪಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಮತಯಂತ್ರವನ್ನು ಹೊಡೆದು ಹಾಕಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇವರ ವಿರುದ್ಧ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಚುನಾವಣಾ ಆಐಒಗ ಪೊಲೀಸರಿಗೆ ಸೂಚಿಸಿದೆ.

    ಇದನ್ನೂ ಓದಿ: ಪೆನ್​​​ಡ್ರೈವ್​ ಪ್ರಕರಣದಲ್ಲಿ ಅಧಿಕಾರ ದುರುಪಯೋಗದ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ: ಸಿಎಂಗೆ ಎಚ್ಚರಿಸಿದ ಎಚ್​ಡಿಕೆ

    ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಮಾಚರ್ಲಾ ಕ್ಷೇತ್ರದ ವೈಎಸ್​ಆರ್​ಸಿಪಿ ಶಾಸಕ ರಾಮಕೃಷ್ಣ ರೆಡ್ಡಿ ಏಳಕ್ಕೂ ಹೆಚ್ಚು ಪೋಲಿಂಗ್​ ಸ್ಟೇಷನ್​ನಲ್ಲಿ ಇವಿಎಂಗಳನ್ನು ಹೊಡೆದು ಹಾಕುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಮತಕೇಂದ್ರದೊಳಗೆ ನುಗ್ಗುವ ವ್ಯಕ್ತಿಯೊಬ್ಬರು ಶಾಸಕನ ಬೆಂಬಲಿಗನಿಗೆ ಹಿಡಿದು ಥಳಿಸುತ್ತಾರೆ. ಬಳಿಕ ಶಾಸಕ ರಾಮಕೃಷ್ಣ ಅಲ್ಲಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತ ಹೊರನೆಡಯುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟಡಿಪಿ-ಜನಸೇನಾ ಘಟನೆಯನ್ನು ಖಂಡಿಸಿ ಕಿಡಿಕಾರಿದೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು FIRನಲ್ಲಿ ಶಾಸಕ ರಾಮಕೃಷ್ಣ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts