ಚೆನ್ನೈ: ನಾನು ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ನಟ ರಜಿನಿಕಾಂತ್, ತಮ್ಮ ರಜಿನಿ ಮಕ್ಕಳ್ ಮಂದ್ರಂ (ಆರ್ಎಂಎಂ) ಪಕ್ಷವನ್ನು ವಿಸರ್ಜಿಸಿದ್ದಾರೆ.
ಆರ್ಎಂಎಂ ಇನ್ಮುಂದೆ ಅಭಿಮಾನಿಗಳ ಕಲ್ಯಾಣ ಸಂಘವಾಗಿ ಮುಂದುವರಿಯಲಿದೆ ಎಂದು ರಜಿನಿಕಾಂತ್ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ ನನ್ನ ಆರೋಗ್ಯ ಸಮಸ್ಯೆ ಹಾಗೆಯೇ ಇರುವುದರಿಂದ ನಾವು ಏನನ್ನು ನಿರೀಕ್ಷಿಸಿದೆವೋ ಅದ ಸಂಭವಿಸುವುದಿಲ್ಲ. ಮತ್ತೊಮ್ಮೆ ರಾಜಕೀಯ ಪ್ರವೇಶಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ.
ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿರುವುದಾಗಿ ಕಳೆದ ಡಿಸೆಂಬರ್ನಲ್ಲೇ ರಜಿನಿಕಾಂತ್ ಘೋಷಿಸಿದ್ದರು. 2016ರಲ್ಲಿ ರಜಿನಿಕಾಂತ್ ಕಿಡ್ನಿ ಕಸಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಂದಿನಿಂದ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಭೂಮಿಯನ್ನು ಅಪ್ಪಳಿಸಲಿದೆ ಸೌರ ಬಿರುಗಾಳಿ: ಜಿಪಿಎಸ್, ಟಿವಿ, ಮೊಬೈಲ್ ಸಿಗ್ನಲ್ಗಳು ಬಂದ್!
68 ಮಂದಿಯನ್ನು ಬಲಿ ಪಡೆದ ಸಿಡಿಲು: ಸೆಲ್ಫಿ ತೆಗೆದುಕೊಳ್ಳುವಾಗ 11 ಮಂದಿಯ ಸಾವು!
ತೆರೆದ ಬಾವಿ ಯೋಜನೆಗೆ ಫುಲ್ ಡಿಮಾಂಡ್!; ನರೇಗಾ ಯೋಜನೆಯಡಿ 15 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ