ಬೆಂಗಳೂರು : ರಾಜ್ಯದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರು ತಮ್ಮ ಪೊಲೀಸ್ ಪವರ್ ಬಳಸಿಕೊಂಡು ಪತಿ ನಿತೀನ್ ಸುಭಾಷ್ ಯೋಲಾ ಮಗನನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಮಿಷನರ್ ಪ್ರಿಯಾಂಕ್ ಕನೂಂಗು ಅವರು ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟಿಯಾರ್ ಮತ್ತು ದೆಹಲಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಫ್ಎಸ್ ಅಧಿಕಾರಿ ಪತಿ ನಿತೀನ್ ಯೋಲಾ ಅವರ ನಡುವೆ ಫ್ಯಾಮಿಲಿ ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ಕಟಿಯಾರ್ ಅವರು ಪತಿ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದು, ಮದುವೆಯ ವೇಳೆ 35 ಲಕ್ಷ ರೂ. ಹಣ ಪಡೆದು, ತಮ್ಮ ಸಂಬಳದ ಹಣವನ್ನೂ ಪಡೆದು ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದರು.
ಇದನ್ನೂ ಓದಿ: ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್
ಹೀಗಿರುವಾಗ, ನಿತೀನ್ಗೆ ತಮ್ಮ ಮಗ ಅಯಾನ್ ಯೋಲಾನನ್ನು ಭೇಟಿ ಮಾಡಲು ಫ್ಯಾಮಿಲಿ ಕೋರ್ಟ್ 2020ರ ನವೆಂಬರ್ 14 ರ ಆದೇಶದಡಿ ಅವಕಾಶ ನೀಡಿದ್ದರೂ, ಕಟಿಯಾಲ್ ಸುಳ್ಳು ಕೇಸು ಹಾಕುವುದಾಗಿ ಬೆದರಿಸುತ್ತಾ ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ನಿತೀನ್ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರನ್ನು ಪರಿಶೀಲಿಸಿರುವ ಆಯೋಗ, ಮಗುವು ಇಬ್ಬರೂ ಪಾಲಕರಿಂದ ಪ್ರೀತಿ ಪಡೆದು ಆರೋಗ್ಯಕರವಾಗಿ ಬೆಳೆಯುವ ಅವಕಾಶದಿಂದ ವಂಚಿತವಾಗಿರುವ ಪರಿಸ್ಥಿತಿ ಗಮನಕ್ಕೆ ಬಂದಿದೆ. ಆದ್ದರಿಂದ ವರ್ತಿಕಾ ಕಟಿಯಾರ್ ವಿರುದ್ಧ ಅಗತ್ಯ ಕ್ರಮ ಜರುಗಿಸಿ ಎಂದು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮಕ್ಕಳ ಆಯೋಗ ಮನವಿ ಮಾಡಿದೆ.
ಪಟ್ನಾ ಏಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಶುರು
‘ಬರೀ ಅವರಿಗೇಕೆ, ನಮಗೂ ಕೊಡಿ’ – ಸೀರಮ್ ಇನ್ಸ್ಟಿಟ್ಯೂಟ್ಗೂ ಬೇಕಂತೆ ಕಾನೂನು ರಕ್ಷಣೆ !