More

    ಪತಿಗೆ ಮಗನನ್ನು ನೋಡಲು ಬಿಡುತ್ತಿಲ್ಲ : ರಾಜ್ಯದ ಐಪಿಎಸ್​ ಅಧಿಕಾರಿ ವಿರುದ್ಧ ಮಕ್ಕಳ ಆಯೋಗದ ದೂರು

    ಬೆಂಗಳೂರು : ರಾಜ್ಯದ ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್​ ಅವರು ತಮ್ಮ ಪೊಲೀಸ್ ಪವರ್ ಬಳಸಿಕೊಂಡು ಪತಿ ನಿತೀನ್​ ಸುಭಾಷ್​ ಯೋಲಾ ಮಗನನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಮಿಷನರ್​ ಪ್ರಿಯಾಂಕ್ ಕನೂಂಗು ಅವರು ರಾಜ್ಯದ ಡಿಜಿಪಿ ಪ್ರವೀಣ್​ ಸೂದ್​ ಅವರಿಗೆ ಪತ್ರ ಬರೆದಿದ್ದಾರೆ.

    ಬೆಂಗಳೂರಿನ ಕರ್ನಾಟಕ ರಾಜ್ಯ ರಿಸರ್ವ್​ ಪೊಲೀಸ್ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟಿಯಾರ್​ ಮತ್ತು ದೆಹಲಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಫ್​ಎಸ್​ ಅಧಿಕಾರಿ ಪತಿ ನಿತೀನ್​ ಯೋಲಾ ಅವರ ನಡುವೆ ಫ್ಯಾಮಿಲಿ ಕೋರ್ಟ್​ನಲ್ಲಿ ವ್ಯಾಜ್ಯ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ಕಟಿಯಾರ್​ ಅವರು ಪತಿ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದು, ಮದುವೆಯ ವೇಳೆ 35 ಲಕ್ಷ ರೂ. ಹಣ ಪಡೆದು, ತಮ್ಮ ಸಂಬಳದ ಹಣವನ್ನೂ ಪಡೆದು ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದರು.

    ಇದನ್ನೂ ಓದಿ: ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್‌

    ಹೀಗಿರುವಾಗ, ನಿತೀನ್​​ಗೆ ತಮ್ಮ ಮಗ ಅಯಾನ್ ಯೋಲಾನನ್ನು ಭೇಟಿ ಮಾಡಲು ಫ್ಯಾಮಿಲಿ ಕೋರ್ಟ್​ 2020ರ ನವೆಂಬರ್ 14 ರ ಆದೇಶದಡಿ ಅವಕಾಶ ನೀಡಿದ್ದರೂ, ಕಟಿಯಾಲ್​ ಸುಳ್ಳು ಕೇಸು ಹಾಕುವುದಾಗಿ ಬೆದರಿಸುತ್ತಾ ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ನಿತೀನ್ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರನ್ನು ಪರಿಶೀಲಿಸಿರುವ ಆಯೋಗ, ಮಗುವು ಇಬ್ಬರೂ ಪಾಲಕರಿಂದ ಪ್ರೀತಿ ಪಡೆದು ಆರೋಗ್ಯಕರವಾಗಿ ಬೆಳೆಯುವ ಅವಕಾಶದಿಂದ ವಂಚಿತವಾಗಿರುವ ಪರಿಸ್ಥಿತಿ ಗಮನಕ್ಕೆ ಬಂದಿದೆ. ಆದ್ದರಿಂದ ವರ್ತಿಕಾ ಕಟಿಯಾರ್ ವಿರುದ್ಧ ಅಗತ್ಯ ಕ್ರಮ ಜರುಗಿಸಿ ಎಂದು ಡಿಜಿಪಿ ಪ್ರವೀಣ್ ಸೂದ್​ ಅವರಿಗೆ ಮಕ್ಕಳ ಆಯೋಗ ಮನವಿ ಮಾಡಿದೆ.

    ಪಟ್ನಾ ಏಮ್ಸ್​ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವಾಕ್ಸಿನ್​ ಪ್ರಯೋಗ ಶುರು

    ‘ಬರೀ ಅವರಿಗೇಕೆ, ನಮಗೂ ಕೊಡಿ’ – ಸೀರಮ್​ ಇನ್ಸ್​​ಟಿಟ್ಯೂಟ್​ಗೂ ಬೇಕಂತೆ ಕಾನೂನು ರಕ್ಷಣೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts