ಶ್ರೀನಗರ: ಟೆರರ್ ಫಂಡಿಂಗ್ ಕೇಸ್ಗೆ ಸಂಬಂಧಿಸಿ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಗುರುವಾರವೂ ದಾಳಿ ಮುಂದುವರಿಸಿದ್ದು, ಕಾಶ್ಮೀರ ಕಣಿವೆ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯ ಒಂಭತ್ತು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ. ಆರು ಎನ್ಜಿಒ ಮತ್ತು ಟ್ರಸ್ಟ್ಗಳಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಈ ದಾಳಿ ನಡೆದಿದ್ದು, ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಫಲಾಹ್ -ಏ-ಆಮ್ ಟ್ರಸ್ಟ್, ಚಾರಿಟಿ ಅಲಯನ್ಸ್ ದೆಹಲಿ, ಹ್ಯೂಮನ್ ವೆಲ್ಫೇರ್ ಫೌಂಡೇಷನ್, ಜೆಕೆ ಯತೀಮ್ ಫೌಂಡೇಷನ್, ಸಾಲ್ವೇಷನ್ ಮೂವ್ಮೆಂಟ್ ಮತ್ತು ಜೆಕೆ ವಾಯ್ಸ್ ಆಫ್ ವಿಕ್ಟಿಮ್ಸ್ ಎಂಬ ಎನ್ಜಿಒ/ಟ್ರಸ್ಟ್ಗಳ ಕಚೇರಿ ಮೇಲೆ ದಾಳಿ ನಡೆದಿರುವಂಥದ್ದು. ಟ್ರಸ್ಟ್ ಮತ್ತು ಎನ್ಜಿಒ ಕೆಲಸಗಳಿಗೆ ಬಂದ ದೇಣಿಗೆ, ಅನುದಾನದ ಹಣವನ್ನು ಪ್ರತ್ಯೇಕತಾವಾದಿ ಮತ್ತು ದೇಶ ವಿರೋಧಿ ಕೆಲಸಗಳಿಗೆ ವ್ಯಯಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಈ ದಾಳಿಯನ್ನು ನಡೆಸಲಾಗಿದೆ ಎಂದು ಎನ್ಐಎ ಹೇಳಿದೆ.
ಇದನ್ನೂ ಓದಿ: ಇಸ್ಲಾಮಾಬಾದ್ನ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳು 3,000- ಅವರ ದೇಗುಲ ನಿರ್ಮಾಣಕ್ಕೆ ನೂರು ಅಡ್ಡಿ!
ಈ ಸಂಬಂಧ ಅಕ್ಟೋಬರ್ 8ರಂದು ಪ್ರಕರಣ ದಾಖಲಾಗಿದ್ದು, ಟೆರರ್ ಫಂಡಿಂಗ್ ವಿಚಾರವಾಗಿ ಎನ್ಐಎ ವಿಸ್ತೃತ ತನಿಖೆ ಶುರುಮಾಡಿದೆ. ಇದರ ಭಾಗವಾಗಿ ದಾಳಿ ನಡೆದಿದ್ದು, ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)
ರೇಪ್ ಮತ್ತು ಇತರೆ ಕ್ರೈಂ ಹೆಚ್ಚಾಗಲಿವೆ – ಪಿಡಿಪಿ ನಾಯಕ ಸುರಿಂದರ್ ಚೌಧರಿ ಎಚ್ಚರಿಕೆ