More

    ಅಂತರ್ಜಲ ಪೋಲು ತಡೆಯಲು ಸರಿಯಾದ ಕ್ರಮವೇಕೆ ತಗೊಂಡಿಲ್ಲ: ಕೇಂದ್ರವನ್ನು ತರಾಟೆಗೆ ತಗೊಂಡ ಎನ್​ಜಿಟಿ

    ನವದೆಹಲಿ: ಅಂತರ್ಜಲ ಪೋಲಾಗುವುದನ್ನು ಮತ್ತು ದುರ್ಬಳಕೆಯಾಗುತ್ತಿರುವುದನ್ನು ತಡೆಯುವುದಕ್ಕೆ ಸಮರ್ಪಕ ಕ್ರಮಗಳನ್ನು ಯಾಕೆ ತಗೊಂಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​​ಜಿಟಿ) ತರಾಟೆಗೆ ತೆಗೆದುಕೊಂಡಿದೆ. ಅಂತರ್ಜಲಕ್ಕೆ ಸಂಬಂಧಿಸಿ ನಿಶ್ಚಿತ ಸಮಯ ಮಿತಿಯೊಳಗಿನ ಕಾರ್ಯಯೋಜನೆ ರೂಪಿಸಬೇಕಾದ ಅವಶ್ಯಕತೆ ಇದೆ. ಅದೇ ರೀತಿ, ಅದರ ಮೇಲೆ ನಿಗಾ ಕೂಡ ಇರಿಸಬೇಕಾದ್ದು ಅಗತ್ಯ ಎಂದು ಎನ್​ಜಿಟಿ ಹೇಳಿದೆ.

    ಎನ್​ಜಿಟಿ ಚೇರ್​ಪರ್ಸನ್​ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್​ ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಜಲಶಕ್ತಿ ಸಚಿವಾಲಯ ಮತ್ತು ದೆಹಲಿ ಜಲ ಮಂಡಳಿ ಸಲ್ಲಿಸಿದ ಪ್ರತಿಕ್ರಿಯೆ ಪರಿಶೀಲಿಸಿದ ಬಳಿಕ ಸ್ಪಷ್ಟ ನೀತಿ ರೂಪಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಸಲ್ಲಿಸಿರುವ ಅಫಿಡವಿಟ್​ ನಲ್ಲಿ ಸಾಮಾನ್ಯ ಮತ್ತು ಹಾರಿಕೆಯ ಅಂಶಗಳಷ್ಟೇ ಇವೆ. ಎಲ್ಲ ರಾಜ್ಯಗಳಿಗೂ ಪತ್ರ ಬರೆಯಲಾಗಿದೆ ಎಂಬ ಉತ್ತರವಿದೆ. ಜಲಶಕ್ತಿ ಸಚಿವಾಲಯದ ಇಂತಹ ಉತ್ತರಗಳು ಜನರಲ್ಲಿ ವಿಶ್ವಾಸ ಮೂಡಿಸಲಾರವು ಎಂದು ಅವರು ಹೇಳಿದರು.

    ಇದನ್ನೂ ಓದಿ:  ಡೇಟಾ ಸುರಕ್ಷತೆ : ಸಂಸತ್ ಸಮಿತಿ ವಿಚಾರಣೆ ಹಾಜರಾಗಲ್ಲ ಎಂದ ಅಮೆಜಾನ್​ !

    ಗಾಝಿಯಾಬಾದ್​ನ ಬಿಜೆಪಿ ಕೌನ್ಸಿಲರ್​ ರಾಜೇಂದ್ರ ತ್ಯಾಗಿ ಮತ್ತು ಫ್ರೆಂಡ್ಸ್ ಎಂಬ ಎನ್​ಜಿಒ ಸಲ್ಲಿಸಿದ್ದ ದೂರು ಅರ್ಜಿಯ ವಿಚಾರಣೆಯನ್ನು ನ್ಯಾಯಾಧಿಕರಣ ಕೈಗೆತ್ತಿಕೊಂಡಿದ್ದು, ಇದಕ್ಕೆ ಜಲಶಕ್ತಿ ಸಚಿವಾಲಯ ಮತ್ತು ದೆಹಲಿ ಜಲ ಮಂಡಳಿಗಳು ಅಫಿಡವಿಟ್ ಸಲ್ಲಿಸಿದ್ದವು. (ಏಜೆನ್ಸೀಸ್)

    ಅಗಸ್ಟಾ ವೆಸ್ಟ್​ಲ್ಯಾಂಡ್ ಕೇಸ್​: ಮಧ್ಯವರ್ತಿ ರಾಜೀವ್ ಸಕ್ಸೇನಾಗೆ ಮಧ್ಯಂತರ ಜಾಮೀನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts