More

    ಇಲ್ಲಿವರೆಗೂ ನಯನತಾರಾ ಬಾಳಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೆಲ್ಲ ನಡೆದಿದೆ! ಇದು ಕೂಡ ನಡೆಯಲಿದೆಯಂತೆ…

    ಹೈದರಾಬಾದ್​: ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

    ತಾಜಾ ಸಂಗತಿ ಏನೆಂದರೆ, ಮತ್ತೊಂದು ತಾರಾ ದಂಪತಿ ಬೇರೆಯಾಗುವ ಭವಿಷ್ಯವನ್ನು ಈಗಾಗಲೇ ವೇಣು ಸ್ವಾಮಿ ಅವರು ನುಡಿದಿದ್ದು, ಆ ಸಂಗತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಇತ್ತೀಚೆಗೆ ನಯನತಾರಾ ಅವರ ಅನ್ನಪೂರ್ಣಿ ಸಿನಿಮಾ ಬಿಡುಗಡೆಯಾಯಿತು. ಈ ಸಿನಿಮಾವನ್ನು ನೀಲೇಶ್​ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಒಂದು ಸನ್ನಿವೇಶ ವಿವಾದಕ್ಕೆ ಗುರಿಯಾಗಿ, ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಯಿತು.

    ವಿವಾದವೇನು ಅಂದರೆ, ರಾಮ ಮಾಂಸ ತಿನ್ನುತ್ತಿದ್ದ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದು ಹಿಂದುಗಳ ಕೋಪಕ್ಕೆ ಗುರಿಯಾಗಿ, ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೆಟ್​ಫ್ಲಿಕ್ಸ್​ನಿಂದ ಆ ಸಿನಿಮಾವನ್ನೇ ತೆಗೆದುಹಾಕಲಾಗಿದೆ. ಈ ವಿವಾದ ಭಾರಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ತೆಲುಗು ರಾಜ್ಯದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದಾರೆ. ಏಕೆಂದರೆ, ಇದೇ ವೇಣು ಸ್ವಾಮಿ ನಯನತಾರಾ ಬಗ್ಗೆ ನುಡಿದಿದ್ದ ಭವಿಷ್ಯಗಳು ನಿಜವಾಗುತ್ತಿರುವುದು. ಆ ಭವಿಷ್ಯ ಏನೆಂದರೆ, ಮದುವೆ ನಂತರ ನಯನತಾರಾ ಅವರು ವಿವಾದಗಳ ಸುಳಿಯಲ್ಲಿ ಸಿಲುಕೊಳ್ಳುತ್ತಾರೆ ಎಂಬುದು. ಅಲ್ಲದೆ, ನಯನತಾರಾ ಮತ್ತು ವಿಘ್ನೇಶ್​ ಸಂಬಂಧ ಮುರಿದು ಬೀಳುತ್ತೆ ಎಂದು ಸಹ ಭವಿಷ್ಯ ನುಡಿದಿದ್ದಾರೆ. ಇಲ್ಲಿವರೆಗೂ ನಯನರಾತಾ ವಿಚಾರದಲ್ಲಿ ವೇಣು ಸ್ವಾಮಿ ನುಡಿದಿರುವ ಭವಿಷ್ಯ ನಿಜವಾಗಿದ್ದು, ಡಿವೋರ್ಸ್​ ಸಹ ನಿಜವಾಗಬಹುದು ಎಂಬುದು ಅಭಿಮಾನಿಗಳ ಆತಂಕವಾಗಿದೆ.

    ಇನ್ನು ನಯನತಾರಾ ಅವರು ಮದುವೆ ಬಳಿಕ ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡರು. ಒಮ್ಮೆ ಚಪ್ಪಲಿ ಧರಿಸಿ ತಿರುಪತಿ ದೇವಸ್ಥಾನ ಪ್ರವೇಶಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಸಮಯದಲ್ಲಿ ವಿಘ್ನೇಶ್​, ನಯನಾ ಜತೆಯಲ್ಲೇ ಇದ್ದರು. ಇದೀಗ ಅನ್ನಪೂರ್ಣಿ ಚಿತ್ರ ವಿವಾದಕ್ಕೆ ಗುರಿಯಾಗಿದೆ. ಇದಲ್ಲದೇ ವಿಘ್ನೇಶ್ ಶಿವನ್ ಕೂಡ ಸಮಸ್ಯೆಗಳನ್ನು ಎದುರಿಸಬೇಕಾಯಿತು. ವಿಘ್ನೇಶ್ ಅವರು ನಟ ಅಜಿತ್​ಗೆ ನಿರ್ದೇಶಿಸಬೇಕಿದ್ದ ಚಿತ್ರದಿಂದ ಬದಲಾಗಿದ್ದಾರೆ. ಅಲ್ಲದೆ, ಎಲ್​ಐಸಿ ಚಿತ್ರದ ಟೈಟಲ್ ವಿವಾದಕ್ಕೂ ಸಿಲುಕಿದ್ದರು. ಇದೆಲ್ಲ ವೇಣು ಸ್ವಾಮಿ ಹೇಳಿದಂತೆ ನಡೆಯುತ್ತಿದೆ ಎನ್ನುತ್ತಾರೆ ಅಭಿಮಾನಿಗಳು. ಹೀಗಾಗಿ ವೇಣು ಸ್ವಾಮಿ ಭವಿಷ್ಯ ನುಡಿದಂತೆ ನಯನತಾರಾ ಮತ್ತು ವಿಘ್ನೇಶ್ ಬ್ರೇಕ್ ಅಪ್ ಆಗುತ್ತಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

    ಈ ರೀತಿಯ ಭವಿಷ್ಯವಾಣಿಗಳ ಮೂಲಕ ವೇಣುಸ್ವಾಮಿ ಈಗಾಗಲೇ ಚಿತ್ರರಂಗದಲ್ಲಿ ವಿವಾದಾತ್ಮಕ ಜ್ಯೋತಿಷಿ ಎನಿಸಿಕೊಂಡಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಪ್ರಭಾಸ್​ಗೆ ಮದುವೆಯಾಗುವ ಭಾಗ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ವೇಣು ಸ್ವಾಮಿ ಅವರು ತಮ್ಮ ಭವಿಷ್ಯವಾಣಿಗಳ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ತಮ್ಮ ಭವಿಷ್ಯವಾಣಿಯನ್ನು ಮುಂದುವರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

    ರಶ್ಮಿಕಾ ವಿರುದ್ಧ ಹರಿಹಾಯ್ದು ಲವ್​ ಅಫೇರ್​ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ!

    ರಾಮನನ್ನು ಮಾಂಸಾಹಾರಿಯಾಗಿ ತೋರಿಸಿದ ‘ಅನ್ನಪೂರ್ಣಿ’; ನಯನತಾರಾ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್

    ಅರ್ಜುನ್​ ಜನ್ಯರ ’45’ ಚಿತ್ರದ ಸನ್ನಿವೇಶವೊಂದಕ್ಕೆ 418 ಕಲರ್ ಬಾಂಬ್‌ ಬಳಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts