ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ತೆಲುಗು ಚಿತ್ರರಂಗದ ಸೆಲ್ಫ್ ಮೇಡ್ ಸ್ಟಾರ್ಗಳಲ್ಲಿ ಒಬ್ಬರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ನಂತರ ಅವರು ಟಾಲಿವುಡ್ಗೆ ‘ಅಷ್ಟಾಚೆಮ್ಮಾ‘ ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಇದೀಗ, ಬಹಳಷ್ಟು ವಿಭಿನ್ನ ಸಿನಿಮಾಗಳಲ್ಲಿ ನಟಿಸಿ, ತನ್ನದೇ ಆದ ಖ್ಯಾತಿ ಗಳಿಸಿದ್ದಾರೆ. ನಾನಿ ನಾಯಕನಾಗಿ ನಟಿಸಿರುವ ‘ಶ್ಯಾಮ್ ಸಿಂಘ ರಾಯ್‘ ಅವರ ಇತ್ತೀಚಿನ ಚಿತ್ರವಾಗಿದ್ದು, ಕ್ರಿಸ್ಮಸ್ ಬಿಡುಗಡೆಯಾಯಿತು. ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಬಂದರೂ, ಕಲೆಕ್ಷನ್ ಕಡಿಮೆ ಎಂದು ಹೇಳಲಾಗುತ್ತಿದೆ. ಹೌದು, ಚಿತ್ರ ತೆಲುಗಿನ ಉಭಯ ರಾಜ್ಯಗಳಲ್ಲಿ ಕೇವಲ 22 ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ.
‘ಶ್ಯಾಮ್ ಸಿಂಘ ರಾಯ್‘ ನಿರ್ಮಾಪಕ ವೆಂಕಟ್ ಬೋಯಿನಪಲ್ಲಿ ಅವರಿಗೆ ಇದು ಮೊದಲ ಸಿನಿಮಾ. ನಿರ್ಮಾಪಕ ದಿಲ್ ರಾಜು ಕೂಡ ‘ಶ್ಯಾಮ್ ಸಿಂಘ ರಾಯ್‘ ಚಿತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆಂಧ್ರ ಪ್ರದೇಶದ ಥಿಯೇಟರ್ನಲ್ಲಿ ಟಿಕೆಟ್ ದರ ಇಳಿಕೆಯ ಜೊತೆಗೆ ನಟ ನಾನಿ ಅವರ ಕಾಮೆಂಟ್ಗಳು ಕೂಡ ಚಿತ್ರದ ಕಲೆಕ್ಷನ್ ಮೇಲೆ ಪ್ರಭಾವ ಬೀರಿದೆ. ಹೌದು, ಟಿಕೆಟ್ ಬೆಲೆ ಇಳಿಕೆಯ ಬಗ್ಗೆ ಮಾತಾಡಿದ ನಟ ನಾನಿ ಜಗನ್ ಸರ್ಕಾರದ ಮೇಲೆ ಕೀಡಿಕಾರಿದ್ದರು. ಇದರಿಂದ, ಚಿತ್ರದ ಕಲೆಕ್ಷನ್ ಕಡಿಮೆಯಾಗಿದೆ ಎನ್ನಲಾಗಿದೆ. ಈ ಮಾಹಿತಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಉಳಿದ ಸಿನಿಮಾ ನಿರ್ಮಾಪಕರಿಗೆ ತಮ್ಮ ಚಿತ್ರ ಬಿಡುಗಡೆ ಮಾಡಲು ನಡುಕ ಹುಟ್ಟಿಸಿದೆಯಂತೆ.
ಆದರೆ, ಕಲೆಕ್ಷನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನಟ ನಾನಿ, ಚಿತ್ರದ ನಿರ್ಮಾಪಕರನ್ನು ಬೆಂಬಲಿಸಲು ಒಂದು ಡೇರಿಂಗ್ ಸ್ಟೆಪ್ ಹಾಕಿದ್ದಾರೆ. ‘ಶ್ಯಾಮ್ ಸಿಂಘ ರಾಯ್‘ ಚಿತ್ರಕ್ಕೆ ತೆಗೆದುಕೊಂಡ ಸಂಭಾವನೆಯಲ್ಲಿ ಸುಮಾರು 65% ಅನ್ನು ನಿರ್ಮಾಪಕರಿಗೆ ಮರುಪಾವತಿಸಿದರಂತೆ. ನಾನಿ ಈ ಚಿತ್ರಕ್ಕೆ 8 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅದರಲ್ಲಿ, ಸುಮಾರು 5 ಕೋಟಿ ರೂ. ನಿರ್ಮಾಪಕರಿಗೆ ವಾಪಸ್ ನೀಡಿದ್ದಾರೆ ಎನ್ನಲಾಗಿದೆ. ಟಾಲಿವುಡ್ನಲ್ಲಿ ಹೀಗೆ ನಿರ್ಮಾಪಕರನ್ನು ಬೆಂಬಲಿಸುವ ಹೆಜ್ಜೆಗಳನ್ನು ಇಡುವ ಕೆಲವೇ ಕೆಲವು ನಾಯಕರು ಇದ್ದಾರೆ. ಈಗ, ನ್ಯಾಚುರಲ್ ಸ್ಟಾರ್ ನಾನಿ ಕೂಡ ಅಂತವರಲ್ಲಿ ಒಬ್ಬರು ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ದೇವರಾದ ನಟ ಪುನೀತ್! ಡಾರ್ಲಿಂಗ್ ಕೃಷ್ಣಗೆ ಸರಿಯಾದ ದಾರಿ ತೋರಿಸಲಿರುವ ಪವರ್ಸ್ಟಾರ್…
ಯಾರಿಗೂ ಉಪಕಾರ ಮಾಡಬೇಕಿಲ್ಲ ಎಂದು 5 ವರ್ಷದ ಸಿನಿ ಜರ್ನಿಯಲ್ಲಿ ಕಲಿತೆ: ರಶ್ಮಿಕಾ ಮಂದಣ್ಣ