ಮೈಸೂರು: ಅವಧಿಗೂ ಮುನ್ನ ಹೋಟೆಲ್ ಖಾಲಿ ಮಾಡುವಂತೆ ಧಮ್ಕಿ ಹಾಕಿ, ಹೋಟೆಲ್ ಜಾಗ ಗುತ್ತಿಗೆಗೆ ನೀಡಿದ್ದ ಮಾಲೀಕ ಮಹಿಳೆ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ನಡೆದಿದೆ.
ಕೃತಿಕಾ ಎಂ. ಗೌಡ ಎಂಬುವರು, ಸಯ್ಯದ್ ರಿಯಾಜ್ ವಿರುದ್ಧ ಧಮ್ಕಿ ಆರೋಪ ಮಾಡಿದ್ದಾರೆ. ಬನ್ನಿಮಂಟಪದ ಕೇಸರಿ ರೆಸ್ಟೋರೆಂಟ್ ಕೃತಿಕಾ ಗುತ್ತಿಗೆ ಪಡೆದಿದ್ದರು. ಈ ಜಾಗ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ಗೆ ಸೇರಿದ್ದು, ನಲಪಾಡ್ರಿಂದ ಆರೋಪಿ ಸಯ್ಯದ್ ರಿಯಾಜ್ ಲೀಸ್ ಪಡೆದಿದ್ದನು.
ಆದ್ರೆ ರಿಯಾಜ್ 20 ಲಕ್ಷ ರೂ. ಪಡೆದು 3 ವರ್ಷಕ್ಕೆ ಕೃತಿಕಾಗೆ ಲೀಸ್ ನೀಡಿದ್ದಾನೆ. ಇನ್ನು ಎರಡು ವರ್ಷ ಬಾಕಿ ಇದ್ದರು ಖಾಲಿ ಮಾಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎಂದು ಕೃತಿಕಾ ಆರೋಪ ಮಾಡಿದ್ದಾರೆ.
ಅಲ್ಲದೆ ಸೈಯದ್ ರಿಯಾಜ್ ಒಬ್ಬ ರೌಡಿ ಶೀಟರ್, ಈ ಜಾಗ ಮೊಹಮ್ಮದ್ ನಲಪಾಡ್ ಅವರದ್ದು ಅನ್ನೋದು ನನಗೆ ಗೊತ್ತಿಲ್ಲ. ರಿಯಾಜ್ ಲೀಸ್ ತೆಗೆದುಕೊಂಡು ನನಗೆ ಕಾನೂನು ಬಾಹಿರವಾಗಿ ಸಬ್ ಲೀಸ್ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ 30 ಲಕ್ಷ ರೂ. ಹಣ ಕೊಟ್ಟಿದ್ದೇನೆ. ಆದರೂ ನೆಮ್ಮದಿಯಾಗಿ ಇರೋದಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಪ್ಪು 5ನೇ ತಿಂಗಳ ಪುಣ್ಯತಿಥಿ; ಕುಟುಂಬಸ್ಥರಿಂದ ಪೂಜೆ, ನಿರ್ದೇಶಕ ಆರ್ಜಿವಿ ಭೇಟಿ