ಬೆಂಗಳೂರು: ಬ್ಯಾಂಕ್ ಖಾತೆಗೆ ಇ-ಮೇಲ್ ವಿಳಾಸ ಅಪ್ಡೇಟ್ ಮಾಡಬೇಕೆಂದು ಬಿಎಂಆರ್ಸಿಎಲ್ ಮಹಿಳಾ ಅಧಿಕಾರಿಗೆ ಕರೆ ಮಾಡಿ ಸೈಬರ್ ಕಳ್ಳರು 1.79 ಲಕ್ಷ ರೂ. ದೋಚಿದ್ದಾರೆ. ಶಾಂತಿನಗರ ಬಿಎಂಆರ್ಸಿಎಲ್ ಕಚೇರಿಯ ಸಿರಿಗೌನಿ ಬಾಲಕೊಂಡಪ್ಪ ವಂಚನೆಗೆ ಒಳಗಾದ ಅಧಿಕಾರಿ.
ವಿಲ್ಸನ್ ಗಾರ್ಡನ್ ಪೊಲೀಸರು ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 19ರ ಮಧ್ಯಾಹ್ನ 3.35ಕ್ಕೆ ಮಹಿಳಾ ಅಧಿಕಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಆ್ಯಕ್ಸಿಸ್ ಬ್ಯಾಂಕ್ ರಿಲೇಷನ್ಶಿಪ್ ಮ್ಯಾನೇಜರ್ ದಿನೇಶ್ ಶೆಟ್ಟಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಆ್ಯಕ್ಸಿಸ್ ಬ್ಯಾಂಕ್ ಖಾತೆಗೆ ಇ-ಮೇಲ್ ವಿಳಾಸ ಅಪ್ಡೇಟ್ ಮಾಡಬೇಕಿದೆ. ಬ್ಯಾಂಕ್ನ ನೆಟ್ಬ್ಯಾಂಕಿಂಗ್ ಆ್ಯಪ್ ಓಪನ್ ಮಾಡಿ ಅದರಲ್ಲಿನ ಒಟಿಪಿ ಹೇಳುವಂತೆ ತಿಳಿಸಿದ್ದಾನೆ.
ಬ್ಯಾಂಕ್ ಅಧಿಕಾರಿ ಇರಬೇಕೆಂದು ನಂಬಿ ತನ್ನ ಮೊಬೈಲ್ಗೆ ಬಂದ ಒಟಿಪಿ ನಂಬರ್ ತಿಳಿಸಿದ್ದಾರೆ. ತಕ್ಷಣ ಸಿರಿಗೌನಿ ಬ್ಯಾಂಕ್ ಖಾತೆಯಿಂದ 1.79 ಲಕ್ಷ ರೂ. ಕಡಿತವಾಗಿದೆ. ವಾಪಸ್ ಅಪರಿಚಿತ ವ್ಯಕ್ತಿಯ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆ್ ಆಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.