More

    ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

    | ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
    ಇದು ಹತ್ತಾರು ವರ್ಷದಿಂದ ನಡೆದಿದೆ ಅಂತ ಹೇಳಲಾಗುತ್ತಿದೆ. ಆದರೆ ಇದನ್ನು ರಾಜಕೀಯವಾಗಿ ಯಾರೂ ಬಳಸಿಕೊಳ್ಳಬಾರದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದ ಅವರು, ಎಸ್‌ಐಟಿಯವರು ರೂಲ್ಸï ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಅರೆಸ್ಟ್, ಬೇಲ್ ಎಲ್ಲ ಆಗುತ್ತದೆ. ಈ ಅರೆಸ್ಟ್ ಮಾಡಿz್ದÁರೆ. ಮುಂದೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಇಂತಹ ಕೆಲಸ ಮಾಡುವವರಿಗೆ ಬುದ್ಧಿ ಬರಬೇಕು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
    ದೇಶದಲ್ಲಿ ಬಿಜೆಪಿಯವರ ಗೆಲುವಿಗೆ ಬ್ರೇಕ್ ಹಾಕುವಂಥ ಸ್ಥಿತಿ ನಿರ್ಮಾಣವಾಗಿದೆ. ಮಲ್ಲಿಕಾರ್ಜುನ ಖರ್ಗೆ ಸೋಲಿನ ಭಯದಿಂದ ಪದೇಪದೆ ಕಲಬುರಗಿಯಲ್ಲಿ ಪ್ರಚಾರ ಮಾಡುತ್ತಿರುವ ಕುರಿತ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲಿ ಓಡಾಡಿದ್ದೀನಿ? ಯಾವ ಮೀಟಿಂಗ್ ಮಾಡಿದ್ದೀನಿ ಹೇಳಬೇಕು. ಎರಡೇ ಎರಡು ಸಭೆಗಳಲ್ಲಿ ಭಾಗವಹಿಸಿz್ದೆÃನೆ. ನಾನು ಇಲ್ಲಿ ೫೩ ವರ್ಷ ಕಳೆದಿz್ದÉÃನೆ. ಹೀಗಾಗಿ ನಾನು ಇಲ್ಲಿಗೆ ಬರಬಾರದಾ? ನನ್ನೂರು, ನನ್ನ ಭೂಮಿ, ನಮ್ಮ ನೀರಿದ್ದು, ಬರಬಾರದು ಅಂದರೆ ಹ್ಯಾಂಗೆ? ಮೋದಿ ಎಷ್ಟು ಸಾರಿ ಬಂದು ಹೋದರು. ಬಿಜೆಪಿ ನಾಯಕರು ಎಷ್ಟು ಜನ ಬಂದು ಹೋಗಿz್ದÁರೆ. ಆರ್‌ಎಸ್‌ಎಸ್‌ನವರು ಇಲ್ಲೇ ಠಿಕಾಣಿ ಹೂಡಿz್ದÁರೆ. ಅದೆಲ್ಲ ಬಿಟ್ಟು ಯಾಕೆ ಇಲ್ಲಿಗೆ ಬಂದರು ಎಂದು ನನ್ನನ್ನು ಕೇಳಿದರೆ ಏನು ಹೇಳಲಿ ಎಂದರು.
    +

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts