ಬೆಂಗಳೂರು: ಲೋಕಾಯುಕ್ತ ಸಂಸ್ಥೆ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ದೂರವಾಣಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ವಂಚನೆ ಮಾಡಲು ಸೈಬರ್ ಕಳ್ಳರು ಯತ್ನಿಸಿದ್ದಾರೆ.
ಈ ಕುರಿತು ನ್ಯಾ.ಸಂತೋಷ್ ಹೆಗ್ಡೆ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿ ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೂನ್ 14ರ ಸಂಜೆ 6 ಗಂಟೆಯಲ್ಲಿ ಸಂತೋಷ್ ಹೆಗ್ಡೆ ಅವರ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ಮಹಿಳೆ, ನಿಮ್ಮ ಕ್ರೆಡಿಟ್ ಕಾರ್ಡ್ಗೆ ರಿವಾರ್ಡ್ ಪಾಯಿಂಟ್ ಬಂದಿವೆ. ಅದರ ಅವಧಿ ಮುಕ್ತಾಯವಾಗುತ್ತಿವೆ ಎಂದು ಹೇಳಿದ್ದಾಳೆ. ಅನುಮಾನ ಬಂದು ಸಂತೋಷ್ ಹೆಗ್ಡೆ ಅವರು ಕರೆ ಕಟ್ ಮಾಡಿದ್ದಾರೆ. ಇದಾದ ಕೆಲವೇ ನಿಮಿಷಕ್ಕೆ ಮೊಬೈಲ್ಗೆ 2 ಒಟಿಪಿಗಳು ಬಂದಿವೆ. ಆಗ ಇದು ವಂಚಕರ ಕರೆ ಎಂಬುದು ಖಚಿತವಾಗಿದೆ. ಒಟಿಪಿ ಸಂಖ್ಯೆಯನ್ನು ಹಂಚಿಕೊಂಡಿಲ್ಲ.
ಕರೆ ಮಾಡಿ ವಂಚನೆ ಮಾಡಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಸಂತೋಷ್ ಹೆಗ್ಡೆ ಮನವಿ ಮಾಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮೊಬೈಲ್ ನಂಬರ್ ಆಧರಿಸಿ ವಂಚಕರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ್ರೋಹ ಪ್ರಕರಣ: ಲಕ್ಷದ್ವೀಪ ನಟಿ ಆಯಿಷಾ ಸುಲ್ತಾನಗೆ ಬಿಗ್ ರಿಲೀಫ್!
ಅಪ್ಪಿತಪ್ಪಿ ಗೂಗಲ್ನಲ್ಲಿ ಈ ಪದಗಳನ್ನು ಸರ್ಚ್ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ!
ಸೀರೆಯೆಂದರೆ ಸಂಭ್ರಮವೆನ್ನುತ್ತ ಪುಷ್ಅಪ್ ಮಾಡುವ ಡಾಕ್ಟರ್! ನೆಟ್ಟಿಗರ ಮನಗೆದ್ದ ವೈದ್ಯೆ