More

    ಅರಸಿಕೆರೆಯಿಂದ ಬಿಎಸ್​ವೈ ಸಂಬಂಧಿ ಸಂತೋಷ್​, ವರುಣಾದಿಂದ ಭಾರತಿ ಶಂಕರ್​ಗೆ ಜೆಡಿಎಸ್ ಟಿಕೆಟ್ ಘೋಷಣೆ

    ಮೈಸೂರು/ಹಾಸನ: ಅರಸಿಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತ ಹಾಗೂ ಸಂಬಂಧಿ ಎನ್​.ಆರ್​. ಸಂತೋಷ್​ ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನೊಂದೆಡೆ ವರುಣಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಬದಲಾಗಿದ್ದು, ಭಾರತಿ ಶಂಕರ್​ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ.

    ಅರಸಿಕೆರೆ ಟಿಕೆಟ್ ಎನ್.ಆರ್.ಸಂತೋಷ್​ಗೆ ಫೈನಲ್ ಆಗಿದೆ. ದೇವೇಗೌಡರ ಜತೆ ನಡೆದ ಚರ್ಚೆಯಲ್ಲಿ ಟಿಕೆಟ್​ ಅಂತಿಮವಾಗಿದೆ. ಬಾಣಾವರ ಅಶೋಕ್ ಅವರ ಮನವೊಲಿಸಿ ಸಂತೋಷ್​ಗೆ ಟಿಕೆಟ್​ ಫೈನಲ್​ ಮಾಡಲಾಗಿದ್ದು, ಅರಸಿಕೆರೆ ಜೆಡಿಎಸ್​ ಅಭ್ಯರ್ಥಿಯಾಗಿ ಸಂತೋಷ್​ ಸ್ಫರ್ಧೆ ಖಚಿತವಾಗಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಜತೆ ಚರ್ಚಿಸಿ ಎಚ್​ಡಿಡಿ ಅಂತಿಮ ನಿರ್ಣಯ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಭಯ್ಯಾ ಎನ್ನುತ್ತಿದ್ದೆ ಈಗ ಅವನ ಮಗುವಿಗೆ ತಾಯಿಯಾದೆ! ಮಹಿಳೆಯ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು

    ವರುಣಾದಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿದ್ದ ಅಭಿಷೇಕ್​ ದಿಢೀರ್​ ನಾಪತ್ತೆಯಾಗಿ ಯಾರ ಕೈಗೂ ಸಿಗದ ಹಿನ್ನೆಲೆಯಲ್ಲಿ ಅಭಿಷೇಕ್​ ಬದಲು ಭಾರತಿ ಶಂಕರ್​ ಅವರಿಗೆ ಜೆಡಿಎಸ್​ ಟಿಕೆಟ್​ ನೀಡಲಾಗಿದೆ. ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ಅಭ್ಯರ್ಥಿಯಾಗಿ ಭಾರತಿ ಶಂಕರ್​ ಅವರು ಸ್ಪರ್ಧಿಸಲಿದ್ದಾರೆ. ಬಿಜೆಪಿ ಟಿಕೆಟ್​ ಮಿಸ್​ ಆಗಿದ್ದಕ್ಕೆ ಭಾರತಿ ಶಂಕರ್​ ಅವರು ಜೆಡಿಎಸ್​ ಸೇರಿ, ಟಿಕೆಟ್​ ಪಡೆದು ಕಣಕ್ಕಿಳಿದಿದ್ದಾರೆ.

    ಚಿತ್ರದುರ್ಗದಿಂದ ರಘು ಆಚಾರ್ ಜೆಡಿಎಸ್​ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್​ನಿಂದ ಟಿಕೆಟ್​ ಸಿಗದಿದ್ದಕ್ಕೆ ರಘು ಆಚಾರ್​ ಅವರು ಚಿತ್ರದುರ್ಗದಿಂದ ಕಣಕ್ಕಿಳಿಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ನಾಲ್ವರು ಪೊಲೀಸರ ವರ್ಗಾವಣೆ ಮಾಡಿ ಆದೇಶ

    ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ ನೀಡಿದ ಜಗದೀಶ್ ಶೆಟ್ಟರ್! ಮುಜುಗರ ತಪ್ಪಿಸಲು ಕೊಡ್ತಾರಾ ಟಿಕೆಟ್?

    ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts