ಮುಂಬೈ: ಅಂಡರ್ವರ್ಲ್ಡ್ ಡಾನ್ ಕರೀಮ್ ಲಾಲ್ರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ಮಾಡಿದ್ದರು ಎಂಬ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಶಿವಸೇನಾ ಸಂಸದ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದು, ಇತಿಹಾಸ ತಿಳಿಯದವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂಜಯ್ ರಾವತ್ ಟ್ವೀಟ್ ಮೂಲಕ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು, ಕರೀಮ್ ಲಾಲ್ ಪಠಾಣ್ ಸಮುದಾಯದ ನಾಯಕರಾಗಿದ್ದರು. ಅವರು “ಪಖ್ತುನ್-ಇ-ಹಿಂದ್” ಹೆಸರಿನ ಸಂಘಟನೆಯ ನೇತೃತ್ವ ವಹಿಸಿದ್ದರು. ಈ ನಾಯಕತ್ವದ ಸಾಮರ್ಥ್ಯದಿಂದ ಕರೀಮ್ ಲಾಲ್ ಅನೇಕ ಪ್ರಮುಖ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದರು. ಅವರಲ್ಲಿ ಇಂದಿರಾ ಗಾಂಧಿ ಅವರು ಕೂಡ ಒಬ್ಬರಾಗಿದ್ದರು. ಆದಾಗ್ಯ ಮುಂಬೈ ಇತಿಹಾಸದ ಬಗ್ಗೆ ತಿಳಿಯದವರೂ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್ ಕರೀಮ್ ಲಾಲ್ರನ್ನು ಭೇಟಿಯಾಗಿದ್ದರು: ಸಂಜಯ್ ರಾವತ್
ತಮ್ಮ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳುವುದರಲ್ಲಿ ನಾನೆಂದಿಗೂ ಹಿಂದೆ ಸರಿಯುವುದಿಲ್ಲ. ಅಚ್ಚರಿಯೆಂದರೆ ಇಂದಿರಾ ಗಾಂಧಿ ಇತಿಹಾಸ ತಿಳಿಯದವರು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ರಾಜೀವ್ ಸತವಾ ಹೆಸರನ್ನು ಟ್ವಿಟರ್ನಲ್ಲಿ ಸಂಜಯ್ ರಾವತ್ ಟ್ಯಾಗ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸಂಜಯ್ ರಾವತ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಮಿಲಿಂದ್ ದೇವುರಾ ಮತ್ತು ಸಂಜಯ್ ನಿರುಪಮ ಟ್ವೀಟ್ ಮೂಲಕವೇ ಖಂಡಿಸಿದ್ದರು. ತನ್ನ ಹೇಳಿಕೆಯನ್ನು ಹಿಂಪಡೆಯುವಂತೆ ರಾವತ್ರನ್ನು ಆಗ್ರಹಿಸಿದ್ದರು. ಇಂದಿರಾ ಗಾಂಧಿ ಅವರು ನಿಜವಾದ ದೇಶಪ್ರೇಮಿಯಾಗಿದ್ದರು. ರಾಷ್ಟ್ರದ ರಕ್ಷಣೆ ದೃಷ್ಟಿಯಲ್ಲಿ ಅವರೆಂದಿಗೂ ರಾಜಿಯಾಗುತ್ತಿರಲಿಲ್ಲ ಎಂದು ದೇವುರಾ ತಿರುಗೇಟನ್ನು ನೀಡಿದ್ದಾರೆ.
ಬುಧವಾರ ಮರಾಠಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್ ರಾವತ್ ಮಾತನಾಡಿ, ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್ವರ್ಲ್ಡ್ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್ ಹಾಜಿ ಮಸ್ತಾನ್ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್ ಕರೀಮ್ ಲಾಲ್ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್ ರಾವತ್ ಬಿಚ್ಚಿಟ್ಟಿದ್ದರು. ಇದು ಎಲ್ಲೆ ತೀವ್ರ ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್)
Kareem Lala was leader of Pathan community, he led an organisation called 'Pakhtun-e-Hind'. It was in this capacity of the leader of Pathan community that he met several top leaders including Indira Gandhi
— Sanjay Raut (@rautsanjay61) January 16, 2020
However, those who do not the history of Mumbai, r twisting my statement
I have never shied away from praising Indira Gandhi as an iron lady who took decisions with iron fist. Surprisingly those who do not history of Indiraji are shouting on top of the voice. @AUThackeray@RahulGandhi @SATAVRAJEEV @
— Sanjay Raut (@rautsanjay61) January 16, 2020
Indira ji was a true patriot who never compromised on India’s national security.
— Milind Deora मिलिंद देवरा (@milinddeora) January 16, 2020
As former @INCMumbai President, I demand that @rautsanjay61 ji withdraws his ill-informed statement.
Political leaders must show restraint before distorting the legacies of deceased Prime Ministers
बेहतर होगा कि शिवसेना के मि.शायर दूसरों की हल्की-फुल्की शायरी सुनाकर महाराष्ट्र का मनोरंजन करते रहें।
— Sanjay Nirupam (@sanjaynirupam) January 16, 2020
पूर्व प्रधानमंत्री इंदिरा गांधी जी के खिलाफ दुष्प्रचार करेंगे तो उन्हें पछताना पड़ेगा।
कल उन्होंने इदिराजी के बारे में जो बयान दिया है वो वापस ले लें।