ತಿರುವನಂತಪುರಂ: ಅಂತರ ಧರ್ಮೀಯ ಮದುವೆಯಾದ ಕೇರಳ ಸಿಎಂ ಪಿನರಾಯಿ ವಿಜಯನ್ ಪುತ್ರಿಯ ವಿವಾಹ ಕಾರ್ಯಕ್ರಮ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.
ಸಿಎಂ ಅಧಿಕೃತ ನಿವಾಸದಲ್ಲಿ ಸರಳವಾಗಿ ನಡೆದ ಮದುವೆಯಲ್ಲಿ ಕೊಲೆ ಅಪರಾಧಿಯೊಬ್ಬ ಪಾಲ್ಗೊಂಡಿದ್ದದ್ದು ಹಲವರ ಅಚ್ಚರಿಗೆ ಕಾರಣವಾಗಿದೆ. ಜತೆಗೆ, ರಾಜ್ಯ ಗೃಹ ಇಲಾಖೆಯೆ ವೈಫಲ್ಯಕ್ಕೂ ಸಾಕ್ಷಿ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ; ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್ ಸಿಂಗ್; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಪಿನರಾಯಿ ವಿಜಯನ್ ಪುತ್ರಿ ವೀಣಾ ವಿವಾಹ ಸಿಪಿಐಎಂ ಯುವ ಘಟಕ ಅಧ್ಯಕ್ಷ ಪಿ.ಎ. ಮೊಹಮ್ಮದ್ ಜತೆಗೆ 30 ಜನರ ಸಮ್ಮುಖದಲ್ಲಿ ಸೋಮವಾರ ನೇರವೇರಿತು. ಇದರಲ್ಲಿ ಮಹಮ್ಮದ್ ಹಾಶೀಮ್ ಕೂಡ ಒಬ್ಬ. ಈತ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ. ಕೋವಿಡ್ ಕಾರಣದಿಂದಾಗಿ ಪರೋಲ್ ಮೇಲೆ ಬಿಡುಗಡೆಗೊಂಡಿದ್ದಾನೆ.
ರಿಯಾಸ್ಗೆ ಹಾಶೀಮ್ ಆಪ್ತನಾಗಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದ. ಆದರೆ ಕೊಲೆ ಅಪರಾಧಿಯೊಬ್ಬ ಸಿಎಂ ನಿವಾಸಕ್ಕೆ ತೆರಳಿದ್ದು, ಗೃಹ ಇಲಾಖೆಯ ದೊಡ್ಡ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಇದಲ್ಲದೇ, ಗೃಹ ಖಾತೆಯನ್ನು ಸ್ವತಃ ಸಿಎಂ ಪಿನರಾಯಿ ವಿಜಯನ್ ನಿರ್ವಹಿಸುತ್ತಿದ್ದು, ಘಟನೆ ಇರಿಸುಮುರಿಸು ಉಂಟುಮಾಡಿದೆ. ಹೀಗಾಗಿ ಇದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಜತೆಗೆ ಪಕ್ಷದವರಿಗೂ ಮುಜುಗರ ಉಂಟು ಮಾಡಿದೆ.
ಇದನ್ನೂ ಓದಿ; ನಟ ಸುಶಾಂತ್ ಸಿಂಗ್ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಹೈಕೋರ್ಟ್ ಹಾಶೀಮ್ನನ್ನು ಪ್ರಕರಣದಿಂದ ಮುಕ್ತಗೊಳಿಸಿತ್ತು. ಆದರೆ, ಸುಪ್ರೀಂ ಮತ್ತೆ ಶಿಕ್ಷೆ ವಿಧಿಸಿತ್ತು. ಅಂಥ ವ್ಯಕ್ತಿಯೊಬ್ಬ ಸಿಎಂ ನಿವಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ ಎಂದು ಬಿಜೆಪಿ ಪ್ರಶ್ನಿಸಿದೆ. ಆತನ ಪರೋಲ್ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.
ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!