More

    ಪುರಸಭೆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಿ

    ಮುದಗಲ್: ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಮಾಡುತ್ತಿರುವ ಸ್ಥಳೀಯ ಪುರಸಭೆ ಸಿಬ್ಬಂದಿ ಆರ್ೀ ಉನ್ನಿಸ ಬೇಗಂ ವಿರುದ್ಧ ಕ್ರಮ ಜರುಗಿಸುವಂತೆ ಕರವೇ ಪದಾಧಿಕಾರಿಗಳು ಸೋಮವಾರ ಧರಣಿ ನಡೆಸಿ ತಹಸೀಲ್ದಾರ್ ಶಂಷಾವಲಿಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

    ಜನನ-ಮರಣ ಪ್ರಮಾಣ ಪತ್ರ ಕೊಡುವ ವಿಭಾಗದಲ್ಲಿನ ಸಿಬ್ಬಂದಿ ನಾಗರಿಕರೊಂದಿಗೆ ಸರಿಯಾಗಿ ಸ್ಪಂದಿಸದೆ ಅನುಚಿತವಾಗಿ ವರ್ತಿಸುತ್ತಾರೆ. ಮತ್ತು ಈ ಹಿಂದೆ ಸೇವೆಯಲ್ಲಿದ್ದ ಇಳಕಲ್ ಪುರಸಭೆಯಲ್ಲಿ ಹಲವಾರು ಬಾರಿ ಇಂತಹ ಘಟನೆ ನಡೆದಿದೆ. ಕರವೇ ಪದಾಧಿಕಾರಿ ಜೊತೆಗೆ ಮರಣ ಪ್ರಮಾಣ ಪತ್ರ ಕೇಳಲು ಹೋದಾಗ ನಿರ್ಲಕ್ಷ್ಯವಾಗಿ ವರ್ತಸಿದ್ದಾರೆ.

    ಆದ್ದರಿಂದ ಕೂಡಲೇ ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಮುದಗಲ್ ಕರವೇ ಅಧ್ಯಕ್ಷ ಎಸ್.ಎ.ನಯಿಂ ಒತ್ತಾಯಿಸಿದರು.
    ಕರವೇ ಲಿಂಗಸುಗೂರು ಅಧ್ಯಕ್ಷ ಜಿಲಾನಿ ಪಾಷಾ, ಮುಖ್ಯಸ್ಥರಾದ ಇಸ್ಮಾಯಿಲ್ ಬಳೆಗಾರ, ಎಸ್.ಎನ್.ಖಾದ್ರಿ, ಮಹಾಂತೇಶ,ನಾಗರಾಜ ಮಟ್ಟೂರು, ಸಾಬು ಹುಸೇನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts