More

    ಸುಶಾಂತ್​ ಆತ್ಮಹತ್ಯೆ: ಬನ್ಸಾಲಿ ವಿಚಾರಣೆ ಸಾಧ್ಯತೆ

    ಸುಶಾಂತ್​ ಸಿಂಗ್​ ಆತ್ಮಹತ್ಯೆ ವಿಚಾರವಾಗಿ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕುಟುಂಬದವರು, ಹಿತೈಷಿಗಳು, ಮನೆಗೆಲಸದವರು … ಹೀಗೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸ್​ ವಿಚಾರಣೆಗೆ ಒಳಪಡಿಸಿದ್ದಾರೆ.

    ಇದನ್ನೂ ಓದಿ: ಸೂರ್ಯವಂಶಿಯಲ್ಲಿ ಕರಣ್​ ಜೋಹಾರ್​ ಪಾಲುದಾರಿಕೆ ಇದೆಯೋ ಇಲ್ಲವೋ?

    ಈಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರಿಗೂ ಸಮನ್ಸ್​ ಹೋಗಿದ್ದು, ಅವರು ಸಹ ಸದ್ಯದಲ್ಲೇ ಮುಂಬೈ ಪೊಲೀಸ್​ ಎದುರು ವಿಚಾರಣೆಗೆ ಒಳಪಡಲಿದ್ದಾರೆ.

    ಇಷ್ಟಕ್ಕೂ ಸುಶಾಂತ್​ ಆತ್ಮಹತ್ಯೆಗೂ, ಸಂಜಯ್​ ಲೀಲಾ ಬನ್ಸಾಲಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಬರುವುದು ಸಹಜವೇ. ಆದರೆ, ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುವವರಲ್ಲಿ ಸಂಜಯ್​ ಲೀಲಾ ಬನ್ಸಾಲಿ ಸಹ ಒಬ್ಬರು ಮತ್ತು ಅವರು ಸುಶಾಂತ್​ ಸಿಂಗ್​ ಅವರನ್ನು ತಮ್ಮ ಚಿತ್ರಗಳಿಂದ ದೂರ ಇಟ್ಟಿದ್ದ ಕಾರಣಕ್ಕೆ, ಸುಶಾಂತ್​ ಬಹಳ ನೊಂದಿದ್ದರು ಎಂದು ಹೇಳಲಾಗುತ್ತದೆ. ಈ ಸಂಬಂಧ ಪೊಲೀಸರು ಸದ್ಯದಲ್ಲೇ ಬನ್ಸಾಲಿ ಅವರ ವಿಚಾರಣೆಯನ್ನು ನಡೆಸಲಿದ್ದಾರೆ.

    ಸುಶಾಂತ್​ ಅವರನ್ನು ಬನ್ಸಾಲಿ ದೂರ ಇಟ್ಟಿದ್ದರು ಎಂಬುದು ಒಂದು ವಾದವಾದರೆ, ಇನ್ನೊಂದು ಕಡೆ ಸುಶಾಂತ್​ಗೆ ತಮ್ಮ ಮೂರು ಚಿತ್ರಗಳಲ್ಲಿ ಬನ್ಸಾಲಿ ಅವಕಾಶ ಕೊಟ್ಟಿದ್ದರು ಎಂದು ಹೇಳಲಾಗುತ್ತದೆ. ಇತ್ತೀಚಿನ ಕೆಲವ ವರ್ಷಗಳಲ್ಲಿ, ಬನ್ಸಾಲಿ ಅವರು ‘ರಾಮ್​-ಲೀಲಾ’, ‘ಬಾಜಿರಾವ್​ ಮಸ್ತಾನಿ’ ಮತ್ತು ‘ಪದ್ಮಾವತ್​’ ಚಿತ್ರದಲ್ಲಿ ಹೀರೋ ಪಾತ್ರಗಳಿಗೆ ಸುಶಾಂತ್​ ಅವರನ್ನು ಪರಿಗಣಿಸಿದ್ದರಂತೆ. ಅಷ್ಟೇ ಅಲ್ಲ, ಈ ಸಂಬಂಧ ಸುಶಾಂತ್​ ಜತೆಗೆ ಮಾತನಾಡಿದ್ದರಂತೆ.

    ಇದನ್ನೂ ಓದಿ: ಹೊಸ ರೂಪದಲ್ಲಿ ಬರಲಿದೆ ಅಣ್ಣಾವ್ರ ಸೂಪರ್​ ಹಿಟ್​ ಸಿನಿಮಾ

    ಆದರೆ, ಕಾರಣಾಂತರಗಳಿಂದ ಆ ಮೂರೂ ಚಿತ್ರಗಳಲ್ಲಿ ಸುಶಾಂತ್​ಗೆ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಸುಶಾಂತ್​ ಬಿಟ್ಟ ಪಾತ್ರಗಳನ್ನು ರಣವೀರ್​ ಸಿಂಗ್​ ಒಪ್ಪಿಕೊಂಡು, ಮೂರೇ ಮೂರು ಚಿತ್ರಗಳಲ್ಲಿ ದೊಡ್ಡ ಸ್ಟಾರ್​ ಆದರು. ಈ ಕೊರಗು ಸುಶಾಂತ್​ ಅವರನ್ನು ಕಾಡುತ್ತಲೇ ಇತ್ತು ಎಂದು ಹೇಳಲಾಗುತ್ತದೆ.

    ಗಣೇಶ್​ ಹುಟ್ಟುಹಬ್ಬಕ್ಕೆ ಸಿನಿಮಾ ಕೇಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts