More

    ಬೈತೂಲ್​ನಲ್ಲಿ ನದಿಗೆ ಉರುಳಿದ ಟ್ರಕ್ – ಆರು ಸಾವು

    ಬೈತೂಲ್​: ಕಬ್ಬಿಣದ ರಾಡ್​ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ನಿಯಂತ್ರಣ ತಪ್ಪಿ ತವಾ ನದಿ ಸೇತುವೆಯಿಂದ ಕೆಳಕ್ಕುರುಳಿದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಜಿಲ್ಲಾ ಕೇಂದ್ರ ಸ್ಥಾನದಿಂದ 50 ಕಿ.ಮೀ. ದೂರದಲ್ಲಿ ನಿನ್ನೆ ತಡರಾತ್ರಿ ಈ ದುರಂತ ಸಂಭವಿಸಿದೆ. ಕಬ್ಬಿಣದ ರಾಡ್ ತುಂಬಿದ್ದ ಟ್ರಕ್​ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದೆ. ಪರಿಣಾಮ ಟ್ರಕ್​ನಲ್ಲಿದ್ದ ಐವರು ಕಾರ್ಮಿಕರು ಅದರ ನಡುವೆ ಸಿಲುಕಿ ಮೃತಪಟ್ಟರೆ, ಅಪಘಾತಕ್ಕೀಡಾದ ಬೆನ್ನಿಗೆ ಚಾಲಕ ಮೃತಪಟ್ಟಿದ್ದಾನೆ. ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ:  ದಾಂಪತ್ಯ ಕಲಹ- ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಸೆಕ್ಯೂರಿಟಿ ಗಾರ್ಡ್ !

    ಮೃತರನ್ನು ರಿಕೇಶ್ (25), ಬಬ್ಲು ಭಾಲವಿ (24), ದಿಲೀಪ್ ಉಯ್ಕೆ (26), ಸಂಜು ಬಟ್ಕೆ (40), ಮುನ್ನಾ ಸಲಾಂ (24), ಚಾಲಕ ಮನೋಹರ್ ಸಾಹು (38) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೈತೂಲ್​ ಜಿಲ್ಲೆಯ ಪಿಪ್ರಿ ಗ್ರಾಮದವರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು. ತನಿಖೆ ನಡೆದಿದೆ. (ಏಜೆನ್ಸೀಸ್)

    ಸೋನಿಯಾ ಜಿ, ರಾಹುಲ್​ ಜೀ.. ನೀವು ಗುಪ್ಕರ್ ಗ್ಯಾಂಗ್​ ನ ಬೆನ್ನಿಗಿದ್ದೀರಾ? – ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts