More

    VIDEO| ಅಪಘಾತವಾದ್ರೆ ಜನ ಸಾಯುವುದುಂಟು ಆದರೆ ಇಲ್ಲಿ ಅಪಘಾತವೇ ಯುವಕನ ಪ್ರಾಣ ಉಳಿಸಿದೆ!

    ಕೊಚ್ಚಿ: ಸಾಮಾನ್ಯವಾಗಿ ಅಪಘಾತವಾದರೆ ಗಂಭೀರ ಗಾಯ ಅಥವಾ ಸಾಯುವುದುಂಟು. ಆದರೆ, ಅಪಘಾತ ಇನ್ನೊಬ್ಬರನ್ನು ಬದುಕಿಸಿದೆ ಎಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಅದು ನಿಜವಾಗಿದೆ. ಕಾರು ಮತ್ತು ಜೆಸಿಬಿ ಯಂತ್ರದ ನಡುವೆ ನಡೆದ ಅಪಘಾತದಲ್ಲಿ ಬೈಕ್​ ಸವಾರನೊಬ್ಬ ಪಾರಾಗಿದ್ದಾನೆ.

    ಇದನ್ನೂ ಓದಿ: ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಟ

    ಈ ಘಟನೆ ಕೇರಳದ ಹೆದ್ದಾರಿಯಲ್ಲಿ ಶನಿವಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?: ಯುವಕನೊಬ್ಬ ತನ್ನ ಬೈಕ್​ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅದರ ಮೇಲೆ ಕುಳಿತಿರುತ್ತಾನೆ. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬರುವ ಜೆಸಿಬಿ ನಿಯಂತ್ರಣ ತಪ್ಪಿ ಯುವಕನತ್ತ ಧಾವಿಸಿ ಬರುತ್ತದೆ. ಅದೇ ವೇಳೆಗೆ ಎದುರಿಗೆ ಬರುವ ಬೊಲೆರೋ ಎಸ್​ಯುವಿ ಕಾರು ಜೆಸಿಬಿಗೆ ಡಿಕ್ಕಿ ಹೊಡೆಯುತ್ತದೆ. ಇಷ್ಟರಲ್ಲಾಗಲೇ ಯುವಕ ಬೈಕ್​ನಿಂದ ಕೆಳಗೆ ಹಾರಿರುತ್ತಾನೆ.

    ಅದೃಷ್ಟವಶಾತ್​ ಬೈಕ್​ ಮೇಲೆ ಕುಳಿತಿದ್ದ ಯುವನಿಗೆ ಏನೂ ಆಗಿಲ್ಲ. ಇನ್ನು ಕಾರಿನಲ್ಲಿದ್ದ ಚಾಲಕನಿಗೂ ಸಹ ಗಾಯಗಳಾಗಿಲ್ಲ. ಆದರೆ, ಜೆಸಿಬಿ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರು ವಶ

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts