More

    ಜ.26ರ ಬಳಿಕ 100ಕ್ಕೂ ಅಧಿಕ ಮಂದಿ ನಾಪತ್ತೆ!; ಪ್ರಕರಣ ಸಂಬಂಧ ಸಮಿತಿ ರಚನೆ

    ನವದೆಹಲಿ: ಗಣರಾಜ್ಯೋತ್ಸವ ದಿನವಾದ ಜ. 26ರ ಬಳಿಕ ರಾಜಧಾನಿಯಲ್ಲಿ ನೂರಕ್ಕೂ ಅಧಿಕ ಮಂದಿ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಹೀಗೆ ದೊಡ್ಡ ಪ್ರಮಾಣದಲ್ಲಿ ನಾಪತ್ತೆ ಆಗಿರುವ ಸಂಬಂಧ ಈಗ ಸಮತಿಯೊಂದನ್ನು ಕೂಡ ರಚಿಸಲಾಗಿದೆ.

    ಹೌದು.. ಜ. 26ರಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ನೂರಕ್ಕೂ ಅಧಿಕ ರೈತರು ನಾಪತ್ತೆ ಆಗಿದ್ದಾರೆ ಎಂದು ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ. ಈ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿರುವ ಸಂಘಟನೆ, ನಾಪತ್ತೆ ಆಗಿರುವವರ ಕುರಿತು ಶೀಘ್ರದಲ್ಲೇ ಮಾಹಿತಿ ಕಲೆ ಹಾಕಿ ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ಕ್ರಮಕ್ಕಾಗಿ ನೀಡಲಾಗುವುದು. ಅಲ್ಲದೆ ನಾಪತ್ತೆ ಪ್ರಕರಣ ಸಂಬಂಧ 40ಕ್ಕೂ ಅಧಿಕ ರೈತ ಸಂಘಟನೆಗಳ ಒಕ್ಕೂಟದ ಪ್ರಮುಖ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದೂ ತಿಳಿಸಿದೆ.

    ಇದನ್ನೂ ಓದಿ: 5 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ 58 ವರ್ಷದ ವ್ಯಕ್ತಿ! ಇದೆಲ್ಲ ದೆವ್ವ ಮಾಡಿಸಿದ್ದು ಎಂದು ಹೇಳಿದ

    ಪ್ರಕರಣ ಸಂಬಂಧ ಫೋನ್ ನಂಬರ್​ವೊಂದನ್ನು ಕೂಡ ಬಹಿರಂಗ ಪಡಿಸಿರುವ ಮೋರ್ಚಾ, ನಾಪತ್ತೆ ಆದವರ ಕುರಿತ ಹೆಸರು ಇತ್ಯಾದಿ ವಿವರ ನೀಡುವಂತೆಯೂ ಕೋರಿದೆ. ಮತ್ತೊಂದೆಡೆ ಸರ್ಕಾರ ಪ್ರತಿಭಟನಾ ಸ್ಥಳಗಳನ್ನು ವಶ ಪಡಿಸಿಕೊಳ್ಳುತ್ತಿದೆ ಹಾಗೂ ಮಾಧ್ಯಮ ಹಾಗೂ ಜನಸಾಮಾನ್ಯರು ಪ್ರತಿಭಟನಾಕಾರರನ್ನು ಸಂಪರ್ಕಿಸದಂತೆ ತಡೆಯಲಾಗುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. (ಏಜೆನ್ಸೀಸ್)

    ಒಂದು ಕೆ.ಜಿ. ಚಿನ್ನಾಭರಣದೊಂದಿಗೆ ಪರಾರಿಯಾದ ‘ವೀರ’ ಸಹೋದರರು!; ಇದು ಜಸ್ಟ್​ ‘ಸ್ಯಾಂಪಲ್​’ ಅಷ್ಟೇ…

    ಹೌದು.. ಅವನೇ ಅಪರಾಧಿ; ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲಿನ 7 ವರ್ಷಗಳ ಹಿಂದಿನ ಹಲ್ಲೆ ಪ್ರಕರಣ, 3 ವರ್ಷಗಳ ಬಳಿಕ ಆರೋಪ ಸಾಬೀತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts