More

    ಹಣ ದೋಚಿದ್ದ ಆರೋಪಿ ಬಂಧನ

    ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಶ್ರೀ ಹೊಸಮಾರಿಗುಡಿ ಮುಂಭಾಗದ ಅಂಡರ್‌ಪಾಸ್ ಬಳಿ ಲೈನ್‌ಸೇಲ್ ಮಾಡುವ ಉಡುಪಿ ಸಂತೆಕಟ್ಟೆ ನಿವಾಸಿ ಉಮೇಶ ಪ್ರಭು ಅವರ ಹಣವಿದ್ದ ಪರ್ಸ್ ದೋಚಿದ್ದ ಆರೋಪಿ, ಕಾಪು ಪೊಲಿಪು ನಿವಾಸಿ ಸಂತೋಷ ಕುಮಾರ್(28) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 1,00,200 ರೂ. ನಗದು, 1 ಮೊಬೈಲ್ ಪೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಅಂಡರ್ ಪಾಸ್ ಬಳಿ 1.25 ಲಕ್ಷ ರೂ. ದೋಚಿದ್ದ

    ಲೈನ್‌ಸೇಲ್ ವೃತ್ತಿಯ ಉಮೇಶ ಪ್ರಭು ಅವರು ಮಾ.2ರಂದು ಲೈನ್‌ಸೇಲ್ ಮಾಡಿ ಅಂಗಡಿಗಳಿಂದ ಸಂಗ್ರಹಿಸಿದ ಹಣದ ಜತೆಗೆ ಕಾಪು ಮಾರ್ಕೆಟ್ ಬಳಿಯಿರುವ ಅಂಗಡಿಗೆ ಸಾಮಾನು ಹಾಕಿದ ಹಣವನ್ನೂ ತನ್ನ ಬ್ಯಾಗ್‌ನಲ್ಲಿ ಹಾಕಿಕೊಂಡು ಕಾಪು ಅಂಡರ್‌ಪಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಮಾರಿಗುಡಿ ಎದುರಿನ ಸರ್ವಿಸ್ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬೈಕ್‌ನಲ್ಲಿ ಬಂದ ಆರೋಪಿ, ಬೈಕ್ ನಿಲ್ಲಿಸಿ 1.25 ಲಕ್ಷ ರೂ. ಮೊತ್ತ ದೋಚಿ ಪರಾರಿಯಾಗಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts