More

    ಗರಿಗೆದರಿದ ಖಾತ್ರಿ ಕಾಮಗಾರಿ

    ಮೊಳಕಾಲ್ಮೂರು: ಲಾಕ್‌ಡೌನ್ ಸಡಿಲಿಕೆಯಿಂದ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳು ಆರಂಭಗೊಂಡಿವೆ.

    ಲಾಕ್‌ಡೌನ್ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಖಾತ್ರಿ ಕೂಲಿ ಕೆಲಸ ಮಾಡಬಹುದೆಂಬ ಸರ್ಕಾರದ ನಿರ್ದೇಶನದಂತೆ ತಾಲೂಕಿನಲ್ಲಿ ಏ.1ರಿಂದ 16 ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದ್ದವು.

    ಈಗ ಚಿತ್ರದುರ್ಗ ಜಿಲ್ಲೆ ಹಸಿರು ವಲಯಕ್ಕೆ ಸೇರಿದ್ದು, ಕಾಮಗಾರಿ ಮತ್ತಷ್ಟು ಚುರುಕು ಪಡೆದುಕೊಂಡಿವೆ. ಅಗತ್ಯತೆ ಅನುಸಾರ ಕೃಷಿ ಹೊಂಡ, ಕೆರೆ ಕಟ್ಟೆಗಳ ಕಾಲುವೆ ಅಭಿವೃದ್ಧಿ, ಬದು ನಿರ್ಮಾಣ ಕಾರ್ಯ ನಡೆಯುತ್ತವೆ ಎಂದು ತಾಪಂ ಇಒ ಪ್ರಕಾಶ್ ತಿಳಿಸಿದ್ದಾರೆ.

    ಮುಂಗಾರು ಮಳೆ ಬರುವ ತನಕ ಯೋಜನೆಯಡಿ ಕೂಲಿ ಕೆಲಸ ಕೊಡಲಾಗುವುದು. ಕೆಲಸ ಮಾಡುವ ವೇಳೆ ಒಂದು ಮೀಟರ್ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts